ಅಪ್ರಾಪ್ತ ಬಾಲಕನನ್ನ ಅಪಹರಿಸಿ ಹಣದ ಬೇಡಿಕೆ ಇಟ್ಟ ಪ್ರಕರಣವನ್ನ 24 ಗಂಟೆಯಲ್ಲಿ ಬೇಧಿಸಿದ ಭದ್ರಾವತಿ ನ್ಯೂ ಟೌನ್ ಪೊಲೀಸರು ಐವರು ಆರೋಪಿಯನ್ನ ಬಂಧಿಸಿದ್ದಾರೆ. ಓರ್ವನ ಬಂಧನಕ್ಕಾಗಿ ಭರ್ಜರಿ ಬಲೆಯನ್ನೇ ಹೆಣೆದಿದ್ದಾರೆ.
ಘಟನೆಯ ಹಿನ್ನಲೆ:
ಭದ್ರಾವತಿ ಅಂಡರ್ ಬ್ರಿಡ್ಜ್ ಬಳಿಯಿರುವ ಎಲ್ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನನ್ನ ಬಳಿ ಹಣ ಖಾಲಿಯಾಗಿದೆ. ಫೋನ್ ಪೇ ನೂ ಇಲ್ಲ. ನಾಲ್ಕು ಎಳನೀರು ಕೊಚ್ಚಿಕೊಂಡು 100 ಮೀಟರ್ ದೂರದಲ್ಲಿರುವ ವ್ಯಾನ್ ನಲ್ಲಿರುವ ಸ್ನೇಹಿತನ ಬಳಿ ಹಣವಿದೆ. ಸ್ಕ್ಯಾನರ್ ತೆಗೆದುಕೊಂಡು ಬಾ ಎಂದು ಹೇಳಿರುತ್ತಾನೆ.
ಅಪ್ರಾಪ್ತ ಬಾಲಕ ನಾಲ್ಕು ಎಳನೀರು ಕೊಚ್ಚಿಕೊಂಡು ಸಿಲ್ವರ್ ಓಮ್ನಿ ಬಳಿ ಹೋಗಿ ಕಾರಿನಲ್ಲಿ ಕುಳಿತವನಿಗೆ ಎಳನೀರು ಕೊಡುತ್ತಿದ್ದಂತೆ ತಕ್ಷಣವೇ ಬಾಲಕನನ್ನ ಮುದುರಿಕೊಂಡು ಕಾರಿನಲ್ಲಿ ಅಪಹರಿಸಿರುತ್ತಾರೆ. ತಕ್ಷಣವೇ ಆತನನ್ನ ಹಿಂಬಾಲಿಸಿಕೊಂಡು ಬಂದ ಪೋಷಕರು ಬರುವಲ್ಲಿ ಪರಾರಿಯಾಗಿರುತ್ತಾರೆ.
ಇದೇ ವೇಳೆ ಮನೆಯವರಿಗೆ ಕರೆ ಮಾಡಿದ ಅಪಹರಣಕಾರರು ಯಾಸಿನ್ ಖುರೇಷಿಯವರ ಕಡೆಯವರು 10 ಲಕ್ಷ ಹಣ ಕೊಟ್ಟು ಯಾಸಿನ್ ಕುರೇಷಿಯ ಬಳಿ ಇತ್ಯರ್ಥ್ಯ ಮಾಡಿಕೊಳ್ಳಿ ಎಂದು ಮೊಬೈಲ್ ನಲ್ಲಿ ಕರೆ ಮಾಡಿ ಹೇಳಿರುತ್ತಾರೆ. ಆದರೆ ಎರಡು ಮೂರು ಅಪಹರಣಕ್ಕೊಳಗಾದ ಕುಟುಂಬಕ್ಕೂ ಖಲೀಲ್ ಎಂಬುವರ ನಡುವೆ 25 ಲಕ್ಷದ ರೂ. ಹಣದ ವಿಚಾರದಲ್ಲಿ ಗಲಾಟೆಯಾಗಿತ್ತು.
ಈ ವಿಚಾರದಲ್ಲಿ ಅತ್ಯಾಚಾರ ಮತ್ತು ಕೊಲೆಯ ಯತ್ನ ನಡೆದಿತ್ತು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ. ಆದರೆ ಈಗ ದಿಡೀರ್ ಅಂತ ಅಪ್ರಾಪ್ತ ಬಾಲಕನ ಅಪಹರಣದ ಪ್ರಕರಣ ತಲೆ ನೋವು ತಂದಿತ್ತು. ಅದೂ ಖುರೇಷಿಯ ಹೆಸರು ಪ್ರಸ್ತಾಪಿಸಿ ಹಣದ ಬೇಡಿಕೆ ಇಟ್ಟಿರುವುದು ಭಯವನ್ನೂ ಉಂಟು ಮಾಡಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಭದ್ರಾವತಿ ಪೊಲೀಸರು ಐವರನ್ನ ಪತ್ತೆಹಚ್ಚಿದ್ದಾರೆ. ಓರ್ವ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ತೀವ್ರಶೋಧ ನಡೆದಿದೆ.
ಭದ್ರಾವತಿಯ ಮುಬಾರಕ್ ಯಾನೆ ಡಿಚ್ಚಿ(24), ಸಾಗರದ ಜಾಬೀರ್ ಭಾಷ ಯಾನೆ ರಾಬರ್ಟ್(22), ಶಿವಮೊಗ್ಗದ ಮುಸ್ತಫ, ಸಾಗರದ ಅಬ್ದುಲ್ ಸಲಾಂ, ಸಾಗರದ ಅಣಲೇಕೊಪ್ಪದ ಇರ್ಫಾನ್, ರನ್ನ ಬಂಧಿಸಲಾಗಿದೆ. ಎ2 ಆರೋಪಿ ಪರಾರಿಯಾಗಿದ್ದಾನೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್