ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್‌ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ ಕಟ್ಟಿಕೊಳ್ಳಬಹುದು?” ಎಂಬ ಹಂಬಲ ಮಾತ್ರ ಕಾಯುತ್ತಿದೆ ಎನ್ನುವುದು ಹೃದಯ ಕಲುಕಿಸುವ ಸತ್ಯ.

ಕರ್ನಾಟಕದಿಂದ ಆಯ್ಕೆಯಾದ ಮೂವರು ಆಟಗಾರ್ತಿಯರಲ್ಲಿ ಒಬ್ಬರಾದ ಕಾವ್ಯಾ, ತಂಡದ ಆಲ್–ರೌಂಡರ್ ಆಗಿ ನಿರಂತರ ಶ್ರಮಿಸಿ, ದೇಶದ ಗೌರವಕ್ಕೆ ಬಲ ನೀಡಿದಳು. ಕ್ರೀಡಾಂಗಣದಲ್ಲಿ ಆಕೆಯ ಒಳಗಿನ ಶಕ್ತಿ ಯಾರಿಗೂ ಕಾಣದರೂ, ಮನೆಯಲ್ಲಿ ಅವಳ ಎದುರು ಬರುವ ಹೋರಾಟಗಳನ್ನು ಹೊರಜಗತ್ತು ಅರಿಯುವುದೇ ಇಲ್ಲ. ವೇದಿಕೆಗೇರಿಸಿ ಸನ್ಮಾನಿಸುವ ಸಾವಿರ ಕೈಗಳು ಸಿಕ್ಕರೂ, ಬದುಕಿಗೆ ಬೇಕಿರುವ ಕೈಹಿಡಿತ ಕಾವ್ಯಾಳಿಗೆ ಇನ್ನೂ ಯಾರಿಂದಲೂ ಸಿಕ್ಕಿಲ್ಲ ಎಂಬುದು ವ್ಯಥೆ.

ಕಾವ್ಯಾಳ ತಂದೆ ವೆಂಕಟೇಶ್ ಆಚಾರ್—ಬಡತನದ ನಡುವೆಯೂ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿ, ಕುಟುಂಬವನ್ನು ನಗೆಯಿಲ್ಲದೆ ಬೆಳೆಸಿದ ಮಹಾನ್ ವ್ಯಕ್ತಿ. ಆಶ್ರಯ ಯೋಜನೆಯಡಿ ಮನೆ ಕಟ್ಟಲೆಂದು 12 ವರ್ಷಗಳ ಹಿಂದೇ ಇಟ್ಟ ಮೊದಲ ಗುದ್ದಲಿಯ ಶಬ್ದವೂ ಇಂದಿಗೂ ಅವರ ಕಿವಿಯಲ್ಲಿ ಮರುಕಳಿಸುತ್ತಿದೆ. ಆದರೆ ಆ ಗುದ್ದಲಿಯ ನಂತರ ಮನೆ ಗೋಡೆಗಳು ಬೆಳೆಯಬೇಕಾಗಿದ್ದ ಜಾಗದಲ್ಲಿ ಇಂದು ಮಣ್ಣು, ಕಲ್ಲು ಮತ್ತು ಕನಸುಗಳ ಅವಶೇಷಗಳೇ ಉಳಿದಿವೆ.ಮನೆ ಇನ್ನೂ ಪೂರ್ಣಗೊಳ್ಳದೆ ಪಕ್ಕದಲ್ಲಿಯೇ ಟಾರ್ಪಲ್ ಹೊದಿಸಿದ ಶೆಡ್‌ನಲ್ಲಿ ಮಳೆಯಾದರೂ, ಗಾಳಿಯಾದರೂ, ಚಳಿಯಾಗಾದರೂ ಈ ಕುಟುಂಬ ಮೌನವಾಗಿ ಬದುಕನ್ನು ತಾಳುತ್ತಿದೆ.

ವಿಶ್ವ ಜಯಿಸಿದ ಮಗಳಿಗೆ “ನಿನ್ನ ಮನೆ ಎಲ್ಲಿದೆ?” ಎಂದು ಕೇಳಬೇಕಾದರೆ, ಅವಳು ತಲೆತಗ್ಗಿಸಬೇಕಾಗುವ ಪರಿಸ್ಥಿತಿ ನಮ್ಮ ಸಮಾಜದ ಹೆಮ್ಮೆಯನ್ನು ಪ್ರಶ್ನಿಸುತ್ತದೆ.

