Villagers of Kerehalli near Ripponpet in Shivamogga district celebrated the traditional “Kere Bete” by entering the lake together to catch fish and later sharing the catch equally among all households in the village.
ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡಿನ ಹಲವು ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೆರೆ ಬೇಟೆ ಕೇವಲ ಮೀನು ಹಿಡಿಯುವ ಕಾಯಕವಲ್ಲ; ಅದು ಒಂದು ರೀತಿಯ ಸಾಂಪ್ರದಾಯಿಕ ಕ್ರೀಡೆಯಂತೆಯೇ ಜನರ ಸಂಭ್ರಮದ ಹಬ್ಬವಾಗಿ ಆಚರಿಸಲಾಗುತ್ತದೆ.
ಮಲೆನಾಡಿನಲ್ಲಿ ಗಾಳ ಹಾಕಿ ಮೀನು ಹಿಡಿಯುವುದು ಹಲವರ ನೆಚ್ಚಿನ ಹವ್ಯಾಸವಾಗಿದ್ದರೂ, ಗ್ರಾಮಸ್ಥರೆಲ್ಲ ಸೇರಿ ಸಾಂಘಿಕವಾಗಿ ನಡೆಸುವ ಕೆರೆ ಬೇಟೆ ಇನ್ನಷ್ಟು ರೋಚಕತೆಯನ್ನು ಮೂಡಿಸುತ್ತದೆ. ಊರಿನ ಜನರೆಲ್ಲಾ ಒಟ್ಟಾಗಿ ಕೆರೆಯಲ್ಲಿ ಇಳಿದು, ನೀರಿನಲ್ಲಿ ಮೀನುಗಳನ್ನು ಹುಡುಕಿ ಹಿಡಿಯುವ ದೃಶ್ಯ ಗ್ರಾಮೀಣ ಸಂಸ್ಕೃತಿಯ ವಿಶೇಷತೆಯನ್ನು ತೋರಿಸುತ್ತದೆ.
ಅದೇ ರೀತಿಯಲ್ಲಿ ರಿಪ್ಪನ್ಪೇಟೆ ಪಟ್ಟಣದ ಕೆಳಗಿನ ಕೆರೆಹಳ್ಳಿ ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಕೆರೆ ಬೇಟೆ ನಡೆಸಿ ಸಂಭ್ರಮಿಸಿದ್ದಾರೆ. ಯುವಕರು, ಯುವತಿಯರು, ಹಿರಿಯರು ಹಾಗೂ ಮಹಿಳೆಯರು ಸೇರಿದಂತೆ ಊರಿನ ಬಹುತೇಕ ಜನರು ಕೆರೆಗೆ ಇಳಿದು ಮೀನು ಹಿಡಿದು ಉಲ್ಲಾಸದಿಂದ ಪಾಲ್ಗೊಂಡರು.
ಸಾಮಾನ್ಯವಾಗಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಸಮಯದಲ್ಲಿ ಕೆರೆ ಬೇಟೆ ಆಯೋಜಿಸಲಾಗುತ್ತದೆ. ಅನೇಕ ಗ್ರಾಮಗಳಲ್ಲಿ ಕೆರೆ ಬೇಟೆಯಲ್ಲಿ ಭಾಗವಹಿಸುವವರಿಂದ ಗ್ರಾಮ ಸಮಿತಿ ಶುಲ್ಕ ವಸೂಲಿಸಿ, ಶುಲ್ಕ ಪಾವತಿಸಿದವರು ತಮ್ಮಿಂದ ಸಾಧ್ಯವಾದಷ್ಟು ಮೀನು ಹಿಡಿಯುವ ವ್ಯವಸ್ಥೆ ಇರುತ್ತದೆ.
ಆದರೆ ಕೆರೆಹಳ್ಳಿ ಗ್ರಾಮದ ಕೆರೆ ಬೇಟೆ ವಿಭಿನ್ನವಾಗಿದ್ದು, ಇಲ್ಲಿ ಕುಣಿ ಬಳಸದೇ ಬಲೆಯ ಮೂಲಕ ಮೀನು ಹಿಡಿಯಲಾಗುತ್ತದೆ. ಇಲ್ಲಿ ಯಾರೂ ವೈಯಕ್ತಿಕವಾಗಿ ಮೀನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಗ್ರಾಮಸ್ಥರೆಲ್ಲ ಒಟ್ಟಾಗಿ ಹಿಡಿದ ಮೀನನ್ನು ನಂತರ ಊರಿನ ಎಲ್ಲಾ ಮನೆಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಈ ದಿನವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸುವುದು ಇಲ್ಲಿನ ವಿಶಿಷ್ಟ ಪರಂಪರೆಯಾಗಿದೆ.
ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…
ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ Residents of Baluru and Kaleshwara villages…
ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ Wild elephant…
ಕಾರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ, 1.42 ಕೆಜಿ ಗಾಂಜಾ ಹಾಗೂ ಕಾರು ಜಪ್ತಿ Two people were arrested…
ಎಣ್ಣೆ ಮತ್ತಿನಲ್ಲಿ ಅಪಾಯಕಾರಿ ಆಟೋ ಚಾಲನೆ: ಚಾಲಕನ ಬಂಧನ, ವಾಹನ ಪೊಲೀಸ್ ವಶಕ್ಕೆ Shivamogga West Traffic Police registered…
ಅರಸಾಳು ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು! ಪ್ರಯಾಣಿಕರ ಪರದಾಟ The…