ತಂದೆಯ ಪ್ರಾಣ ಉಳಿಸಿದ 9 ವರ್ಷದ ರಿಯಲ್ ಹೀರೋ: ಬಾಲಕ ನಂದನ್ ಸಾಹಸಕ್ಕೆ ತಹಶೀಲ್ದಾರ್ ಸಲಾಮ್!
A 9-year-old boy, Nandan from Goragodu in Hosanagara taluk, saved his father’s life by alerting villagers after he was swept away in a stream. Tahsildar Bharath Raj honoured the young hero for his extraordinary courage and presence of mind.
ಹೊಸನಗರ: ಕೇವಲ 9 ವರ್ಷದ ಬಾಲಕನೊಬ್ಬ ತನ್ನ ಸಮಯಪ್ರಜ್ಞೆ ಹಾಗೂ ಅಪ್ರತಿಮ ಧೈರ್ಯದಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆಯನ್ನು ರಕ್ಷಿಸಿ ‘ರಿಯಲ್ ಹೀರೋ’ ಎನಿಸಿಕೊಂಡಿದ್ದಾನೆ. ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ ನಂದನ್ ಎಂಬ ಬಾಲಕನೇ ಈ ಅಪ್ರತಿಮ ಸಾಹಸ ಮೆರೆದವನು. ಈತನ ಕಾರ್ಯಕ್ಕೆ ಇದೀಗ ಹೊಸನಗರ ತಹಶೀಲ್ದಾರ್ ಭರತ್ ರಾಜ್ ಸೇರಿದಂತೆ ಇಡೀ ಸಮಾಜವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ನಂದನ್ ಮತ್ತು ಆತನ ತಂದೆ ಚಂದ್ರು ಅವರು ಗೊರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಕಾಣಿಸಿಕೊಂಡು, ಕಾಲು ಜಾರಿ ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಸುಮಾರು 2 ಕಿಲೋಮೀಟರ್ಗಳಷ್ಟು ದೂರ ಕೊಚ್ಚಿಕೊಂಡು ಹೋಗಿದ್ದಾರೆ.
ತನ್ನ ಕಣ್ಣೆದುರೇ ತಂದೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡರೂ ಎದೆಗುಂದದ ಬಾಲಕ ನಂದನ್, ನದಿ ದಡದ ಗುಂಟ 2 ಕಿಲೋಮೀಟರ್ವರೆಗೆ ಓಡುತ್ತಲೇ ಹಿಂಬಾಲಿಸಿದ್ದಾನೆ. ನಂತರ ಸಮೀಪದ ಮನೆಗಳಿಗೆ ಓಡಿಹೋಗಿ, “ನನ್ನ ತಂದೆ ಹೊಳೆಯಲ್ಲಿ ತೇಲಿ ಹೋಗುತ್ತಿದ್ದಾರೆ, ದಯವಿಟ್ಟು ಬಂದು ಕಾಪಾಡಿ” ಎಂದು ಸ್ಥಳೀಯರ ನೆರವು ಕೋರಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದರು. ಅದೇ ಹೊತ್ತಿಗೆ ನೀರಿನಲ್ಲಿ ತೇಲುತ್ತಿದ್ದ ತಂದೆಯ ಜರ್ಕಿನ್ ಅನ್ನು ಗುರುತಿಸಿದ ನಂದನ್, ತಂದೆ ಅದೇ ಸ್ಥಳದಲ್ಲಿ ಇರಬಹುದು ಎಂದು ನಿಖರವಾಗಿ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ಥಳೀಯರು ಚಂದ್ರು ಅವರನ್ನು ನೀರಿನಿಂದ ಮೇಲೆತ್ತಿ, ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಈ ಸಾಹಸದ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರು ಬಾಲಕ ನಂದನ್ ಹಾಗೂ ಆತನ ಪೋಷಕರನ್ನು ತಮ್ಮ ಕಚೇರಿಗೆ ಆಹ್ವಾನಿಸಿ, ಬಾಲಕನ ಬೆನ್ನು ತಟ್ಟಿ ತಾಲೂಕ್ ಆಡಳಿತದ ವತಿಯಿಂದ ಸನ್ಮಾನಿಸಿದರು. ಅಲ್ಲದೆ, ಹೊಸನಗರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ, ವಿಶ್ವಕರ್ಮ ಸಮಾಜ ವತಿಯಿಂದಲೂ ಈ ಪುಟಾಣಿ ಜೀವ ರಕ್ಷಕನಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗೌತಮ್ ಆಚಾರ್ಯ, ವಿಎಚ್ಪಿ ಸಂಚಾಲಕ ಸುದೀಂದ್ರ ಪಂಡಿತ್, ಪತ್ರಕರ್ತ ನಗರ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಗೋರಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಈ ಬಾಲಕನಿಗೆ ಸರ್ಕಾರದಿಂದ ಶೌರ್ಯ ಪ್ರಶಸ್ತಿ ಹಾಗೂ ಮುಂದಿನ ಶಿಕ್ಷಣಕ್ಕಾಗಿ ವಿಶೇಷ ಸಹಾಯಧನ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು Sagar Tahsildar Dr. Prathibha…
ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು Thieves broke…
ಮನೆಯಲ್ಲಿ ಒಬ್ಬರೇ ಇದ್ದ ಮಹಿಳೆ ಮೇಲೆ ಹಲ್ಲೆ; ಬಂಗಾರದ ಸರ ಕಿತ್ತುಕೊಂಡು ದುಷ್ಕರ್ಮಿ ಪರಾರಿ A woman was allegedly…
30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ Teacher Ambika…
ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…
ರಿಪ್ಪನ್ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…