WhatsApp Channel Join Now
Telegram Channel Join Now
ಹೆದ್ದಾರಿಪುರ ಗ್ರಾ ಪಂ,ಕಗಚಿಯಲ್ಲಿ ಕಂದಾಯ ಭೂಮಿಯಲ್ಲಿ ರೈತರು ಬೆಳೆ ಬೆಳೆದಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಈಪಿಟಿ ಟ್ರಂಚ್ ಹೊಡೆಯುತಿದ್ದು   ರೈತರು ದೂರವಾಣಿ ಕರೆ ಮೂಲಕ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿರೇಶ್ ಆಲುವಳ್ಳಿ ಯವರಿಗೆ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಬೇಟಿ ನೀಡಿದ ವಿರೇಶ್ ಆಲುವಳ್ಳಿರವರು ಟ್ರಂಚ್ ಹೊಡೆಯುವುದನ್ನು ನಿಲ್ಲಿಸಿದರು..
ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ಸ್ಥಳದಲ್ಲೇ ಕರೆ ಮಾಡಿ ರೆವೆನ್ಯೂ ಜಾಗದಲ್ಲಿ ಬೆಳೆ ಬೆಳೆಯುವ ರೈತರಿಗೆ ಹಕ್ಕುಪತ್ರ ಇಲ್ಲದೇ ಇರುವುದು ನಮ್ಮ ವ್ಯವಸ್ಥೆಯ ತಪ್ಪು ಅವರ ಮೇಲೆ ಅರಣ್ಯ ಇಲಾಖೆಯ ದಬ್ಬಾಳಿಕೆ ಸಹಿಸುವುದಿಲ್ಲ ಎಂದರು.
ರೈತರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆಂದು ಅರಣ್ಯ ಇಲಾಖೆಗೆ ಈ ಸಂದರ್ಭದಲ್ಲಿ ಎಚ್ಚರಿಸಿದರು..

ಈ ಸಂಧರ್ಭದಲ್ಲಿ ರಾಜೇಶ್ ಜೈನ್,ಸಚಿನ್ ಗೌಡ ಇನ್ನಿತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *