
ಆಯನೂರು – ರಿಪ್ಪನ್ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ !
ಶಿವಮೊಗ್ಗ – ರಿಪ್ಪನ್ಪೇಟೆ ರೈಲ್ವೆ ಮಾರ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಕಾರ್ಯಗಳ ಹಿನ್ನೆಲೆ ಅ.23 ರಿಂದ 26ರವರೆಗೆ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಂಚಾರ ನಿಷೇಧ ಅವಧಿ
▪ ಅ.23 ಬೆಳಿಗ್ಗೆ 7 ಗಂಟೆಯಿಂದ – ಅ.24 ಸಂಜೆ 6 ಗಂಟೆಯವರೆಗೆ
ಅರಸಾಳು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ → ಸಂಚಾರ ಬಂದ್
▪ ಅ.25 ಬೆಳಿಗ್ಗೆ 7 ಗಂಟೆಯಿಂದ – ಅ.26 ಸಂಜೆ 6 ಗಂಟೆಯವರೆಗೆ
ಸೂಡೂರು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ → ಸಂಚಾರ ಬಂದ್
✅ ಬದಲಿ ಮಾರ್ಗಗಳು
ಅ.23 ಬೆಳಿಗ್ಗೆ 07 ರಿಂದ ಅ.24 ಸಂಜೆ 06 ರವರೆಗೆ
ಮಾರ್ಗ 1:
ರಿಪ್ಪನ್ಪೇಟೆ → ಮೂಗೂಡ್ತಿ → ಬಸವಾಪುರ → 5 MS → ಆಯನೂರು → ಶಿವಮೊಗ್ಗ
ಮಾರ್ಗ 2:
ರಿಪ್ಪನ್ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ
—
ಅ.25 ಬೆಳಿಗ್ಗೆ 07 ರಿಂದ ಅ.26 ಸಂಜೆ 06 ರವರೆಗೆ
ಮಾರ್ಗ 1:
ರಿಪ್ಪನ್ಪೇಟೆ → ಸೂಡೂರು → ಶೆಟ್ಟಿಕೆರೆ → ಚೊರಡಿ → ಆಯನೂರು
ಮಾರ್ಗ 2:
ರಿಪ್ಪನ್ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ
ಮಾರ್ಗ 3:
ಆಯನೂರು → 5 MS → ಬಸವಾಪುರ → 9 MS → ಅರಸಾಳು → ರಿಪ್ಪನ್ಪೇಟೆ
ಸಾರ್ವಜನಿಕರು ಹಾಗೂ ವಾಹನ ಸವಾರರು ಸೂಚಿಸಿರುವ ಬದಲಿ ಮಾರ್ಗಗಳನ್ನು ನಿರ್ದಿಷ್ಟ ದಿನಾಂಕಗಳಲ್ಲಿ ಮಾತ್ರ ಬಳಸುವಂತೆ ಹಾಗೂ ಇಲಾಖೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.




