ನಾಳೆ ಭದ್ರಾವತಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ | HDK

ನಾಳೆ ಭದ್ರಾವತಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ | HDK

ಬೃಹತ್ ಕೈಗಾರಿಗೆ ಮತ್ತು ಉಕ್ಕು ಸಚಿವ ಹೆಚ್ ಡಿ.ಕುಮಾರಸ್ವಾಮಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ನಾಳೆ ಭೇಟಿ ನೀಡಲಿದ್ದಾರೆ.ಕೇಂದ್ರದ ಸಚಿವರಾಗಿ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸುತ್ತಿದ್ದು ವಿಐಎಸ್ ಎಲ್ ಕಾರ್ಮಿಕರ ಮೊಗದಲ್ಲಿ ಖುಷಿ ತಂದಿದೆ.

ಭಾನುವಾರ ಬೆಳಗ್ಗೆ 7 ಗಂಟೆಗೆ ದೆಹಲಿ ಬಿಡುವ ಸಚಿವ ಕುಮಾರ ಸ್ವಾಮಿ ಅವರು ಮಧ್ಯಾಹ್ನ 12-15 ಕ್ಕೆ ಶಿವಮೊಗ್ಗ ಏರ್ ಪೋರ್ಟ್ ತಲುಪಲಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್ ನಿಂದ ಭದ್ರಾವತಿ ವಿಐಎಸ್ ಎಲ್ ಗೆ ತೆರಳಲಿದ್ದಾರೆ.

ಮಧ್ಯಾಹ್ನ 1-30 ರಿಂದ 4 ಗಂಟೆಯ ವರೆಗೆ ವಿಐಎಸ್ ಎಲ್ ಪ್ಲಾಂಟ್ ಗೆ ಭೇಟಿ, ವಿಐಎಸ್ ಎಲ್ ಕಾರ್ಮಿಕರ ಭೇಟಿ, ಅಧಿಕಾರಿಗಳ ಜೊತೆ ರಿವಿವ್ಯೂ ಮೀಟಿಂಗ್ ನಡೆಸಲಿದ್ದಾರೆ. 5 ಗಂಟೆಗೆ ಕಾರ್ಖಾನೆಯಿಂದ ಶಿವಮೊಗ್ಗ ಏರ್ ಪೋರ್ಟ್ ಗೆ ಬರಲಿದ್ದು, ಸಂಜೆ 5-15 ಕ್ಕೆ ಸಚಿವರು ಬೆಂಗಳೂರು ಕಡೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ.

ನೂತನ ಕೇಂದ್ರ ಸರ್ಕಾರ ರಚನೆಯಾಗಿ 20 ದಿನಗಳಲ್ಲಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಆಗಮಿಸುತ್ತಿದ್ದು ಕಾರ್ಖಾನೆ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತಿರುವುದು ಭದ್ರಾವತಿ ಜನರಿಗೆ ಖುಷಿ ತಂದಿದೆ

Leave a Reply

Your email address will not be published. Required fields are marked *