ಸಿನಿಮೀಯ ಶೈಲಿಯಲ್ಲಿದೆ ಆಗುಂಬೆ ಮರ್ಡರ್ ಮಿಸ್ಟರಿ – ಸ್ನೇಹಿತನಿಂದಲೇ ಕೊಲೆಯಾದಳ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ..!!!

ಸಿನಿಮೀಯ ಶೈಲಿಯಲ್ಲಿದೆ ಆಗುಂಬೆ ಮರ್ಡರ್ ಮಿಸ್ಟರಿ – ಸ್ನೇಹಿತನಿಂದಲೇ ಕೊಲೆಯಾದಳ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ..!!!ಪೊಲೀಸರು ರಣರೋಚಕ ಕೇಸ್ ಪತ್ತೆಹಚ್ಚಿದ್ದು ಹೇಗೆ!?

ತೀರ್ಥಹಳ್ಳಿ : ಅವರಿಬ್ಬರು ಪರಸ್ಪರ ಪರಿಚಯಸ್ಥರು ಮಾತ್ರವಲ್ಲದೆ ಸಂಬಂಧಿಕರು ಕೂಡ ಆಗಿದ್ದರು. ಅವರ ನಡುವೆ ಸಹಜವಾದ ಸಲಿಗೆ ಕೂಡ ಇತ್ತು. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಅವರಿಬ್ಬರ ನಡುವೆ ಕಂದಕವನ್ನು ಸೃಷ್ಟಿ ಮಾಡಿದ್ದಲ್ಲದೆ ಈ ಕಂದಕವೇ ಇದೀಗ ಒಬ್ಬರ ಜೀವ ತೆಗೆಯುವಂತೆ ಮಾಡಿದೆ. ಇನ್ನು ಪೊಲೀಸರ ಅತಿಥಿ ಆಗಿರುವ ಆತ ಸಾಮಾನ್ಯ ಆಸಾಮಿಯನಲ್ಲ, ಕೊಲೆ ಮಾಡಿದರು ಮೂರ್ನಾಲ್ಕು ದಿನಗಳ ಕಾಲ ಪೊಲೀಸರ ಜೊತೆಗೆ ಅಮಾಯಕನ ರೀತಿ ಓಡಾಡಿಕೊಂಡಿದ್ದ ಆತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ ಜೂನ್ 29ರಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಸಿಮನೆ ಗ್ರಾಮದ ಪೂಜಾ ಎ.ಕೆ ಎಂಬ ವಿವಾಹಿತ ಮಹಿಳೆಯ ಕೆಲಸಕ್ಕೆಂದು ತೆರಳಿದವರು ವಾಪಸ್ ಆಗಿರಲಿಲ್ಲ. ಸಾಕಷ್ಟು ಕಡೆ ಶೋಧ ನಡೆಸಿದ ಕುಟುಂಸ್ಥರು ಆಗುಂಬೆ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.‌

ಪ್ರಕರಣ ದಾಖಲಾದ ಬಳಿಕ ಒಂದು ವಾರಗಳ ಕಾಲ ನಿರಂತರ ಶೋಧ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಸ್ವತಃ ಆರೋಪಿಯೇ ಮುರ್ನಾಲ್ಕು ದಿನಗಳ ಕಾಲ ಪೊಲೀಸರ ಜೊತೆಗೆ ತನಿಖೆಗೆ ಸಹಾಯ ಮಾಡುತ್ತಿದ್ದರಿಂದ ಸಣ್ಣ ಅನುಮಾನವೂ ಪೊಲೀಸರಿಗೆ ಬಂದಿರಲಿಲ್ಲ. ಹೀಗೆ ತಲೆ ಕೆಡಿಸಿಕೊಂಡು ತನಿಖೆ ಮುಂದುವರೆಸಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಕನ್ನಡದ ದೃಶ್ಯಂ ಚಲನಚಿತ್ರದ ರೀತಿಯಲ್ಲಿ ಪ್ಲಾನ್ ಮಾಡಿದ್ದ ಆ ಅರೋಪಿ ಮಣಿಕಂಠ.

ಪೊಲೀಸರು ಶೋಧಕಾರ್ಯ ನಡೆಸಿದರು ವಾರ ಕಳೆದರು ಆಕೆಯ ಸುಳಿವೆ ಸಿಕ್ಕಿರಲಿಲ್ಲ.  ಈ ಸಂಬಂಧ ಆಕೆಗೆ ಸಂಬಂಧಪಟ್ಟವರ ವಿಚಾರಣೆಯನ್ನ ಕೂಡ ಪೊಲೀಸರು ನಡೆಸಿದ್ದು ಆಯಿತು. ಆದರೆ ಪೊಲೀಸರ ಜೊತೆಗೆ ಇದ್ದ ಮಣಿಕಂಟನಿಗೆ ಪೊಲೀಸರ ಚಲನವಲನಗಳ ಬಗ್ಗೆ ತಿಳಿಯುತ್ತಿತ್ತು. ಕೊಲೆ ಮಾಡಿದ ಒಂದು ಗಂಟೆ ಒಳಗೆ ತನ್ನ ಜಾಗ ಬದಲಾಯಿಸಿ ಎಂದಿನಂತೆ ಕೆಲಸಕ್ಕೆ ಹೋಗಿ ಸ್ನೇಹಿತರ ಜೊತೆ ಹೆಬ್ರಿಗೂ ಆತ ಹೋಗಿದ್ದ.

