ಸಿಗರೇಟ್‌, ತಂಬಾಕು ಮೇಲೆ ಪಾಪದ ತೆರಿಗೆ | ಇಂದಿನಿಂದ ಒಂದು ಸಿಗರೇಟ್ ದರ ಎಷ್ಟು ದುಬಾರಿ ಗೊತ್ತಾ.!? ಇಲ್ಲಿದೆ ಸಂಪೂರ್ಣ ಮಾಹಿತಿ

Cigarette and tobacco prices rise sharply as the government implements Sin Tax from today. Check how much one cigarette costs, new tax rates, GST hike and its impact on smokers in India.

ಸಿಗರೇಟ್‌, ತಂಬಾಕು, ಪಾನ್‌ ಮಸಾಲಾ ಮೇಲೆ ‘ಪಾಪದ ತೆರಿಗೆ’ ಜಾರಿ | ಫೆ.1ರಿಂದ ಬೆಲೆ ಭಾರೀ ಏರಿಕೆ

ನವದೆಹಲಿ: ಸಿಗರೇಟ್‌, ತಂಬಾಕು ಮತ್ತು ಪಾನ್‌ ಮಸಾಲಾ ಸೇರಿದಂತೆ ಹಾನಿಕಾರಕ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಕಠಿಣ ತೆರಿಗೆ (ಪಾಪದ ತೆರಿಗೆ / Sin Tax) ಭಾನುವಾರ (ಫೆಬ್ರವರಿ 1)ರಿಂದ ಜಾರಿಗೆ ಬಂದಿದೆ.

ಈ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ (Additional Excise Duty), ಆರೋಗ್ಯ ಸೆಸ್ (Health Cess) ಮತ್ತು ರಾಷ್ಟ್ರೀಯ ಭದ್ರತಾ ಸೆಸ್ (National Security Cess) ವಿಧಿಸಲಾಗಿದೆ. ಇದಕ್ಕೆ ಜೊತೆಗೆ ಜಿಎಸ್‌ಟಿ ದರವನ್ನು ಶೇ.40ಕ್ಕೆ ಹೆಚ್ಚಿಸಲಾಗಿದೆ, ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಈಗಾಗಲೇ ಸರ್ಕಾರ ಎಂಆರ್‌ಪಿ (MRP) ಆಧಾರಿತ ಮೌಲ್ಯಮಾಪನ (Valuation) ಕುರಿತಂತೆ ಅಧಿಕೃತ Notification ಹೊರಡಿಸಿದ್ದು, ಮೌಲ್ಯ ಕಡಿಮೆ ತೋರಿಸಿ ತೆರಿಗೆ ತಪ್ಪಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ.

ಸಿಗರೇಟ್‌ ಉದ್ದದ ಆಧಾರದಲ್ಲಿ ತೆರಿಗೆ :

ಸಿಗರೇಟ್‌ನ ಉದ್ದ (Length) ಅನುಗುಣವಾಗಿ ಪ್ರತಿ ಕಡ್ಡಿಯ ಮೇಲೆ ತೆರಿಗೆ ವಿಧಿಸಲಾಗಿದೆ.

65 mm ಫಿಲ್ಟರ್‌ ಇಲ್ಲದ ಸಿಗರೇಟ್‌: ₹2.05

ಶಾರ್ಟ್‌ ಫಿಲ್ಟರ್‌ ಸಿಗರೇಟ್‌: ₹2.10

65–70 mm ಉದ್ದದ ಸಿಗರೇಟ್‌: ₹3.60 ರಿಂದ ₹4.00

70–75 mm ಲಾಂಗ್‌ ಸಿಗರೇಟ್‌: ₹5.40

ನಾನ್‌ ಸ್ಟ್ಯಾಂಡರ್ಡ್‌ ಡಿಸೈನ್ ಸಿಗರೇಟ್‌: ₹8.50

ಪ್ರೀಮಿಯಂ ಬ್ರಾಂಡ್‌ಗಳ ಮೇಲೆ ಇದರ ಪರಿಣಾಮ ಹೆಚ್ಚು ಬೀಳಲಿದೆ.

