Categories: Blog

ಜನಮೆಚ್ಚುಗೆ ಗಳಿಸಿದ ರಿಪ್ಪನ್‌ಪೇಟೆಯ ಅಜಿತ್ ಸಿಂಹ ನಟನೆಯ ಏರಿಸೀಮೆ ಕಿರುಚಿತ್ರ

ಜನಮೆಚ್ಚುಗೆ ಗಳಿಸಿದ ರಿಪ್ಪನ್‌ಪೇಟೆಯ ಅಜಿತ್ ಸಿಂಹ ನಟನೆಯ ಏರಿಸೀಮೆ ಕಿರುಚಿತ್ರ

ಏರಿಸೀಮೆ ಕಿರುಚಿತ್ರ ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತಿದ್ದು ಮಲೆನಾಡಿನ ಯುವ ಪ್ರತಿಭೆ ಅಜಿತ್ ಸಿಂಹ ಅದ್ಬುತ ನಟನೆಗೆ ಯಾರು ತುಟಿಕ್ ಪಿಟಿಕ್ ಅನ್ನುವಂತಿಲ್ಲ. ಅಷ್ಟರಮಟ್ಟಿಗೆ  ಕಿರುಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಸತ್ಯ ರಾಧಕೃಷ್ಣರವರ ಸಂಗೀತ ನೋಡುಗರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಮತ್ತು ಚಿತ್ರದೊಂದಿಗೆ ಬೆಸೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಏರಿಸೀಮೆ ಕಿರುಚಿತ್ರ ಇಲ್ಲಿ ವೀಕ್ಷಿಸಿ👆

ಆಹಾನ್ ಆ್ಯಕ್ಷನ್​​​ ಕಟ್​​ ಹೇಳಿರುವ ‘ಏರಿಸೀಮೆ’ಯಲ್ಲಿ ಅಜಿತ್ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೋನಾಲಿ ಸುರೇಶ್ ,ಉದಯ್ ಕುಮಾರ್ ,ಅಜಯ್ ಸಿ ಎಂ ,ರಮೇಶ್ ಬೆಣಕಲ್ ,ಶ್ರೀವಾತ್ಸವ ಬೈರಿ ಮತ್ತು ಗುರು ತಾರಾಬಳಗದಲ್ಲಿದ್ದಾರೆ.ರಿಪ್ಪನ್‌ಪೇಟೆ ರಾಘವೇಂದ್ರ ಬೇಕರಿಯ ಮಾಲೀಕ ಸುರೇಶ್ ನಿರ್ಮಾಣದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಏರಿಸೀಮೆ ಕಿರುಚಿತ್ರದ ನಿರ್ದೇಶಕ ಅಹಾನ್ ಅವರ ಕಥೆ ಹಾಗೂ ನಿರ್ದೇಶನ ಹಾಗೂ ಡೈಲಾಗ್ ಎಲ್ಲದರ ನಿರೂಪಣೆ ಶೈಲಿಯೇ ಪ್ರೇಕ್ಷಕ ವೃಂದದವರಿಗೆ ತುಂಬಾ ಇಷ್ಟವಾಗಿದೆ ಎನ್ನಬಹುದು.. ಏಕೆಂದರೆ ಈ ಕಿರು ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬೇಕಾಗಿರುವ ಎಲ್ಲಾ ಸರಕುಗಳನ್ನು ನಾವು ಕಾಣಬಹುದು. ಇದರಲ್ಲಿ ಎಮೋಷನ್ಸ್ ಕೇಳುವವರಿಗೆ ಅಣ್ಣ ತಂಗಿಯ ಎಮೋಷನ್ಸ್ , ಟ್ವಿಸ್ಟ್ ಕೇಳುವವರಿಗೆ ಟ್ವಿಸ್ಟ್ , ಹಳ್ಳಿಯೊಂದರ ಮುಗ್ದ ವ್ಯಕ್ತಿಯ ಮುಗ್ದತೆಯೊಳಗಿನ ಆಕ್ರೋಶ ಎಲ್ಲವೂ ಕೂಡ ಈ ಏರಿಸೀಮೆ ಕಿರುಚಿತ್ರದಲ್ಲಿ ಕಾಣಬಹುದು.

ಇನ್ನು ಟೈಟಲ್ ವಿಚಾರಕ್ಕೆ ಬಂದರೆ ‘ಏರಿಸೀಮೆ’ ಚಿತ್ರ ನೋಡುವಾಗ ನನಗನಿಸಿದ್ದು ಬಲಹೀನ ವ್ಯಕ್ತಿಯೊಬ್ಬ ತಾನು ಸರ್ವಸ್ವವೇ ಎಂದುಕೊಂಡ ತನ್ನ ತಂಗಿಯನ್ನು ಪ್ರಭಾವಿ ವ್ಯಕ್ತಿಯೊಬ್ಬ ಅದೊಂದು ನಿರ್ಜನ ಪ್ರದೇಶ(ಏರಿಸೀಮೆ)ದಲ್ಲಿ ತನ್ನ ತೃಷೆಗಾಗಿ ಬಳಸಿಕೊಂಡು ಆನಂತರ ಹತ್ಯೆಗೈದಿರುವ ಸನ್ನೀವೇಶವನ್ನು ನಿರ್ದೇಶಕ ಅಹಾನ್ ತನ್ನದೇ ಶೈಲಿಯಲ್ಲಿ ಪ್ರಸ್ತುಪಡಿಸಿದ್ದಾರೆ.

