ಮಳೆಯ ವಿಳಂಬದ ನಡುವೆ ಮಲೆನಾಡಿನಲ್ಲಿ ದಿನೇ ದಿನೇ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಶಿವಮೊಗದಲ್ಲಿ ಎರಡು ದಿನಗಳ ಹಿಂದಷ್ಟೇ ಟೊಮೆಟೊ ಕೆ.ಜಿಗೆ ₹40ಕ್ಕೆ ಸಿಗುತ್ತಿತ್ತು. ಆದರೆ ಈಗ ಅದು ₹80ಕ್ಕೆ ಹೆಚ್ಚಳಗೊಂಡಿದೆ.
ಅದರ ಬೆನ್ನಲ್ಲೇ ಬೀನ್ಸ್ ಕೆ.ಜಿಗೆ ₹100, ಕ್ಯಾರೆಟ್ ₹80, ಬದನೆ ₹60, ಮೂಲಂಗಿ ₹40, ಹೂಕೋಸು ₹40, ಆಲೂಗಡ್ಡೆ ₹25, ಬಟಾಣಿಯ ಬೆಲೆಯೂ (₹80) ಒಂದೂವರೆ ಪಟ್ಟು ಹೆಚ್ಚಾಗಿದೆ.
ಸೊಪ್ಪಿನ ಬೆಲೆಯೂ ಗಗನಕ್ಕೇರಿದೆ. ಕೊತ್ತಂಬರಿ ಕಟ್ಟಿಗೆ ₹ 10, ಸಬ್ಬಸಿಗೆ, ಎಳೆಹರಿವೆ, ದಂಟಿನ ಸೊಪ್ಪು, ಮೆಂತೆ ಸೊಪ್ಪು 1 ಕಟ್ಟಿಗೆ ₹10 ಆಗಿದೆ.
ಇದರ ಜೊತೆಗೆ ಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ. ಸೇಬು ಕೆ.ಜಿಗೆ ₹200 ದಾಟಿದೆ. ದಾಳಿಂಬೆ ₹300, ಕಿತ್ತಳೆ ಹಾಗೂ ಮೋಸಂಬಿ ₹200ರ ಆಸುಪಾಸಿನಲ್ಲಿವೆ. ಒಂದು ವಾರದ ಹಿಂದೆ ಮಾವಿನಹಣ್ಣಿನ ಸಾಮಾನ್ಯ ದರ ಕೆ.ಜಿ.ಗೆ ₹60 ಇತ್ತು. ಅದು ಈಗ ₹100ರ ಅಂಚಿನಲ್ಲಿದೆ.
ಜೂನ್ ತಿಂಗಳ ಆರಂಭದಲ್ಲೇ ಬರಬೇಕಿದ್ದ ಮಳೆ ಇನ್ನೂ ಬಂದಿಲ್ಲ. ಹೀಗಾಗಿ ಹಣ್ಣು-ತರಕಾರಿ ಬೆಲೆ ಏರಿಕೆಯಾಗಿದೆ ಎಂದು ಶಿವಮೊಗ್ಗ ಎಪಿಎಂಸಿ ಬಳಿಯ ತರಕಾರಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಫ A…
ಚುಂಚಾದ್ರಿ ಮಹಿಳಾ ಒಕ್ಕಲಿಗರ ವೇದಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ Ripponpete Chunchadri Mahila Okkaligar Vedike celebrated the 80th Independence…
ಕೆಂಚನಾಲದಲ್ಲಿ ಮನೆ ಮೇಲೆ ಉರುಳಿದ ತೆಂಗಿನ ಮರ : ತಪ್ಪಿದ ಭಾರಿ ಅನಾಹುತ - ಸಂತ್ರಸ್ತ ಕುಟುಂಬಕ್ಕೆ ಶಾಸಕರ ಸೂಚನೆಯಂತೆ…
ತೋಟದ ಮಧ್ಯೆ ಅಕ್ರಮ ಗಾಂಜಾ ಬೆಳೆ: ಲಕ್ಷಾಂತರ ರೂ ಮೌಲ್ಯದ ಗಾಂಜಾ ಗಿಡಗಳು ವಶ, ಇಬ್ಬರ ಬಂಧನ Anandapura Police…
ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಮಹಿಳೆಯಿಂದ ಚಿನ್ನದ ಸರ ದೋಚಿದ್ದ ಆರೋಪ - ಇಬ್ಬರ ಬಂಧನ Two interstate thieves from…
ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ Independence Day celebrations were held with patriotic fervour at…