ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಿಪ್ಪನ್ಪೇಟೆ ಘಟಕ: ನೂತನ ಸಾರಥಿಯಾಗಿ ಪಿಯುಸ್ ರೋಡ್ರಿಗಸ್ ಪದಗ್ರಹಣ
Pius Rodrigues was sworn in as the President of SCI Ripponpet Legion during a ceremony attended by national and state office bearers. The event highlighted leadership development, social service, and blood donation initiatives.
ರಿಪ್ಪನ್ಪೇಟೆ: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಎಸ್ಸಿಐ) ರಿಪ್ಪನ್ಪೇಟೆ ಲಿಜನ್ನ ನೂತನ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್ಸಿಐನ ರಾಷ್ಟ್ರೀಯ ಮತ್ತು ಪ್ರಾದೇಶಿಕ ಗಣ್ಯರ ಸಮ್ಮುಖದಲ್ಲಿ ನಡೆದ ಅರ್ಥಪೂರ್ಣ ಸಮಾರಂಭದಲ್ಲಿ ಅವರು ಜವಾಬ್ದಾರಿಯನ್ನು ವಹಿಸಿಕೊಂಡರು.
ನೂತನ ಅಧ್ಯಕ್ಷರಿಗೆ ಅಧಿಕಾರದ ಪ್ರಮಾಣ ವಚನ ಬೋಧಿಸಿದ ಎಸ್ಸಿಐ ಉಪಾಧ್ಯಕ್ಷ ಕೆ.ವಿ. ಕುಮಾರ್ ಕೂರ್ಸೆ ಮಾತನಾಡಿ, “ನಾಯಕತ್ವವು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾದದ್ದಲ್ಲ, ಅದೊಂದು ಸಾಮೂಹಿಕ ಜವಾಬ್ದಾರಿ. ಪ್ರತಿ ಸದಸ್ಯರಲ್ಲೂ ನಾಯಕತ್ವದ ಗುಣಗಳನ್ನು ಉದ್ದೀಪನಗೊಳಿಸುವುದೇ ಸೀನಿಯರ್ ಚೇಂಬರ್ನ ಪ್ರಧಾನ ಉದ್ದೇಶವಾಗಿದೆ. ತಾವು ಕಾರ್ಯನಿರ್ವಹಿಸುವ ಯಾವುದೇ ಕ್ಷೇತ್ರವಾದರೂ, ಅಲ್ಲಿ ತಮ್ಮತನವನ್ನು ಸಾಬೀತುಪಡಿಸಲು ನಾಯಕತ್ವದ ಕೌಶಲ್ಯ ಅತ್ಯಗತ್ಯ” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ಸಿಐ ರಾಷ್ಟ್ರೀಯ ಅಧ್ಯಕ್ಷ ಎಂ. ವಾಸುದೇವನ್, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಸಿಗಬೇಕು ಎಂಬುದೇ ಎಸ್ಸಿಐನ ಮೂಲ ಸಿದ್ಧಾಂತ. ಪ್ರಸ್ತುತ ಸಮಾಜದಲ್ಲಿ ಅಸಮಾನತೆ ಹಾಗೂ ಬಡತನ ತಾಂಡವವಾಡುತ್ತಿದ್ದು, ಕೋಟ್ಯಂತರ ಜನರನ್ನು ಬಡತನದ ಬೇಗೆಯಿಂದ ಮುಕ್ತಗೊಳಿಸಿ ಅವರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಮತ್ತಷ್ಟು ಕ್ರಿಯಾಶೀಲವಾಗಬೇಕಿದೆ” ಎಂದು ಕರೆ ನೀಡಿದರು.
ಎಸ್ಸಿಐ ಪೂರ್ವ ಅಧ್ಯಕ್ಷ ಚಿತ್ರ ಕುಮಾರ್ ಅವರು ರಕ್ತದಾನದ ಮಹತ್ವವನ್ನು ವಿವರಿಸುತ್ತಾ, “ರಕ್ತದಾನವು ಮನುಷ್ಯತ್ವದ ಶ್ರೇಷ್ಠ ಅಭಿವ್ಯಕ್ತಿ. ಇದರಿಂದ ರಕ್ತದಾನಿ ಹಾಗೂ ಸ್ವೀಕರಿಸುವವರ ಇಬ್ಬರ ಆರೋಗ್ಯವೂ ವೃದ್ಧಿಸುತ್ತದೆ. ಸಂಸ್ಥೆಯು ಇಂತಹ ಜೀವದಾಯಕ ಕಾರ್ಯಗಳಿಗೆ ಸದಾ ಒತ್ತು ನೀಡುತ್ತಾ ಬಂದಿದೆ” ಎಂದರು.