ಚಿತ್ರದ ಮೊದಲಿಗೆ ನಟ ಅಜಿತ್ ಸಿಂಹ ಮನೆಯಿಂದ ಹೊರಡುವಾಗ ಕೊಡ್ತಿದ್ದ ಎಕ್ಸಪ್ರೆಷನ್ , ಮನೆ ಮುಂಭಾಗ ‍ಚಪ್ಪಲಿಯೊಂದು ಉಲ್ಟಾ ಬಿದ್ದಿರುವ ಸೀನ್ ನಿರ್ದೇಶಕ ಏನನ್ನೋ ಹೇಳಹೊರಟಿದ್ದಾನೆ ಅನ್ನಿಸುತ್ತೆ, ಆನಂತರ ಕಥೆಯ ಎಳೆ ಎಳೆಯನ್ನು ತುಂಬಾ ಅರ್ಥಪೂರ್ಣವಾಗಿ ಜೋಡಿಸಿದ್ದಾರೆ.

ಇನ್ನೂ ಈ ಕಿರುಚಿತ್ರದ ಮೈನಸ್ ಪಾಯಿಂಟ್ ಹೇಳಬೇಕೆಂದರೆ ಪಾತ್ರಗಳ ನಡುವಿನ ಸಂಭಾಷಣೆ ಸ್ವಲ್ಪ ಕಡಿಮೆ ಆಯಿತೆನೋ ಅನಿಸುತ್ತೆ ಹಾಗೇ ಮೊದಲ 8 ನಿಮಿಷ ಒಳ್ಳೆ BGM ಹಾಗೂ ಸತ್ಯ ರಾಧಕೃಷ್ಣ ಸಂಯೋಜಿಸಿದ ಸುಮಧುರ ಹಾಡು ಇದ್ದರೂ ಯಾಕೋ ಕಾಯುವಿಕೆ ಸ್ವಲ್ಪ ಜಾಸ್ತಿಯಾಯ್ತಿನೋ ಅನ್ನಿಸುತ್ತೆ..ಆ ಕಾಯುವಿಕೆಯಲ್ಲಿಯೇ ಪ್ಲಾಷ್ ಬ್ಯಾಕ್ ತೋರಿಸಿದ್ದರೆ ಇನ್ನೂ ಚೆನ್ನಾಗಿರುತಿತ್ತು.. ಇನ್ನೂ ಖಳನಟ ಹಾಗೂ ತಂಗಿ ಪಾತ್ರಧಾರಿಯ ಸ್ವಲ್ಪ ಸಂಭಾಷಣೆ ಇದ್ದಿದ್ದರೆ ಇನ್ನೂ ಚೆನ್ನಾಗಿ ಪುಷ್ ಕೊಡುತಿತ್ತು ಎಂದನಿಸುತ್ತದೆ.

ಈ ಕಿರುಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲೂ ಅಜಿತ್ ಸಿಂಹ ಎಂಬ ಯುವ ಪ್ರತಿಭೆಯನ್ನು ಪರದೆ ಮೇಲೆ ಅದ್ಭುತವಾಗಿ ತೋರಿಸಲು ಸಿನಿಮಾಟೋಗ್ರಫಿ, ಸಂಗೀತ, ಸಂಕಲನದ ಕೊಡುಗೆ ಮಹತ್ವದ್ದು.ಈ ಸಂಧರ್ಭದಲ್ಲಿ ಅಜಿತ್ ಸಿಂಹ ನಟನೆ ಬಗ್ಗೆ ಹೇಳಲೇಬೇಕು ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಭಾನ್ವಿತ ಕಂಟೆಂಟ್ ಕ್ರಿಯೇಟರ್ ರಲ್ಲಿ ಒಬ್ಬರಾದ ಅಜಿತ್ ಸಿಂಹ, ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಖಡಕ್ ಅಭಿನಯದಿಂದ ಸಾಕಷ್ಟು ಅಭಿಮಾನಿ , ಬೆಂಬಲಿಗರನ್ನು ಹೊಂದಿದ್ದಾರೆ.ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ನಟನೆಯ ಮೇಲಿರುವ ಆಸಕ್ತಿ.ಕೊನೆಯದಾಗಿ ಒಳ್ಳೆಯ ಅವಕಾಶ ಸಿಕ್ಕರೆ ಸ್ವಾಂಡಲ್ ವುಡ್ ನಲ್ಲಿ ಅದ್ಬುತ ನಟನಾಗಿ ಮಿಂಚುವ ಎಲ್ಲಾ ಅರ್ಹತೆ ಅಜಿತ್ ಸಿಂಹ ರವರಿಗೆ ಇದೆ… ಶುಭವಾಗಲಿ…

ವಿಮರ್ಶೆ – ರಫ಼ಿ ರಿಪ್ಪನ್‌ಪೇಟೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 hours ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

18 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

18 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

18 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

23 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

1 day ago