ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ: ಕೊಳವಂಕ ಗ್ರಾಮದಲ್ಲಿ ಸೋದೆ ಶ್ರೀಗಳ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ
Sode Sri Math seers received a grand welcome in Kolavanka, Hosanagara during their padayatra for the ‘Gaddedinda Garbhagudige’ pure naivedya initiative.
ರಿಪ್ಪನ್ ಪೇಟೆ : ದೇವರಿಗೆ ಸಮರ್ಪಿಸುವ ನೈವೇದ್ಯ ಸಂಪೂರ್ಣ ಶುದ್ಧವಾಗಿರಬೇಕು ಮತ್ತು ಅದರಲ್ಲಿ ರೈತರ ಶ್ರಮದ ಜೊತೆಗೆ ಭಕ್ತಿ ಬೆರೆತಿರಬೇಕು ಎಂಬ ಮಹತ್ವಾಕಾಂಕ್ಷೆಯ ‘ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ ಸಮರ್ಪಣಂ’ ಅಭಿಯಾನದ ಅಂಗವಾಗಿ ಸೋದೆ ಮಠದ ಶ್ರೀಗಳು ಕೈಗೊಂಡಿರುವ ಪಾದಯಾತ್ರೆಗೆ ಮಲೆನಾಡಿನಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಭಾನುವಾರ ಮಧ್ಯಾಹ್ನ ಹೊಸನಗರ ತಾಲೂಕಿನ ಕೊಳವಂಕ ಗ್ರಾಮಕ್ಕೆ ಆಗಮಿಸಿದ ಶ್ರೀಗಳ ಪಾದಯಾತ್ರೆಯನ್ನು ಗ್ರಾಮಸ್ಥರು ಭಕ್ತಿ-ಭಾವದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.
ಇಂದು ಮಧ್ಯಾಹ್ನ ಕೊಳವಂಕ ಗ್ರಾಮವನ್ನು ಪ್ರವೇಶಿಸಿದ ಶ್ರೀಗಳಿಗೆ ಮಹಿಳೆಯರು ಸಾಲಾಗಿ ನಿಂತು ಪೂರ್ಣಕುಂಭ ಕಳಸ ಹೊತ್ತು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕ್ಷಣಕ್ಕೆ ಸಾಕ್ಷಿಯಾದ ಇಡೀ ಗ್ರಾಮದಲ್ಲಿ ಹಬ್ಬದ ಕಳೆ ಮನೆಮಾಡಿತ್ತು. ಗ್ರಾಮದ ಪ್ರವೇಶ ದ್ವಾರದಿಂದ ಹಿಡಿದು ಪ್ರಮುಖ ರಸ್ತೆಗಳ ಉದ್ದಕ್ಕೂ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ಪ್ರತಿಯೊಂದು ಮನೆಯ ಮುಂದೆಯೂ ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಿ, ಹೂವಿನಿಂದ ಅಲಂಕರಿಸಿ ಭಕ್ತಿ ಸಮರ್ಪಿಸಲಾಯಿತು. ವಾದ್ಯಗಳ ಘೋಷ ಹಾಗೂ ಭಜನೆಯೊಂದಿಗೆ ಶ್ರೀಗಳನ್ನು ಗ್ರಾಮದೊಳಗೆ ಬರಮಾಡಿಕೊಳ್ಳಲಾಯಿತು.
ರೈತರು ಬೆಳೆಯುವ ಬೆಳೆಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ, ದೇವರಿಗೆ ಅರ್ಪಿಸುವ ನೈವೇದ್ಯಕ್ಕಾದರೂ ಸಂಪೂರ್ಣ ಸಾವಯವ ಹಾಗೂ ಶುದ್ಧವಾದ ಧಾನ್ಯಗಳನ್ನು ಬಳಸಬೇಕು ಎನ್ನುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ರೈತರು ತಮ್ಮ ಗದ್ದೆಯ ಒಂದು ಸಣ್ಣ ಭಾಗವನ್ನು ಮೀಸಲಿಟ್ಟು, ಅದರಲ್ಲಿ ಯಾವುದೇ ರಾಸಾಯನಿಕ ಬಳಸದೆ, ಕೇವಲ ನೈಸರ್ಗಿಕ ಗೊಬ್ಬರ ಬಳಸಿ ಭಕ್ತಿಯಿಂದ ಬೆಳೆ ಬೆಳೆದು ದೇವಸ್ಥಾನಗಳಿಗೆ ನೈವೇದ್ಯಕ್ಕಾಗಿ ನೀಡುವಂತೆ ಪ್ರೇರೇಪಿಸಲು ಸೋದೆ ಶ್ರೀಗಳು ಖುದ್ದಾಗಿ ಹಳ್ಳಿಹಳ್ಳಿಗಳಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಕೃಷಿ, ರೈತರು ಹಾಗೂ ದೇವರ ನಡುವಿನ ಭಕ್ತಿಯ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ವಿನೂತನ ಪ್ರಯತ್ನವಾಗಿದೆ.
ಶ್ರೀಗಳ ಈ ನಡೆ ಮತ್ತು ಸರಳತೆಯು ಗ್ರಾಮಸ್ಥರಲ್ಲಿ, ಅದರಲ್ಲೂ ವಿಶೇಷವಾಗಿ ಯುವಕರು ಮತ್ತು ರೈತ ವರ್ಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪಾದಯಾತ್ರೆಯುದ್ದಕ್ಕೂ ಸೇರಿದ್ದ ಭಕ್ತರು ಶ್ರೀಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕೃಷಿ ಮತ್ತು ಆಧ್ಯಾತ್ಮವನ್ನು ಬೆಸೆಯುವ ಈ ಪುಣ್ಯ ಕಾರ್ಯಕ್ಕೆ ಕೊಳವಂಕ ಗ್ರಾಮದ ಮುಖಂಡರು ಹಾಗೂ ರೈತರು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…
ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…
ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…
ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…
ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…
ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…