RIPPONPETE | ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ

ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ – ಕೋಮು ಸೂಕ್ಷ್ಮತೆಯಿಂದ ಸೌಹಾರ್ದದ ಹಳ್ಳಿಯತ್ತ ಕೆಂಚನಾಲ

ಕೆಂಚನಾಲ… ಸಾಮಾನ್ಯವಾಗಿ ಜನರು ಈ ಗ್ರಾಮದ ಹೆಸರನ್ನು ಕೇಳಿದರೆ, “ಅದು ಕೋಮು ಸೂಕ್ಷ್ಮ ಪ್ರದೇಶ” ಎಂಬ ಕಲ್ಪನೆ ತಕ್ಷಣ ಮೂಡುತ್ತಿತ್ತು. ಆದರೆ ಈ ಬಾರಿಯ ಗಣೇಶೋತ್ಸವವೇ ಒಂದು ಹೊಸ ಇತಿಹಾಸ ಬರೆದಿತು. ಹಬ್ಬ ಎಂದರೆ ಕೆಲವೊಮ್ಮೆ ಜಗಳ, ಅಸಮಾಧಾನ, ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ ಎನ್ನುವ ತಪ್ಪು ಕಲ್ಪನೆಗೆ, ಈ ಗ್ರಾಮದ ಜನರು ಅತ್ಯಂತ ನಿಜವಾದ ಉತ್ತರ ನೀಡಿದ್ದಾರೆ.

ಹೌದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಅಚ್ಚರಿಯ ಘಟನೆ ನಡೆಯಿತು. ಗ್ರಾಮದ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಅಲ್ಲಿನ ಮುಸ್ಲಿಂ ಸಮುದಾಯದ ಯುವಕರು ತಮ್ಮ ಕೈಯಾರೆ ಮೆರವಣಿಗೆಯಲ್ಲಿ ಭಾಗಿಯಾದ ಹಿಂದೂ ಭಕ್ತಾಧಿಗಳಿಗೆ ಉಪಹಾರ ಮತ್ತು ಪಾನೀಯ ವಿತರಿಸಿದರು.ಅದು ಕೇವಲ ಹೊಟ್ಟೆ ತುಂಬಿಸುವ ಕಾರ್ಯವಾಗಿರಲಿಲ್ಲ, ಅದು ಹೃದಯಗಳನ್ನು ತುಂಬಿಸುವ ಕಾರ್ಯವಾಗಿತ್ತು..

ಈ ಸಂಧರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದು ಚಿಲುಮೆಯಂತೆ ಸಂತೋಷ ಹೊಳೆಯುತ್ತಿತ್ತು. ಏಕೆಂದರೆ, ಆ ಕ್ಷಣದಲ್ಲಿ ಹಬ್ಬದ ಅರ್ಥವೇ ಬದಲಾಗಿತ್ತು. ಹಬ್ಬ ಕೇವಲ ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ ಎಂಬ ಅರಿವು ಮೂಡಿತು. ಇದೇ ಸಂದರ್ಭದಲ್ಲಿ ಮುಸ್ಲಿಂ ಯುವಕರು ಗಣಪತಿಗೆ ಮಾಲಾರ್ಪಣೆ ಮಾಡುವ ಮೂಲಕ “ಧರ್ಮವೇ ಬೇರೆ ಆದರೆ ಹೃದಯ ಒಂದೇ” ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು.ಈ ಸಂಧರ್ಭದಲ್ಲಿ ನೆರೆದಿದ್ದವರು ಭಾರತ್ ಮಾತಾಕೀ ಜೈ ಘೋಢಣೆ ಕೂಗಿ ಸಂಭ್ರಮಿಸಿದರು.

ಗಣಪತಿ ಸಮಿತಿಯವರು ಈ ಅಪೂರ್ವ ಸೌಹಾರ್ದಕ್ಕೆ ಅಭಿನಂದನೆ ಸಲ್ಲಿಸಿದರು. “ನಾವು ಇಂದು ಒಂದಾಗಿ ನಿಂತಿದ್ದೇವೆ. ನಾಳೆಯ ಈದ್ ಮಿಲಾದ್ ಹಬ್ಬಕ್ಕೂ ಹಿಂದೂಗಳು ಸಹಕರಿಸಿ ಅದನ್ನು ಯಶಸ್ವಿಗೊಳಿಸಬೇಕು” ಎಂಬ ಕರೆ ನೀಡಿದಾಗ, ಜನರ ಹೃದಯದಲ್ಲಿ ಬೇರೆಯದೇ ರೀತಿಯ ಭಾವನೆ ಎದ್ದಿತು. ಈ ಮಾತು ಕೇವಲ ಕರೆ ಅಲ್ಲ, ಅದು ಭವಿಷ್ಯದ ದಾರಿ ತೋರಿಸುವ ಬೆಳಕು.

