ರೈತ ಮತ್ತು ಯೋಧ ದೇಶದ ಎರಡು ಕಣ್ಣುಗಳು: ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಮತ
ರಿಪ್ಪನ್ ಪೇಟೆ : ದೇಶಕ್ಕೆ ಅನ್ನ ಕೊಡುವ ರೈತ ಹಾಗೂ ದೇಶದ ಗಡಿಯನ್ನು ಕಾಯುವ ಯೋಧ ಇಬ್ಬರೂ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಪ್ರತಿವರ್ಷದಂತೆ ಗಣರಾಜ್ಯೋತ್ಸವದಂದು ರಿಪ್ಪನ್ ಪೇಟೆಯ ಮಾಜಿ ಸೈನಿಕರಾದ ವೀರಭದ್ರಪ್ಪ ಬೆಳವಿಗಿ ಅವರ ನಿವಾಸದಲ್ಲಿ ಇಷ್ಟಲಿಂಗಪೂಜೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಭಾರತ ದೇಶ ಈ ಹಿಂದಿನಿಂದಲೂ ಯೋಗಿಗಳನ್ನು ಗೌರವಿಸಿಕೊಂಡು ಬಂದಿದೆ. ಅಂತೆಯೇ ಯೋಗಿಗಳ ಜೊತೆಗೆ ಯೋಧರನ್ನು ಗೌರವಿಸುವ ಅವಶ್ಯಕತೆ ಈ ಹಿಂದೆಂದಿಗಿಂತಲೂ ಇಂದು…


