ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟ 5 ವರ್ಷದ ಪುಟ್ಟ ಮಗು :
ಕುಂಸಿ : ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ 5 ವರ್ಷದ ಪುಟ್ಟ ಮಗುವು ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದಿಂದ ರಸ್ತೆ ಕಾಮಗಾರಿಗೆ ಇಮಾಮ್ ಸಾಬ್ ಕುಟುಂಬ ಕೆಲಸಕ್ಕೆಂದು ಆಯನೂರಿನ ಕುಂಸಿಯ ರೇಚಿಕೊಪ್ಪ ಗ್ರಾಮಕ್ಕೆ ಬಂದಿತ್ತು. ನಿನ್ನೆ ಮಧ್ಯಾಹ್ನ ಮಗುವನ್ನು ಜಮೀನಿನ ಪಕ್ಕದಲ್ಲಿ ಮಲಗಿಸಿ ಪೋಷಕರು ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಮಗುವಿಗೆ ಬಿಸಿಲು ಆಗಬಾರದೆಂಬ ಉದ್ದೇಶದಿಂದ ಮಗುವಿನ ಮೇಲೆ ಟುವೆಲ್ ಹಾಸಲಾಗಿತ್ತು ಅದೇ…


