Miscreants vandalized a newly purchased Swift car by smashing its front and rear windows in Sharavathi Nagar, Shivamogga. The entire act was captured on CCTV, and a case has been registered at Doddapete Police Station.
ಶಿವಮೊಗ್ಗ: ಶರಾವತಿ ನಗರದ ಹಂದಿ ಗೊಲ್ಲರ ಕ್ಯಾಂಪ್ನಲ್ಲಿ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಕಿಡಿಗೇಡಿಗಳಿಬ್ಬರು ಪುಡಿ ಪುಡಿ ಮಾಡಿ ಕಾರನ್ನು ಜಖಂಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶರಾವತಿ ನಗರದ ಲೋಕೇಶ್ ಅವರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಸ್ವಿಫ್ಟ್ ಕಾರನ್ನು ಖರೀದಿಸಿದ್ದರು. ಲೋಕೇಶ್ ಅವರ ಅಕ್ಕನ ಅನಾರೋಗ್ಯ ಸಂಬಂಧ ಆಗಾಗ್ಗೆ ಮಣಿಪಾಲ್ಗೆ ಹೋಗಬೇಕಾದ ಅನಿವಾರ್ಯತೆಗೆ ಕಾರನ್ನು ಖರೀದಿಸಿದ್ದರು. ತಮ್ಮ ಮನೆಯ ಮುಂದೆ ಒಂದು ಶೆಡ್ ಅನ್ನು ಮಾಡಿ ಅದರಲ್ಲಿ ಮೂರು ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಕಿಡಿಗೇಡಿಗಳಿಬ್ಬರು ಹೊಸಮನೆ ಕಡೆಯಿಂದ ಬೈಕ್ನಲ್ಲಿ ಬಂದು ಬೈಕ್ ಅನ್ನು ದೂರದಲ್ಲಿ ನಿಲ್ಲಿಸಿದ್ದು, ಇದರಲ್ಲಿ ಓರ್ವ ಮಾತ್ರ ಕಾರಿನ ಬಳಿ ಬಂದು ಕಬ್ಬಿಣದ ವಸ್ತುವಿಂದ ಕಾರಿನ ಹಿಂದಿನ ಹಾಗೂ ಮುಂದಿನ ಗಾಜನ್ನು ಪುಡಿ ಮಾಡಿದ್ದಾನೆ. ನಂತರ ಕಾರಿನ ಡೋರ್ ಜಖಂ ಮಾಡಿದ್ದಾರೆ.
ಕಾರನ್ನು ಜಖಂ ಮಾಡಿದ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ವಿಷಯ ತಿಳಿಯುತ್ತಿದ್ದಂತೆಯೇ ಕಾರಿನ ಮಾಲೀಕರು ಬಂದು ನೋಡಿದಾಗ ಕಾರಿನ ಗಾಜು ಪುಡಿ ಪುಡಿಯಾಗಿತ್ತು. ತಕ್ಷಣ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದ್ದಾರೆ. ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಲೋಕೇಶ್ ಮಾತನಾಡಿ, ನಿನ್ನೆ 11:45ರ ಸುಮಾರಿಗೆ ಇಬ್ಬರು ಬೈಕ್ನಲ್ಲಿ ಬಂದಿದ್ದಾರೆ. ಇದರಲ್ಲಿ ಓರ್ವ ಕಾರಿನ ಬಳಿ ಬಂದು ಮಚ್ಚಿನ ರೀತಿಯಲ್ಲಿರುವ ಕಬ್ಬಿಣದ ವಸ್ತುವಿನಿಂದ ಕಾರಿನ ಹಿಂದಿನ ಹಾಗೂ ಮುಂದಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಮ್ಮ ಕಾರಿನ ಗಾಜು ಪುಡಿ ಪುಡಿ ಮಾಡಿದವನು ಗಾಂಜಾ ಅಮಲಿನಲ್ಲಿ ಮಾಡಿದನೋ ಅಥವಾ ಬೇರೆ ಯಾವ ದೃಷ್ಟಿಯಿಂದ ಮಾಡದನೋ ಗೂತ್ತಿಲ್ಲ. ಆದರೆ ಯಾರೇ ಕಾರಿನ ಗಾಜು ಪುಡಿ ಮಾಡಿ, ಕಾರನ್ನು ಜಖಂ ಮಾಡಿದ್ದರೂ ಅವರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕೆಂಚನಾಲದಲ್ಲಿ ಮನೆ ಮೇಲೆ ಉರುಳಿದ ತೆಂಗಿನ ಮರ : ತಪ್ಪಿದ ಭಾರಿ ಅನಾಹುತ - ಸಂತ್ರಸ್ತ ಕುಟುಂಬಕ್ಕೆ ಶಾಸಕರ ಸೂಚನೆಯಂತೆ…
ತೋಟದ ಮಧ್ಯೆ ಅಕ್ರಮ ಗಾಂಜಾ ಬೆಳೆ: ಲಕ್ಷಾಂತರ ರೂ ಮೌಲ್ಯದ ಗಾಂಜಾ ಗಿಡಗಳು ವಶ, ಇಬ್ಬರ ಬಂಧನ Anandapura Police…
ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಮಹಿಳೆಯಿಂದ ಚಿನ್ನದ ಸರ ದೋಚಿದ್ದ ಆರೋಪ - ಇಬ್ಬರ ಬಂಧನ Two interstate thieves from…
ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ Independence Day celebrations were held with patriotic fervour at…
ರಿಪ್ಪನ್ ಪೇಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಮಳೆಯ ನಡುವೆಯೂ ಶಾಲಾ ಮಕ್ಕಳ ಪಥಸಂಚಲನ Ripponpete celebrated the 80th Independence…
ಗುಟ್ಕಾ- ಪಾನ್ ಮಸಾಲಾ ಬ್ಯಾನ್ಗೆ ಬಿಗ್ ಟ್ವಿಸ್ಟ್: ಎರಡೇ ದಿನಕ್ಕೆ ಆದೇಶ ವಾಪಸ್! Karnataka government reportedly orders withdrawal…