ಸಾಗರ : ವಿಧಾನಸಭಾ ಚುನಾವಣೆ ಈ ಬಾರಿ ಕದನ ಕುತೂಹಲವಾಗಿದೆ. ಅದರಲ್ಲೂ ಮಲೆನಾಡಿನ ಕ್ಷೇತ್ರಗಳು ರಣ ರೋಚಕವಾಗಿದೆ. ಅದರಲ್ಲೂ ಸಾಗರದಲ್ಲಿ ಚುನಾವಣೆ ಕಾವು ರಂಗೇರಿದೆ.
ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಬಿಜೆಪಿ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪನವರ ನಡುವೆ ಈ ಬಾರಿ ಸೆಣಸಾಟ ಜೋರಾಗಿದೆ.
ಇನ್ನು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಡೆದ ಆರ್ ಸಿ ಬಿ ಮತ್ತು ರಾಜಸ್ಥಾನದ ಪಂದ್ಯದ ವೇಳೆ ಸಾಗರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರಿನ ಪ್ಲೆ ಕಾರ್ಡ್ ಹಿಡಿದು ಸಾಗರದ ಬಾಳೆಗುಂಡಿ ರಮೇಶ್ ಎಂಬ ಯುವಕ ಈ ಗಮನ ಸೆಳೆದಿದ್ದಾನೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಸಾಗರದ ಸಾರಥಿ ಗೋಪಾಲಕೃಷ್ಣ ಬೇಳೂರು ಎಂಬ ಪ್ಲೆ ಕಾರ್ಡ್ ಹಿಡಿದು ನಿಂತು ಕ್ರಿಕೆಟ್ ಆಟದಲ್ಲಿ ಅಭಿಮಾನಿಯೊಬ್ಬ ರಾಜಕೀಯದ ಗಮನಸೆಳೆದಿದ್ದು ಈಗ ಇದು ಎಲ್ಲೆಡೆ ವೈರಲ್ ಆಗಿದೆ.