ಮಳೆಯ ವಿಳಂಬದ ನಡುವೆ ಮಲೆನಾಡಿನಲ್ಲಿ ದಿನೇ ದಿನೇ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಶಿವಮೊಗದಲ್ಲಿ ಎರಡು ದಿನಗಳ ಹಿಂದಷ್ಟೇ ಟೊಮೆಟೊ ಕೆ.ಜಿಗೆ ₹40ಕ್ಕೆ ಸಿಗುತ್ತಿತ್ತು. ಆದರೆ ಈಗ ಅದು ₹80ಕ್ಕೆ ಹೆಚ್ಚಳಗೊಂಡಿದೆ.
ಅದರ ಬೆನ್ನಲ್ಲೇ ಬೀನ್ಸ್ ಕೆ.ಜಿಗೆ ₹100, ಕ್ಯಾರೆಟ್ ₹80, ಬದನೆ ₹60, ಮೂಲಂಗಿ ₹40, ಹೂಕೋಸು ₹40, ಆಲೂಗಡ್ಡೆ ₹25, ಬಟಾಣಿಯ ಬೆಲೆಯೂ (₹80) ಒಂದೂವರೆ ಪಟ್ಟು ಹೆಚ್ಚಾಗಿದೆ.
ಸೊಪ್ಪಿನ ಬೆಲೆಯೂ ಗಗನಕ್ಕೇರಿದೆ. ಕೊತ್ತಂಬರಿ ಕಟ್ಟಿಗೆ ₹ 10, ಸಬ್ಬಸಿಗೆ, ಎಳೆಹರಿವೆ, ದಂಟಿನ ಸೊಪ್ಪು, ಮೆಂತೆ ಸೊಪ್ಪು 1 ಕಟ್ಟಿಗೆ ₹10 ಆಗಿದೆ.
ಇದರ ಜೊತೆಗೆ ಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ. ಸೇಬು ಕೆ.ಜಿಗೆ ₹200 ದಾಟಿದೆ. ದಾಳಿಂಬೆ ₹300, ಕಿತ್ತಳೆ ಹಾಗೂ ಮೋಸಂಬಿ ₹200ರ ಆಸುಪಾಸಿನಲ್ಲಿವೆ. ಒಂದು ವಾರದ ಹಿಂದೆ ಮಾವಿನಹಣ್ಣಿನ ಸಾಮಾನ್ಯ ದರ ಕೆ.ಜಿ.ಗೆ ₹60 ಇತ್ತು. ಅದು ಈಗ ₹100ರ ಅಂಚಿನಲ್ಲಿದೆ.
ಜೂನ್ ತಿಂಗಳ ಆರಂಭದಲ್ಲೇ ಬರಬೇಕಿದ್ದ ಮಳೆ ಇನ್ನೂ ಬಂದಿಲ್ಲ. ಹೀಗಾಗಿ ಹಣ್ಣು-ತರಕಾರಿ ಬೆಲೆ ಏರಿಕೆಯಾಗಿದೆ ಎಂದು ಶಿವಮೊಗ್ಗ ಎಪಿಎಂಸಿ ಬಳಿಯ ತರಕಾರಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…
RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ - ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ Former Education Minister Kimmane Ratnakar…
ಪಟಗುಪ್ಪ ಸೇತುವೆ ಬಳಿಯ ಹಿನ್ನೀರಿನಲ್ಲಿ ಅನಾಮಧೇಯ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ An unidentified man’s partially decomposed…
ಬಸ್-ಬೈಕ್ ಭೀಕರ ಅಪಘಾತ; 27 ವರ್ಷದ ಮೆಕ್ಯಾನಿಕ್ ಸ್ಥಳದಲ್ಲೇ ಸಾವು A 27-year-old mechanic was killed in a…
ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಮೂರು ವರ್ಷದ ಕರಡಿ ಸಾವು - ತೋಟದ ಮಾಲೀಕನ ಬಂಧನ A three-year-old male…