A gold theft incident was reported in Chennakoppa village of Sagara taluk where fraudsters posed as powder sellers. A case has been registered at Anandapur Police Station.
ಸಾಗರ: ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಬಂದ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಚಿನ್ನಾಭರಣವನ್ನು ಮೋಸದಿಂದ ಕದ್ದೊಯ್ದ ಘಟನೆ ನಡೆದಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ನಿವಾಸಿ ರತ್ನಾವತಿ ಅವರ ಮನೆ ಬಾಗಿಲಿಗೆ ಸುಮಾರು 35–40 ವರ್ಷದ ಇಬ್ಬರು ವ್ಯಕ್ತಿಗಳು ಆಗಮಿಸಿದ್ದರು. ಇವರಲ್ಲಿ ಒಬ್ಬರು ಪಾತ್ರೆ ಸ್ವಚ್ಛಗೊಳಿಸುವ ಬಿಳಿ ಬಣ್ಣದ ಪೌಡರ್ ಮಾರಾಟಕ್ಕೆ ಇದೆ ಎಂದು ಸ್ಯಾಂಪಲ್ ನೀಡಿದ್ದು, ಇನ್ನೊಬ್ಬರು ಬೆಳ್ಳಿ ಹಾಗೂ ಬಂಗಾರ ತೊಳೆಯುವ ಕೆಂಪು ಪೌಡರ್ ಕೂಡ ಇದೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾರೆ.
ಚಿನ್ನ ಪಳಪಳ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿ ರತ್ನಾವತಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ತೆಗೆಯಲು ಕೇಳಿದಾಗ ಅವರು ನಿರಾಕರಿಸಿದರು. ಬಳಿಕ, ಕುತ್ತಿಗೆಯಲ್ಲಿದ್ದಂತೆಯೇ ಸರಕ್ಕೆ ಪೌಡರ್ ಹಚ್ಚುವಂತೆ ಸೂಚಿಸಿದ್ದು, ಪೌಡರ್ ಹಚ್ಚಿದ ತಕ್ಷಣ ಬಂಗಾರ ಕಪ್ಪಾಗಿದೆ.
ತಕ್ಷಣ ಆರೋಪಿಗಳು ಮನೆಯವರಿಂದ ಬಟ್ಟಲಿನಲ್ಲಿ ನೀರು ಮತ್ತು ಅರಿಶಿನ ತರಿಸಿಕೊಂಡು, ಕಪ್ಪಾದ ಸರವನ್ನು ಅದರಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ಚಿನ್ನದ ಬಣ್ಣ ಮರಳಿ ಬರುತ್ತದೆ ಎಂದು ಹೇಳಿದರು. ಇದೇ ವೇಳೆ ಪಾತ್ರೆಗೆ ಮತ್ತಷ್ಟು ಪೌಡರ್ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅವರು ತೆರಳಿದ ಬಳಿಕ ರತ್ನಾವತಿ ಪಾತ್ರೆಯ ನೀರು ಚೆಲ್ಲಿ ನೋಡಿದಾಗ, ಚಿನ್ನ ಪಳಪಳ ಹೊಳೆಯುವ ಬದಲು ಸರವೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತೆ ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು ರಿಪ್ಪನ್ ಪೇಟೆ : ಬಾಳಿನ…
ಸೆ.5ರ ಶಿಕ್ಷಕರ ದಿನಾಚರಣೆಗೆ ಗೈರು; ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಆರೋಪ BJP leaders in Sagar have…
ಯುವಶಕ್ತಿಯೇ ಎಚ್ಚೆತ್ತುಕೋ: ಈದ್ ಮಿಲಾದ್ ಸಂಭ್ರಮದಲ್ಲಿ ಮೊಳಗಿದ ‘ನಶಾಮುಕ್ತ ಭಾರತ’ ಸಂದೇಶ Ripponpete Police launched an anti-drug awareness…
ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ High drama…
ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ! An…
ರಿಪ್ಪನ್ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…