ಇನ್ನು ಕೊಲೆ ಮಾಡಿ ಆ ದಟ್ಟ ಅರಣ್ಯ ಮಧ್ಯೆ ಬಾಡಿಯನ್ನು ಎಸೆದು ಏನು ಗೊತ್ತಿಲ್ಲದ ಹಾಗೆ ಪೊಲೀಸರಿಗೆ ಒಂದು ಕೆಂಪು ಕಾರಿನಲ್ಲಿ ಇದ್ದ ಯಾರದ್ದೋ ಜೊತೆಯಲ್ಲಿ ಇದ್ದ ಬಗ್ಗೆ ಸುಳ್ಳು ಕಥೆಯನ್ನು ಕಟ್ಟಿ ಪೊಲಿಸರಿಗೆ ಯಾಮಾರಿಸಲು ಹೋದ. ಆದರೆ ಪೊಲೀಸರು ಮಾತ್ರ ಎಲ್ಲ ಆಯಾಮಗಳಲ್ಲೂ ತನಿಖೆ ಆಗಾಗಲೇ ಆರಂಭ ಮಾಡಿದ್ದರು. ಈತನ ಮೇಲೆ ಯಾವದಕ್ಕು ಒಂದು ಕಣ್ಣು ಇರಲಿ ಎಂದು ಗಮನ ಇಟ್ಟಿದ್ದರು. ಒಂದು ಸಿಡಿಆರ್ ನಿಂದ ಈ ಮಣಿಕಂಠನ ಎಲ್ಲ ಪ್ಲಾನ್ ಉಲ್ಟಾ ಆಗುವಂತೆ ಮಾಡಿತು.

ಇಷ್ಟು ದಿನ ಪೊಲೀಸರಿಗೆ ಯಾಮಾರಿಸಲು ಹೋಗಿದನ ಕರೆದು ಬೆಂಡ್ ಎತ್ತಿದ್ದಾಗ ಕನ್ನಡದ ದೃಶ್ಯ ಸಿನಿಮಾ ಕಥೆ ಹೋಲುವ ಮರ್ಡರ್ ಮಿಸ್ಟ್ರಿ ಕಥೆಯಂತೆ ಆಯಿತು. ಮೊದ ಮೊದಲು ಅಮಾಕನ ಹಾಗೆ ಇದ್ದ ಆತ, ತನ್ನ ಹಾಗೂ ಕೊಲೆಯಾದ ವಿವಾಹಿತೆ ಪೂಜಾಗೂ ಇದ್ದ ಹಣಕಾಸಿನ ಸಂಬಂಧಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ.

ಮಣಿಕಂಠ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲ್ಲೇ ಎಲ್ಲ ರೀತಿಯಿಂದಲೂ ಪ್ಲಾನ್ ಮಾಡಿಕೊಂಡು ಬಂದಿದ್ದ ಅನಿಸುತ್ತದೆ. ಯಾಕೆಂದರೆ ಆತ ತಾನೂ ಆಕೆಗೆ ನೀಡಿದ್ದ 40 ಸಾವಿರ ಹಣ ಕೊಡುವಂತೆ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಎಂದು ಹೇಳಿದ್ದ.  ನಂತರ ಆತನೆ ಮೊಬೈಲ್ ಆಫ್ ಮಾಡಿ ನಂತರ ಚಾರ್ಜ್ ಹಾಕಿದ ಹಾಗೆ ಮಾಡಿ ಕೊಲೆ‌ ಮಾಡಿದ ನಂತರ ಮತ್ತೆ ಆಕೆ ಮೊಬೈಲ್ ಗೆ ದುಡ್ಡು ನೀಡುವಂತೆ ಮೆಸೇಜ್ ಹಾಕಿದ್ದ ಇದು ಪೊಲೀಸರಿಗೂ ಹಾದಿ ತಪ್ಪುವಂತೆ ಮಾಡಿತ್ತು. ನಂತರ ಸಿಡಿಆರ್ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಮಣಿಕಂಠನನ್ನು ಪ್ರಶ್ನೆ ಮಾಡಿದ್ದಾರೆ ಆಗ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಕೊಲೆ ಮಾಡಿ ಶವ ಎಸೆದ ಜಾಗದ ಬಗ್ಗೆ ತಿಳಿಸುತ್ತಾನೆ ಈ ಮಣಿಕಂಠ.

ಒಟ್ಟಾರೆ ದೃಶ್ಯ ಚಿತ್ರವನ್ನು ಹೋಲುವ ಹಾಗಿರುವ ಪೂಜಾ ಕೊಲೆ ಕೇಸ್ ಅನ್ನು ಪೊಲೀಸರು ಬೇಧಿಸಿದ್ದಾರೆ. ಕೊಲೆ ಆರೋಪಿಯನ್ನು ಸ್ಥಳ ಮಹಾಜರು ನಡೆಸಿ ಕೃಷ್ಣ ಜನ್ಮ ಸ್ಥಾನಕ್ಕೆ ಕಳುಹಿಸಿದ್ದಾರೆ. ತನ್ನ ಸಂಬಂಧಿಕನಿಂದಲೇ ಕೊಲೆಯಾಗಿ ಮಸಣ ಸೇರಿದ ಪೂಜಾ ಪೋಷಕರ ಆಕ್ರಂದ್ರನ ಮುಗಿಲು ಮುಟ್ಟಿದೆ. ಪೂಜಾ ಸಂಬಂಧಿಕರು ಆತನಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಅದೇನೇ ಆಗಲಿ ಹೋದ ಜೀವ ಮತ್ತೆ ಬರುವುದಿಲ್ಲ ಒಂದು ಪರಿಚಯದ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ.

ವರದಿ – ಅಕ್ಷಯ್ ತೀರ್ಥಹಳ್ಳಿ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

2 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

2 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

2 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

7 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

9 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

1 day ago