A man was killed on the spot after being crushed under a speeding lorry while handing over a parcel to a bus near Sunnadabasti turn in Ripponpete. Police investigation underway.
ಬಸ್ಗೆ ಪಾರ್ಸಲ್ ನೀಡಲು ಹೋದ ವ್ಯಕ್ತಿ ವೇಗದ ಲಾರಿಯಡಿ ಸಿಲುಕಿ ಸಾವು – ಮೃತನ ಸೊಂಟ ಭಾಗ ಸಂಪೂರ್ಣ ನಜ್ಜುಗುಜ್ಜು | ಪತ್ನಿ, ಮಗಳು ಅನಾಥ
ರಿಪ್ಪನ್ಪೇಟೆ : ಇಲ್ಲಿನ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ತಿರುವಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತನನ್ನು ಸುಣ್ಣದಬಸ್ತಿ ಗ್ರಾಮದ ನಿವಾಸಿ ನಯಾಜ್ (40) ಎಂದು ಗುರುತಿಸಲಾಗಿದೆ.
ನಡೆದಿದ್ದೇನು..!!??
ಬೆಳಿಗ್ಗೆ ನಯಾಜ್ ಪತ್ನಿಯನ್ನು ಬೈಕ್ನಲ್ಲಿ ಕರೆದುಕೊಂಡು ಬಂದು ಬಸ್ ನಿಲ್ದಾಣದಲ್ಲಿ ಬಿಟ್ಟು, ಆಯನೂರು ಬಸ್ಗೆ ಹತ್ತಿಸಿದ್ದ. ನಂತರ ತೀರ್ಥಹಳ್ಳಿ ಸಮೀಪದ ಆರಗ ಗೇಟ್ನಲ್ಲಿ ವಾಸಿಸುವ ಚಿಕ್ಕಪ್ಪನಿಗೆ ಔಷಧಿ ಕಳುಹಿಸಲು ಪ್ರಕಾಶ್ ಟ್ರಾವೆಲ್ಸ್ ಬಸ್ಗೆ ಪಾರ್ಸಲ್ ನೀಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸ್ಥಳೀಯರ ಪ್ರಕಾರ, ನಯಾಜ್ ಬಸ್ಗೆ ಪಾರ್ಸಲ್ ನೀಡುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಅವನ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿಸುವಂತಾಯಿತು. ಅಪಘಾತದ ಭೀಕರತೆ ಅಷ್ಟೇ ಮಾರಕವಾಗಿದ್ದು, ದೇಹದ ಭಾಗಗಳು ಗಂಭೀರ ಹಾನಿಗೊಳಗಾಗಿದ್ದವು.
ಲಾರಿ ವೇಗ ನಿಯಂತ್ರಣ ತಪ್ಪಿ ಬಸ್ಸು ಮತ್ತು ವ್ಯಕ್ತಿ ನಡುವಿನ ಅಂತರದಲ್ಲಿ ನುಗ್ಗಿ ಚದುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಕೋಣಂದೂರು ಕಡೆಯಿಂದ ರಾಜನಾಥ್ ಬಸ್ ಬರುತ್ತಿದ್ದ ಹಿನ್ನೆಲೆ, ಲಾರಿ ಚಾಲಕ ತಡವಾಗಿ ಬ್ರೇಕ್ ಹಾಕಿದ್ದಾರೆಂದು ಹೇಳಲಾಗಿದೆ.
ಮೃತ ನಯಾಜ್ ಪತ್ನಿ, 11 ವರ್ಷದ ಹೆಣ್ಣುಮಗಳು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ಸ್ಥಳಕ್ಕೆ ಸಿಪಿಐ ಮುತನಗೌಡ ಗೌಡರ್, ಪಿಎಸ್ಐ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಗಮನಾರ್ಹವಾಗಿ, ಮೃತಪಟ್ಟ ನಯಾಜ್ ಅವರ ತಂದೆ ಶಬ್ಬೀರ್ ಅಹಮದ್ (71), ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಣೆಬಸ್ತಿ ಗ್ರಾಮದ ರೈತರು, ಅವರು ಸೆಪ್ಟೆಂಬರ್ 2022ರಲ್ಲಿ ಅರಣ್ಯ ಇಲಾಖೆ ನೋಟಿಸ್ಗೆ ಹೆದರಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದರು.
ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಶಿಕಾರಿಪುರ ಬಂದ್ , ಬಿಗಿ ಪೊಲೀಸ್ ಬಂದೋಬಸ್ತ್ , ಹೇಗಿದೆ ಪರಿಸ್ಥಿತಿ !?…
ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ Former Karnataka Education Minister and Tiptur…
ಸಾಗರದಲ್ಲಿ ಬೋರ್ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ Sagara Rural Police arrested…
ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು A young man identified as Abu Sufiyan Khan…
ಚೆಸ್ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ Thirthahalli sisters Ganavi and Pavani secured first place in…
ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ ,…