ಗುಟ್ಕಾ, ಜರ್ದಾ ಮೇಲೆ ಹೆವಿ ಟ್ಯಾಕ್ಸ್

ಅಗಿಯುವ ತಂಬಾಕು ಹಾಗೂ ಫ್ಲೇವರ್ಡ್ ಜರ್ದಾ: ಶೇ.82 ಅಬಕಾರಿ ಸುಂಕ

ಗುಟ್ಕಾ: ಶೇ.91 ತೆರಿಗೆ

ಪಾನ್‌ ಮಸಾಲಾ: ಒಟ್ಟಾರೆ ತೆರಿಗೆ ಶೇ.88ಕ್ಕೆ ಏರಿಕೆ

ಪಾನ್‌ ಮಸಾಲಾ ತಯಾರಕರು Health & National Security Cess Act ಅಡಿಯಲ್ಲಿ ಹೊಸ ನೋಂದಣಿ (New Registration) ಮಾಡಿಸಬೇಕು. ಎಲ್ಲಾ ಪ್ಯಾಕಿಂಗ್‌ ಯಂತ್ರಗಳ ಬಳಿ CCTV ಕಡ್ಡಾಯ, ಮತ್ತು ವಿಡಿಯೊ ಫುಟೇಜ್ ಅನ್ನು 24 ತಿಂಗಳು ಸಂಗ್ರಹಿಸಿಡಬೇಕು.

ಯಂತ್ರಗಳ ಸಂಖ್ಯೆ ಹಾಗೂ Production Capacity ಅನ್ನು ಅಬಕಾರಿ ಇಲಾಖೆಗೆ ತಿಳಿಸಬೇಕು. ಆದರೆ, ಯಾವುದೇ ಯಂತ್ರ ಕನಿಷ್ಠ 15 ದಿನಗಳವರೆಗೆ ಕಾರ್ಯನಿರ್ವಹಿಸದಿದ್ದರೆ, ಅಬಕಾರಿ ಸುಂಕದಲ್ಲಿ ಕಡಿತವನ್ನು Claim ಮಾಡಲು ಅವಕಾಶ ನೀಡಲಾಗಿದೆ.

ತೆರಿಗೆ ಹೆಚ್ಚಳದ ಉದ್ದೇಶ ಏನು?

ಸರ್ಕಾರದ ಪ್ರಕಾರ, ಹಾನಿಕಾರಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ Smoking ಮತ್ತು Tobacco Consumption ಕಡಿಮೆ ಮಾಡುವುದು ಮುಖ್ಯ ಗುರಿ. ಆದರೆ ತಜ್ಞರ ಪ್ರಕಾರ, ಅತಿಯಾದ ತೆರಿಗೆಗಳಿಂದ Illegal Cigarette ಮತ್ತು Smuggled Products ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ.

Think Change Forum ಹೇಳುವಂತೆ, ಹೆಚ್ಚಿನ ತೆರಿಗೆ ಇದ್ದರೆ ಜನರು ಕಾನೂನುಬದ್ಧ ಉತ್ಪನ್ನಗಳ ಬದಲು Cheap Illegal Alternatives ಕಡೆಗೆ ತಿರುಗುವ ಆತಂಕವಿದೆ.

ಫೆ.1ರಿಂದ ಸಿಗರೇಟ್‌, ತಂಬಾಕು ಮತ್ತು ಪಾನ್‌ ಮಸಾಲಾ ಬಳಕೆ ಇನ್ನಷ್ಟು costly ಆಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಸರ್ಕಾರದ ಗಮನ ಹೆಚ್ಚಿದರೂ, ಈ ಕ್ರಮದ ಪರಿಣಾಮ ಮಾರುಕಟ್ಟೆಯಲ್ಲಿ ಹೇಗಿರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…

6 hours ago

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…

12 hours ago

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…

1 day ago

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…

1 day ago

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…

2 days ago

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…

2 days ago