ಹೋರಾಟದ ಮೂಲಕ ಬಂದ ನನ್ನನ್ನೇ ಜನ ಸೋಲಿಸಿದ್ದರು – ಈ ಬಾರಿ ನನ್ನನ್ನು ಗೆಲ್ಲಿಸುತ್ತಾರೋ ನೋಡಬೇಕು : ಕಾಗೋಡು ತಿಮ್ಮಪ್ಪ| Kagodu
ಶಿವಮೊಗ್ಗ: ನಾನು ಹೋರಾಟದ ಮೂಲಕ ಅಧಿಕಾರಕ್ಕೆ ಬಂದವನು, ಆದರೆ ಜನ ನನ್ನ ಮೇಲೆ ಕೋಪಗೊಂಡು ಹೋದ ಬಾರಿ ಸೋಲಿಸಿದ್ದರು. ಈ ಬಾರಿ ಜನ ಏನು ಮಾಡುತ್ತಾರೆ ನೋಡೋಣ. ಇದರಿಂದ ನಾನು ಈ ಭಾರಿ ಚುನಾವಣಾ ಆಕಾಂಕ್ಷಿ ಎಂದು ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ಬೇಕಾದವರು ಕೆಲಸ ಮಾಡಬೇಕು, ಪಕ್ಷದ ಕೆಲಸದಲ್ಲಿ ತನ್ನನ್ನು ತೂಡಗಿಸಿಕೊಳ್ಳಬೇಕು. ಆಗ ಆತ ನಾಯಕವಾಗಿ…