
ಶಾಲೆಯ ನೀರಿನ ಟ್ಯಾಂಕ್ಗೆ ಕಳೆನಾಶಕ ಮಿಶ್ರಣ, ನಾಲ್ವರು ಮಕ್ಕಳು ಆಸ್ಪತ್ರೆಗೆ -ಹೂವಿನಕೋಣೆಯಲ್ಲಿ ಕಿಡಿಗೇಡಿಗಳ ಹೇಯ ಕೃತ್ಯ
ಶಾಲೆಯ ನೀರಿನ ಟ್ಯಾಂಕ್ಗೆ ಕಳೆನಾಶಕ ಮಿಶ್ರಣ, ನಾಲ್ವರು ಮಕ್ಕಳು ಆಸ್ಪತ್ರೆಗೆ -ಹೂವಿನಕೋಣೆಯಲ್ಲಿ ಕಿಡಿಗೇಡಿಗಳ ಹೇಯ ಕೃತ್ಯ ಹೊಸನಗರ ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಹಾಕಿದ ಕ್ರೂರ ಕೃತ್ಯದಿಂದಾಗಿ ಮಕ್ಕಳ ಜೀವ ಅಪಾಯಕ್ಕೆ ಸಿಲುಕಿಸಿದೆ. ಶಾಲೆಯ ನೀರಿನ ಟ್ಯಾಂಕ್ಗೆ ಅಪರಿಚಿತ ವ್ಯಕ್ತಿಗಳು ಕಳೆನಾಶಕವನ್ನು ಹಾಕಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇದ್ದು ಎರಡಕ್ಕೂ ಕಿಡಿಗೇಡಿಗಳು ಕಳೆನಾಶಕ ಮಿಶ್ರಣ ಮಾಡಿದ್ದಾರೆ ಒಂದರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಳೆ…