ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ : ಮುರುಘಾ ಮಠದ ಶ್ರೀಗಳು.

ನಿಸ್ವಾರ್ಥ ಸೇವಕನಾಗಿದ್ದು ಹನುಮಂತ ಶ್ರೀರಾಮನಲ್ಲಿಯೇ ಜೀವನ ಕಂಡುಕೊಂಡಿದ್ದ, ರಾಮನಾಮ ತಪದಲ್ಲಿಯೇತನ್ನ ಸರ್ವಸ್ವ ಅಡಗಿದೆ ಎಂಬ ಮನಸ್ಥಿತಿಯಲ್ಲಿ ಜೀವನಕಳೆದ ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ. ಇರುವುದಷ್ಟನ್ನೇ ಆತ್ಮ ಸಂತೋಷದಿಂದ ಅನುಭವಿಸಿ, ಅನಾವಶ್ಯಕ ಆಸೆಗಳಿಗೆ ಬಲಿಯಾಗದೆ ಸಂತೃಪ್ತ ಜೀವನ ಸಾಗಿಸಿದ ಪ್ರೇರಕನಂತೆ ಎಲ್ಲರ ಜೀವನ ಹಸನಾಗಲೀ ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ರಿಪ್ಪನ್‌ಪೇಟೆ ಸಮೀಪದ ಹುಂಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯ ಲೋಕಾರ್ಪಣೆ ಹಾಗು ಆಂಜನೇಯ ಮೂರ್ತಿಯ ಪುನರ್ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಂತರ ಮಾತನಾಡಿದ ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಧ್ಯಾತ್ಮಿಕವಾಗಿ ಸಮಾಜದಲ್ಲಿ ಆಚರಿಸಲಾಗುತ್ತಿರುವ ಹಬ್ಬ ಹರಿದಿನ, ವ್ರತ ಮುಂತಾದ ಧಾರ್ಮಿಕ ಆಚರಣೆಗಳು ಕಾಲ್ಪನಿಕವಾದವುಗಳಲ್ಲ. ನಿಗದಿತ ಉದ್ದೇಶಕ್ಕಾಗಿ ನಮ್ಮ ಪೂರ್ವಜನರು ಅನುಸರಿಸಿಕೊಂಡು ಬಂದ ಆಚಾರಗಳ ಅನುಕರಣೆಗಳು ಎಂದರು.