ಒಂದೆಡೆ ಸನ್ಮಾನಗಳ ಬೆಳಕು—ಮತ್ತೊಂದೆಡೆ ಶೆಡ್‌ನಲ್ಲಿನ ಕತ್ತಲು…

ಒಂದೆಡೆ ಮೆರವಣಿಗೆ—ಮತ್ತೊಂದೆಡೆ ಮಳೆಗಾಲದ ಸೋರಿಕೆ…

ಒಂದೆಡೆ ಪ್ರಶಂಸೆ—ಮತ್ತೊಂದೆಡೆ ಬದುಕಿಗೆ ಹಣದ ಕೊರತೆ…

ಈ ವೈಪರಿತ್ಯಗಳ ನಡುವೆ ಕಾವ್ಯಾಳ ಕುಟುಂಬದ ಹೃದಯ ಬಿರುಕು “ನಮಗೆ ಬೇಕಾಗಿರುವುದು ಗೌರವ ಅಲ್ಲ… ಸಹಾಯ” ಎಂದು ಹೇಳುತ್ತಿರುವಂತೆ ಭಾಸವಾಗುತ್ತದೆ.

ಮನೆ ಕಟ್ಟುತ್ತಿರುವ ಜಾಗಕ್ಕೂ ಅರಣ್ಯ ಹಕ್ಕು ಸಮಿತಿಯಿಂದ ಭೂ ಹಕ್ಕು ಪಡೆಯಲು ಹೋರಾಟವೇ ಇನ್ನೊಂದು ನೋವು , ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವವನ್ನು ಎತ್ತಿದ ಹುಡುಗಿ, ತನ್ನ ಮನೆಯ ಗೂಡನ್ನು ಕಟ್ಟಿಕೊಳ್ಳಲು ಹೋರಾಡಬೇಕಾದ್ರೆ… ನಾವು ಮಾಡಿರುವ ಸನ್ಮಾನಗಳ ಅರ್ಥವೇನು?

ಕಾವ್ಯಾಳ ಕಥೆ ಕೇವಲ ಒಂದು ಕುಟುಂಬದ ಕಥೆಯಲ್ಲ—ಇದು ನಮ್ಮ ಮನಸನ್ನು ಪ್ರಶ್ನಿಸಿಕೊಳ್ಳುವ ಸಮಾಜದ ಕರೆಯಾಗಿದೆ.ಈ ಚಾಂಪಿಯನ್‌ಗೆ ಕೈ ತಟ್ಟಿ ಅಭಿನಂದಿಸಿದೆವು… ಈಗ ಕೈಹಿಡಿದು ಬದುಕು ಕಟ್ಟಿಕೊಡುವ ಸಮಯ.

ಕಾವ್ಯಾಳಿಗೆ ನೆರವಾಗಲು ಬಯಸುವವರು ಕೆಳಗಿನ ಖಾತೆ ಸಂಖ್ಯೆ ಅಥವಾ ಕ್ಯೂಆರ್ ಕೋಡ್ ಮೂಲಕ ಸಹಾಯ ಮಾಡಬಹುದು.ಒಂದು ಸನ್ಮಾನ ಕ್ಷಣಿಕ… ಆದರೆ ನಿಮ್ಮ ನೆರವು ಅವಳ ಭವಿಷ್ಯವನ್ನು ಬದಲಿಸಬಲ್ಲದು.

ಬರಹ – ರಫ಼ಿ ರಿಪ್ಪನ್ ಪೇಟೆ
ಧ್ವನಿ – ವಿನಯ್ ಪುರದಾಳು

 ಕಾವ್ಯಾ ವಿ ಅಕೌಂಟ್ ನಂಬರ್ – 0534108022637

IFSC CODE – CNRB0000534

ಸಂಪರ್ಕಿಸಿ : 9900963914 (ವೆಂಕಟೇಶ್ ಆಚಾರ್ , ತಂದೆ )

80957 80370 (ಸುಧೀಂದ್ರ ಪೂಜಾರಿ , ಗ್ರಾಪಂ ಉಪಾಧ್ಯಕ್ಷರು)

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…

11 hours ago

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…

11 hours ago

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…

12 hours ago

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್ ಕತ್ತರಿಸಬೇಕೋ?

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…

14 hours ago

ಈದ್ ಮಿಲಾದ್ ಹಬ್ಬ ಶಾಂತಿಯುತ ಆಚರಣೆಗೆ ಪೊಲೀಸ್ ಸೂಚನೆ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ

ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…

18 hours ago

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…

18 hours ago