ಈ ಘಟನೆ ಗ್ರಾಮಕ್ಕೆ ಹೊಸ ಗುರುತನ್ನು ಕೊಟ್ಟಿದೆ. ಮೊದಲು ಕೋಮು ಸೂಕ್ಷ್ಮ ಎಂದು ಗುರುತಿಸಲ್ಪಟ್ಟಿದ್ದ ಸ್ಥಳ ಇಂದು “ಸೌಹಾರ್ದದ ಕೇಂದ್ರ” ಎಂದು ಹೆಸರಾಗಲು ಆರಂಭಿಸಿದೆ. ಸಣ್ಣ ಉದಾಹರಣೆ ಆದರೂ ಇದು ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತದೆ. ನಿಜವಾದ ದೇವರ ಸೇವೆ ಎಂದರೆ ಹಸಿವು ನೀಗಿಸುವುದು, ಪರರನ್ನು ಗೌರವಿಸುವುದು, ಮತ್ತು ಪ್ರೀತಿ ಹಂಚಿಕೊಳ್ಳುವುದು ಎಂಬುದನ್ನು ಇಲ್ಲಿ ಜನರು ತೋರಿಸಿದ್ದಾರೆ.

ಇಂದಿನ ಕಾಲದಲ್ಲಿ ಅಲ್ಪ ಕಾರಣಕ್ಕೂ ದ್ವೇಷ ಬೆಳೆಸುವವರು ಕಡಿಮೆ ಇಲ್ಲ. ಆದರೆ ಕೆಂಚನಾಲ ಗ್ರಾಮವು ನಿಜಕ್ಕೂ ಮಾದರಿ ಉದಾಹರಣೆ ನೀಡಿದೆ. ಹಬ್ಬ ಹಬ್ಬವೋ ಅಂದರೆ ಅದು ಬಣ್ಣದ, ಬೆಳಕಿನ, ಸಂತೋಷದ ಹಬ್ಬ. ಧರ್ಮ ಬದಲಾದರೂ, ಹೃದಯ ಒಂದಾದರೆ ಯಾವುದೇ ಕಲ್ಲು ಗೋಡೆಗಳೂ ಕದಡಲಾರವು.

ಕೆಂಚನಾಲದಲ್ಲಿ ಕಂಡ ಈ ದೃಶ್ಯ ಕೇವಲ ಒಂದು ಕ್ಷಣದ ನೆನಪು ಮಾತ್ರವಲ್ಲ, ಅದು ಮುಂದಿನ ಪೀಳಿಗೆಯವರಿಗೆ ಮಾದರಿ ಪಾಠ. ಸೌಹಾರ್ದ, ಪ್ರೀತಿ, ಸಹಕಾರ—ಇವುಗಳು ನಮ್ಮ ಸಮಾಜವನ್ನು ನಿಲ್ಲಿಸುವ ಆಧಾರಸ್ತಂಭಗಳು ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಮಾಡಿದೆ.

“ಕೋಮು ಸೂಕ್ಷ್ಮ” ಎಂಬ ಅಪಖ್ಯಾತಿ ಬದಲಾಗಿ, “ಸೌಹಾರ್ದದ ಹಳ್ಳಿ” ಎಂಬ ಹೆಸರನ್ನು ಕೆಂಚನಾಲ ಹೆಮ್ಮೆಪಟ್ಟು ಹೊತ್ತಿದೆ. ಕೆಂಚನಾಲದಲ್ಲಿ ಹರಡಿದ ಈ ಸೌಹಾರ್ದದ ಸುವಾಸನೆ ಇನ್ನೂ ಅನೇಕ ಗ್ರಾಮಗಳಿಗೆ, ನಗರಗಳಿಗೆ ತಲುಪಿ, ಎಲ್ಲೆಡೆ ಶಾಂತಿ, ಪ್ರೀತಿ, ಒಗ್ಗಟ್ಟಿನ ಹೂವು ಅರಳಲಿ ಎಂಬುದು ಪ್ರತಿಯೊಬ್ಬರ ಹಾರೈಕೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…

17 hours ago

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…

18 hours ago

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…

19 hours ago

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…

20 hours ago

ಬೈಕ್ ಸವಾರನ ಮೇಲೆ ಮುಸಿಯ ದಾಳಿ; ಗಂಭೀರ ಗಾಯ

ಬೈಕ್ ಸವಾರನ ಮೇಲೆ ಮುಸಿಯ ದಾಳಿ; ಗಂಭೀರ ಗಾಯ A bike rider was seriously injured after a…

20 hours ago

ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ

ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…

1 day ago