ರಾಷ್ಟ್ರೀಯ ಪೂರ್ವ ಸಂಯೋಜಕ ಎಚ್.ಎನ್. ಸೂರ್ಯನಾರಾಯಣ ಮಾತನಾಡಿ, “ದೇಶದಲ್ಲಿ ಲಭ್ಯವಿರುವ ವಿಪುಲ ಮಾನವ ಸಂಪನ್ಮೂಲವನ್ನು ದೇಶದ ಪ್ರಗತಿಗೆ ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಸೂಕ್ತ ತರಬೇತಿ ಶಿಬಿರಗಳ ಮೂಲಕ ಈ ಯುವ ಸಂಪನ್ಮೂಲವನ್ನು ಮತ್ತಷ್ಟು ಸಶಕ್ತಗೊಳಿಸಬಹುದು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಕೇವಲ ಪದಗ್ರಹಣಕ್ಕೆ ಸೀಮಿತವಾಗದೆ, ಸಮಾಜದ ಸಾಧಕರನ್ನು ಗುರ್ತಿಸುವ ವೇದಿಕೆಯಾಗಿಯೂ ಮಾರ್ಪಟ್ಟಿತು. ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಾದ ಶುಭ ಎ. ರಾವ್, ಬೇನಾಜ್ ಹೆಚ್. ಎಂ., ದಿವ್ಯಶ್ರೀ ಹಾಗೂ ಅಂಕಿತ್, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕ ಶಿಕ್ಷಕ ಭೋಜಪ್ಪ ಅವರನ್ನು ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ನೈನಿತಾ, ಧನ್ಯ ಹಾಗೂ ಸಂಜೀವ್ ಅವರು ಸನ್ಮಾನಿತರ ಪರಿಚಯವನ್ನು ವಾಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಪಿಯುಸ್ ರೋಡ್ರಿಗಸ್ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಎಸ್ಸಿಐ ಜಿಎಲ್ಸಿ ಸಂಪತ್ ಕುಮಾರ್, ಉಪಾಧ್ಯಕ್ಷ ನಾರಾಯಣ ನಾಯರ್, ತರಬೇತಿ ಮತ್ತು ಯೂತ್ ವಿಂಗ್ ನಿರ್ದೇಶಕ ಹುಸೇನ್ ಹೈಕಾಡಿ, ಕಾರ್ಯದರ್ಶಿ ಸಂಗೀತ ಷಾಜಿ, ಖಜಾಂಚಿ ಸಾಜಿದ್ ಹನೀಫ್, ಉಪಾಧ್ಯಕ್ಷರುಗಳಾದ ನೇಮಪ್ಪ ಬಂಡಿ ಹಾಗೂ ಅಜೇಶ್ ಉಪಸ್ಥಿತರಿದ್ದರು.
ಕುಮಾರಿ ಕುಮುದ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ರಾಮಚಂದ್ರ ಸ್ವಾಗತ ಕೋರಿದರು, ಶೆಲ್ವಿ ಪಿಯೂಸ್ ಸೀನಿಯರ್ ಕ್ರೀಡ್ ಪಠಿಸಿದರು ಹಾಗೂ ಹಬೀಬ್ ಸಾಹಿಬ್ ವರದಿ ಮಂಡಿಸಿದರು.
ಪದಾಧಿಕಾರಿಗಳಾದ ಸರಿತಾ ಅನಿಲ್, ದೇವರಾಜ್ ಮಳವಳ್ಳಿ, ಶಾಝಿ, ಗುಂಡ ನಾಯ್ಕ್, ಪ್ರಭಾಕರ್, ಶೈಜು, ದಾನಪ್ಪ ಇದ್ದರು.
ಮಾಜಿ ಸಿಎಂಗಳ ಪುತ್ರರಿಗೆ ಮಣೆ, ಮಹಿಳೆಯರು, ವಿಪ್ರರು ಹಾಗೂ ಪ್ರಾಮಾಣಿಕರಿಗೆ ಅನ್ಯಾಯ : ಮಾಜಿ ಶಾಸಕ ಬಿ. ಸ್ವಾಮಿರಾವ್ ವಾಗ್ದಾಳಿ…
ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಮೂರು ತುಂಡಾದ ಕಾರು: 22 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ A 22-year-old youth…
ಸಿಎಂ ಡಿಕೆಶಿ ಸಲಹೆಗೆ ಮನ್ನಣೆ : ರಾಜೀನಾಮೆ ನಿರ್ಧಾರ ಕೈಬಿಟ್ಟ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ Sagar MLA Beluru…
ಮದ್ಯದ ಅಮಲಿನಲ್ಲಿ ತಂದೆ-ಮಗನ ನಡುವೆ ಗಲಾಟೆ: ಕತ್ತು ಹಿಸುಕಿ ತಂದೆಯನ್ನೇ ಕೊಂದ ಪುತ್ರ! A 55-year-old man was allegedly…
ಬೇಳೂರುಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ: ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ , ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ Supporters of…
ಗುಡ್ಡ ಬಗೆದು ಇಲಿ ಹಿಡಿದ ಹೈಕಮಾಂಡ್: ನಾರಿಶಕ್ತಿಯ ಬೆನ್ನಿಗೆ ಚೂರಿ, ನಿಷ್ಠಾವಂತರಿಗೆ ಬರೀ ಕಪ್ಪೆಚಿಪ್ಪು! ಅಧಿಕಾರದ ದರ್ಪದಲ್ಲಿ ನೈತಿಕತೆಯೇ ಬಲಿ,…