ಪರಂಪರಾಗತ ಆಚರಣೆಗಳಿಗೆ ತನ್ನದೆ ಆದ ಇತಿಹಾಸವಿದೆ. ಅಂದಿನ ಕಾಲದಲ್ಲಿ ಸಮಾಜದ ಒಳಿತಿಗಾಗಿ ಮಾಡಿದಂತಹ ಯೋಜನೆಗಳು ಇಂದಿಗೂ ಮುಂದುವರೆದಿವೆ. ರಾಮಾಯಣ, ಮಹಾಭಾರತ ಕಾಲ್ಪನಿಕವೆಂಬ ಚರ್ಚೆ, ಕುತರ್ಕಗಳು ನಡೆದಿರುವ ಈ ಕಾಲಘಟ್ಟದಲ್ಲಿ ಭೂಮಿಯ ಮೇಲೆ ಪುರಾಣದ ಘಟನೆಗಳ ಕುರುಹುಗಳು ಪತ್ತೆಯಾಗುತ್ತಿವೆ.ಐದು ಸಾವಿರ ವರ್ಷಗಳ ಹಿಂದೆ ರಾಮಾಯಣ ನಡೆದು, ಶ್ರೀರಾಮಚಂದ್ರ ಭೂಮಿಯನ್ನು ಆಳ್ವಿಕೆಮಾಡಿ ಸರ್ವಶ್ರೇಷ್ಠ ಸರ್ವೋತ್ತಮ ಆಡಳಿತವನ್ನು ನೀಡಿದ್ದರು ಎಂಬುದು ಜನಜನಿತ. ಈ ಕಾಲದಲ್ಲಿಯೇ ಹನುಮನೆಂಬ ಶ್ರೇಷ್ಠಭಕ್ತ ಶ್ರೀರಾಮರಿಗಿದ್ದು ರಾಮ ಸೇವೆಯೆ ಪರಮ ಪಾವನ ಎಂದು ತನ್ನ ಸರ್ವಸ್ವವನ್ನು ರಾಮನಿಗಾಗಿ ಮುಡಿಪಾಗಿಟ್ಟಿದ್ದನು. ಶಕ್ತಿಶಾಲಿ, ಸೇವಾಕರ್ತ ಆಂಜನೇಯನ ಜಯಂತಿಯೆಂದು ಶತಮಾನಗಳ ಕಾಲದ ದೇವಸ್ಥಾನದಲ್ಲಿ ನೂತನ ಮಂದಿರದೊಂದಿಗೆ ಪುನರ್ ಪ್ರತಿಷ್ಠಾಪನೆ ನಡೆಸುತ್ತಿರುವುದು ಪುಣ್ಯದ ಕೆಲಸವೆಂದರು.ಹನುಮನು ಕನ್ನಡ ನಾಡಿನವನು ಇತಿಹಾಸಗಳ ಅಧ್ಯಯನದಲ್ಲಿ ಇಂತಹ ಒಂದು ಕುರುಹುಗಳು ಲಭ್ಯವಾಗುತ್ತಿದೆ. ಕಿಷ್ಕಿಂದೆ ಇವರ ಜನ್ಮಸ್ಥಳ ಎಂಬುದು ಚರ್ಚೆಯಲ್ಲಿದೆ. ಕರ್ನಾಟಕದಲ್ಲಿಯೇ ಪುರುಷರಿಗೆ ಆಂಜನೇಯ ಮಾರುತಿ, ಹನುಮಂತ ಇತ್ಯಾದಿ ಹೆಸರನ್ನಿಟ್ಟು ಕರೆಯುತ್ತಿದ್ದಾರೆ. ಕೋಟೆ, ಕೊತ್ತಲಗಳ ಮುಖ್ಯದ್ವಾರಗಳಲ್ಲಿ ಆಂಜನೇಯನನ್ನು ರಾಜಮಹಾರಾಜರು ಪ್ರತಿಷ್ಠಾಪಿಸಿದ್ದಾರೆ. ಇದರಿಂದ ಈ ಕ್ಷೇತ್ರ ಮಹತ್ವದ ಜೊತೆಗೆ ಐತಿಹಾಸಿಕ ಸ್ಪರ್ಶ ಜನ ಜೀವನದಲ್ಲಿರುವುದು ಕಾಣಬಹುದು.ಸಂಭ್ರಮದ ಜಾತ್ರಾಮಹೋತ್ಸವಗಳ ಆಚರಣೆಯಲ್ಲಿ ಶ್ರೀರಾಮನ ಆಡಳಿತದಂತೆ ಸರ್ವಜನಾಂಗವನ್ನು ಪ್ರೀತಿಸುವ, ಸಹಕಾರ ತತ್ವದೊಂದಿಗೆ ಸಮಾನತೆಯ ಸಮಾಜ ನಿರ್ಮಾಣವಾಗಲಿ ಎಂದರು.

ಧಾರ್ಮಿಕ ಸಭೆಯಲ್ಲಿ ನಿಟ್ಟೂರು ನಾರಾಯಣ ಗುರು ಸಂಸ್ಥಾನಮಠದ ಶ್ರೀರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಗುರುವಿನ ಮೇಲೆ ಭಕ್ತರ ಭಕ್ತಿ ಹೇಗಿರಬೇಕೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಅಂತಹ ಮಹಾನ್ ರಾಮ ಭಕ್ತ ಆಂಜನೇಯ ಇಂದಿನ ಯುವ ಸಮೂಹಕ್ಕೆ ಆದರ್ಶಪ್ರಾಯರಾಗಿದ್ದಾರೆ.  ನನ್ನ ಗುರುವಿನ ಒಳಿತಿಗಾಗಿ ಮತ್ತು ಸೇವೆಗಾಗಿ ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟ ಆಂಜನೇಯ ಆಸಕ್ತಿಯನ್ನು ಹೊಂದಿದ್ದರು ಸಹ ಸೌಮ್ಯತೆಯಿಂದ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಆಂಜನೇಯನ ನಿಷ್ಠೆ ಪ್ರಾಮಾಣಿಕತನ ಸಮಯ ಪ್ರಜ್ಞೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಮಿತಿಯ ಅಶ್ವತ್ಥನಾರಾಯಣ ವಹಿಸಿದ್ದು, ಗ್ರಾ.ಪಂ. ಅಧ್ಯಕ್ಷೆ ಪಲ್ಲವಿ ಚೇತನ್, ಯದುಕುಮಾರ, ಕಿರಣ, ಶ್ರೀಧರ, ವಿನಾಯಕ , ನಾಗೇಂದ್ರ ಈರನಬೈಲು, ಮಂಜಪ್ಪ ಮಾಸ್ಟರ್, ಶಿಕ್ಷಕ ದಿನೇಶ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…

9 hours ago

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ Thirthahalli police…

11 hours ago

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ House fire reported at Keelambi…

12 hours ago

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ Two traffic police personnel in Shivamogga…

12 hours ago

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು Retired Vice Chancellor Prof. M.K. Naik, 63,…

12 hours ago

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…

1 day ago