ವೈನ್ ಶಾಪ್ ನಲ್ಲಿ ಯುವಕನ ಬರ್ಬರ ಹತ್ಯೆ -ಮೂವರು ವಶಕ್ಕೆ..!!! | Crime News
ಭದ್ರಾವತಿ : ಇಲ್ಲಿನ ಭದ್ರಾ ವೈನ್ಸ್ ಶಾಪ್ (Wineshop)ನಲ್ಲಿ ವ್ಯಕ್ತಿಯೊಬ್ಬನ ಕೊಲೆ(murder) ಯಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೇಮಂತ್ ಅಲಿಯಾಸ್ 35 ವರ್ಷ ಕರಿ ಚಿಕ್ಕಿಯನ್ನ ಕೊಲೆ ಮಾಡಲಾಗಿದೆ.
ಭದ್ರಾವತಿ ಪಟ್ಟಣ್ಣದ ಭದ್ರಾ ವೈನ್ಸ್ ಸ್ಟೋರ್ನಲ್ಲಿಯೇ ಈ ಘಟನೆ ನಡೆದಿದ್ದು, ಈ ಹಿಂದೆ ನಡೆದಿದ್ದ ಮುಜ್ಜು ಎಂಬಾತ ಕೊಲೆಗೆ ಪತ್ರೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಘಟನೆಯಲ್ಲಿ ನಾಲ್ಕೈದು ಯುವಕರು ಹೇಮಂತ್ ಅಲಿಯಾಸ್ ಕರಿಚಿಕ್ಕಿ ಎಂಬಾತನನ್ನ ಬಿಹೆಚ್ ರಸ್ತೆಯಲ್ಲಿರುವ ಭದ್ರಾ ವೈನ್ಸ್ ನಲ್ಲಿ ಹೊಡೆದು ಹಾಕಿದ್ದಾರೆ.
ಸದ್ಯ ಘಟನೆ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.