Headlines

Thirthahalli | ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ, ದಾಸ್ತಾನಿಟ್ಟಿದ್ದ ಕಾಳುಮೆಣಸು,ಅಡಿಕೆ ಸೇರಿದಂತೆ ಲಕ್ಷಾಂತರ ರೂ ಹಾನಿ – ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ

Thirthahalli | ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ, ದಾಸ್ತಾನಿಟ್ಟಿದ್ದ ಕಾಳುಮೆಣಸು,ಅಡಿಕೆ ಸೇರಿದಂತೆ ಲಕ್ಷಾಂತರ ರೂ ಹಾನಿ – ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ


ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಪ್ಪಳ್ಳಿ ಸಮೀಪದ ಗಿಣಿಯ ಎಂಬ ಗ್ರಾಮದ ಗುರುಮೂರ್ತಿ ಭಟ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುವಿನ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.


ಮನೆಯಲ್ಲಿ ದಾಸ್ತಾನಿಟ್ಟಿದ್ದ 10 ಮೂಟೆ ಅಡಿಕೆ, 10 ಮೂಟೆ ಕಾಳುಮೆಣಸು,ಹಾಗೂ ಬೈಕ್, ಅಡಿಕೆ ಮಿಷನ್ ಸೇರಿ ಅಂದಾಜು 50 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಮನೆಯ ಎದುರಿಗೆ ಇದ್ದ ಹುಲ್ಲಿನ ಕುತ್ರೆ ಸೇರಿ ಹಲವು ವಸ್ತುಗಳು ಹಾನಿಯಾಗಿದೆ.

ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಮನೆಯ ಮಾಲೀಕನಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.


ಅಗ್ನಿಶಾಮಕ ದಳದವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *