ಉದ್ಯೋಗ ಮೇಳಕ್ಕೆ ಹೋಗುವ ಮುನ್ನ ಇದನ್ನು ಮರೆಯಬೇಡಿ :
* ಉದ್ಯೋಗಾಕಾಂಕ್ಷಿಗಳು ವಿದ್ಯಾರ್ಹತೆ, ವಿಳಾಸ ದೃಢೀಕರಣ, ಫೋಟೊ ಇತ್ಯಾದಿ ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬೇಕು.
*ದಾಖಲೆಗಳು ಕನಿಷ್ಠ ಹತ್ತು ಸೆಟ್ನಲ್ಲಿದ್ದರೆ ಒಳ್ಳೆಯದು. ಕೆಲವು ಮೇಳಗಳಲ್ಲಿ ಒಬ್ಬ ಅಭ್ಯರ್ಥಿಗೆ ಕನಿಷ್ಠ ಹತ್ತು ಕಂಪನಿಗಳ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿರುತ್ತದೆ.
* ಮೂಲ ದಾಖಲೆಗಳನ್ನೂ ತೆಗೆದುಕೊಂಡು ಹೋಗಲು ಮರೆಯದಿರಿ.
* ಸಭ್ಯ ಉಡುಗೆ ತೊಟ್ಟುಕೊಳ್ಳಿ. ಮೇಳದಲ್ಲಿ ಹೆಚ್ಚು ಸಮಯ ಕಾದರೂ ಫ್ರೆಶ್ ಆಗಿ ಕಾಣುವಂತೆ ಎಚ್ಚರಿಕೆ ವಹಿಸಿ.
* ನಿಮ್ಮ ದಾಖಲೆಗಳನ್ನು ಸರಿಯಾಗಿ ಫೈಲ್ ಮಾಡಿ ಇಟ್ಟುಕೊಳ್ಳಿ.ಯಾವ ದಾಖಲೆ ಕೇಳಿದರೂ ತಕ್ಷಣ ತೆಗೆದುಕೊಡುವಂತೆ ನೀವೇ ಪೈಲ್ ಮಾಡಿಕೊಳ್ಳಿ.
* ಮೇಳದಲ್ಲಿ ಯಾವೆಲ್ಲಾ ಕಂಪನಿಗಳು ಭಾಗವಹಿಸುತ್ತಿವೆ, ಯಾವ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡೇ ಮುಂದುವರೆಯಿರಿ.
* ಆಯೋಜಕರ ಸಂಪರ್ಕ ಸಂಖ್ಯೆ ನೀಡಿದ್ದರೆ, ಈ ಬಗ್ಗೆ ಮಾತನಾಡಿ. ನಿಮಗೆ ಅಗತ್ಯವಿರುವ ಮಾಹಿತಿ ಪಡೆದುಕೊಳ್ಳಲು ಹಿಂಜರಿಯಬೇಡಿ.
*ಮೇಳದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿ. ಹೆದರಿಕೆ, ಭಯ ಬೇಡ.
ಮೇಳಕ್ಕೆ ಹೋಗುವ ಮುನ್ನ…
* ಯಾವ ರೀತಿಯ ಕೆಲಸಕ್ಕೆ ನಾನು ಸೂಕ್ತ, ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಹೆಚ್ಚು ಅವಕಾಶವಿದ್ದಾಗ ಗೊಂದಲಕ್ಕೆ ಬೀಳಬೇಡಿ.
* ನಿಮ್ಮ ವೇತನ ಎಷ್ಟಿರಬೇಕು, ಎಲ್ಲಿ ಕೆಲಸ ಸಿಕ್ಕರೆ ಮಾಡಬಹುದು ಎಂಬುದನ್ನು ಮೊದಲೇ ಯೋಚಿಸಿರಿ. ಇದರ ಆಧಾರದ ಮೇಲೆಯೇ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಿ.
* ಅತಿ ಕಡಿಮೆ ಸಮಯದ ‘ಸಂದರ್ಶನ’ಕ್ಕೆ ಸದಾ ಸಿದ್ಧರಾಗಿರಿ. ಕಡಿಮೆ ಅವಧಿಯಲ್ಲಿ ನಿಮ್ಮ ಪರಿಚಯ ಮಾಡಿಕೊಡುವುದನ್ನು ಕಲಿತುಕೊಳ್ಳಿ.
* ಸಮಯಕ್ಕೆ ಸರಿಯಾಗಿ ಮೇಳಕ್ಕೆ ಹಾಜರಾಗಿ. ಹೆಸರು ಎಲ್ಲಿ ನೊಂದಾಯಿಸಬೇಕು, ಹೇಗೆ ಪ್ರಕ್ರಿಯೆಗಳು ನಡೆಯಲಿವೆ ಎಂಬುದನ್ನು ತಿಳಿದುಕೊಂಡೇ ಮುಂದುವರೆಯಿರಿ.
* ನಿಮ್ಮ ವಿದ್ಯಾರ್ಹತೆ, ಅನುಭವ, ವಯಸ್ಸು, ಕುಟುಂಬದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಪ್ರಮಾಣಿಕತೆಯಿಂದ ಉತ್ತರಿಸಿ. ಏನನ್ನಾದರೂ ಮುಚ್ಚಿಟ್ಟು ಉದ್ಯೋಗ ಪಡೆಯುವ ಯತ್ನ ಬೇಡ.
* ಯಾವುದೇ ಕಂಪನಿ ಆಫರ್ ನೀಡಿದರೆ ಕೆಲಸ ಏನು, ವೇತನ ಎಷ್ಟು ಸಿಗುತ್ತದೆ, ಯಾವಾಗಿನಿಂದ ಕೆಲಸಕ್ಕೆ ಬರಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ. ಈ ವಿಷಯಗಳನ್ನು ಕೇಳಿ ತಿಳಿದುಕೊಳ್ಳಲು ಸಂಕೋಚಪಡಬೇಡಿ.
* ನೀವು ಆಯ್ಕೆ ಮಾಡಿಕೊಳ್ಳುವ ಕಂಪನಿಯ ಬಗ್ಗೆ ಒಂದಿಷ್ಟು ಬೇಸಿಕ್ ಮಾಹಿತಿ ಪಡೆದುಕೊಂಡಿರಿ. ಗೊತ್ತಿಲ್ಲದಿದ್ದರೆ ಪ್ರತಿನಿಧಿಗಳನ್ನು ಕೇಳಿತಿಳಿದುಕೊಳ್ಳಿ. ಯಾವುದೇ ವಿಷಯವನ್ನು ಕೇಳಿ ತಿಳಿದುಕೊಳ್ಳುವುದು ದಡ್ಡತನವಲ್ಲ ಎಂಬುದನ್ನು ಮರೆಯಬೇಡಿ.
*ಮೇಳದಲ್ಲಿ ಉತ್ಸಾಹದಿಂದಿರಿ, ಕ್ಯೂನಲ್ಲಿ ನಿಂತಾಗ ಅಕ್ಕಪಕ್ಕದವರೊಂದಿಗೆ ಮಾತನಾಡಿ, ಪರಿಚಯ ಮಾಡಿಕೊಳ್ಳಿ. ಆದರೆ ತಲೆಹರಟೆ ಮಾಡಬೇಡಿ.
ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ ,…
RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…
ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ Nagarahalli Nagendra Swamy Temple in Hosanagara taluk celebrated Nagara…
ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಆ.19ರಂದು ‘ಶಿಕಾರಿಪುರ ಚಲೋ’ ಹಾಗೂ ಬಂದ್ಗೆ ಕರೆ VHP and Bajrang Dal…
ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ Three youths rescued a mother and…
ರ್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ Ranks Institute–JCI Hosanagara Diamond Hosts…