ರಿಪ್ಪನ್ಪೇಟೆಯ ಸುರೇಶ್ ಬಾಬು ನಿಧನ
ರಿಪ್ಪನ್ಪೇಟೆಯ ಸುರೇಶ್ ಬಾಬು ನಿಧನ ರಿಪ್ಪನ್ಪೇಟೆ: ಸಮೀಪದ ದೊಡ್ಡಿನಕೊಪ್ಪ ನಿವಾಸಿ ಸುರೇಶ್ ಬಾಬು (67) ಅವರು ಇಂದು ನಿಧನರಾದರು. ಮೂರು ತಿಂಗಳ ಹಿಂದೆ ಪಾಶ್ವವಾಯು (ಸ್ಟ್ರೋಕ್) ಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಜೂನ್ 5ರಂದು (ಶುಕ್ರವಾರ) ರಿಪ್ಪನ್ಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.