ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ
Ripponpete GCC Group youth, led by Ibrahim Yakub Saab, were specially honoured by MLA Belur Gopalakrishna for their outstanding humanitarian and social service to the needy.
ಮಾನವೀಯತೆಯೆಂಬುದು ಕೇವಲ ಮಾತಲ್ಲ, ಅದೊಂದು ನಿರಂತರ ಕಾಯಕ ಎಂಬುದನ್ನು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ರಿಪ್ಪನ್ಪೇಟೆಯ ‘ಜಿಸಿಸಿ ಗ್ರೂಪ್’ (GCC Group) ಯುವಕರ ತಂಡ ಸಾಬೀತುಪಡಿಸಿದೆ. ತಾಯ್ನಾಡಿನಿಂದ ದೂರವಿರುವ ವಿದೇಶದಲ್ಲಿ ಹಗಲಿರುಳು ದುಡಿಯುತ್ತಿದ್ದರೂ, ತಮ್ಮ ಹುಟ್ಟೂರಿನ ಬಡವರ ಕಣ್ಣೊರೆಸುವ ಇವರ ಕಾರ್ಯವೈಖರಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ.
ಈ ಯುವಪಡೆಯ ನೇತೃತ್ವ ವಹಿಸಿರುವ ಅಧ್ಯಕ್ಷರಾದ ಇಬ್ರಾಹಿಂ ಯಾಕೂಬ್ ಸಾಬ್ ಮತ್ತು ಅವರ ತಂಡ ಸಮಾಜ ಸೇವೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಸ್ಥಳೀಯ ಜುಮ್ಮಾ ಮಸೀದಿಗೆ ಅತ್ಯಗತ್ಯವಾಗಿದ್ದ ಆಂಬ್ಯುಲೆನ್ಸ್ ಹಾಗೂ ಜನರೇಟರ್ ಕೊಡುಗೆಯಾಗಿ ನೀಡುವುದರ ಜೊತೆಗೆ, ಬಡ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು , ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮತ್ತು ಸೂರಿಲ್ಲದ ಬಡವರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವಂತಹ ಮಹತ್ಕಾರ್ಯಗಳನ್ನು ಈ ತಂಡ ನಿರಂತರವಾಗಿ ಮಾಡುತ್ತಿದೆ.
ದುಡಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜದ ಒಳಿತಿಗಾಗಿ ಮೀಸಲಿಟ್ಟ ಇವರ ಈ ಭವ್ಯ ಸೇವೆಯನ್ನು ಗುರುತಿಸಿ, ಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಜುಮ್ಮಾ ಮಸೀದಿ ಹಾಗೂ ಸಾರ್ವಜನಿಕರ ಪರವಾಗಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಇಬ್ರಾಹಿಂ ಯಾಕೂಬ್ ಸಾಬ್ ಅವರನ್ನು ತುಂಬು ಹೃದಯದಿಂದ ಸನ್ಮಾನಿಸಿ ಗೌರವಿಸಿದರು. ಊರಿನಿಂದ ದೂರವಿದ್ದರೂ ಊರಿನವರ ಏಳಿಗೆಗೆ ಶ್ರಮಿಸುತ್ತಿರುವ ಈ ಯುವಕರ ಸೇವಾ ಮನೋಭಾವ ಸಮಾಜದ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ.
ಈ ಸಂಧರ್ಭದಲ್ಲಿ ಧರ್ಮಗುರು ತಾಜುದ್ದೀನ್ ತಂಗಳ್ ಅಲ್ ಬುಖಾರಿ , ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ,ಪ್ರಮುಖರಾದ ಅರ್ ಎ ಚಾಬುಸಾಬ್ , ಅಮೀರ್ ಹಂಜಾ , ಆಸೀಫ್ ಭಾಷಾ , ಈದ್ ಮಿಲಾದ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ , ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಗ್ರಾಪಂ ಸದಸ್ಯ ನಿರೂಪ್ಕುಮಾರ್ , ಅಫ಼್ಜಲ್ ಬ್ಯಾರಿ , ಶೇಖಬ್ಬಾ ಹಾಗೂ ಇನ್ನಿತರರು ಇದ್ದರು.
ರಿಪ್ಪನ್ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…
ರಿಪ್ಪನ್ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…
ರಿಪ್ಪನ್ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…
ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್ಪೇಟೆಯಲ್ಲಿ ಎಎಸ್ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…
ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್ನನ್ನು ಬಂಧಿಸಿದ ಪೊಲೀಸರು Bhadravathi police dramatically…