ಹಳೆ ವಾಹನ ಇಟ್ಟುಕೊಂಡಿದ್ದೀರಾ? ಈ ಸುದ್ದಿ ಓದಿ – ಇಲ್ಲದಿದ್ದರೆ ನಿಮ್ಮ ಗಾಡಿ ಗುಜರಿ ಸೇರುವುದು ಗ್ಯಾರಂಟಿ! | Own an Old Vehicle? Read This or Scrap Is Guaranteed

ನಿಮ್ಮ ಬಳಿ ಹಳೆಯ ವಾಹನಗಳಿವೆಯೇ? ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯಲು ಕಚೇರಿಗೆ ಅಲೆದಾಡದೆ, ವಾಹನವನ್ನು ತೋರಿಸದೇ ಏಜೆಂಟರಿಗೆ ಹಣ ನೀಡಿ ಪ್ರಮಾಣಪತ್ರ ಮಾಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಈ ಹೊಸ ನಿಯಮಗಳು ನಿಮಗೆ ನಿಜಕ್ಕೂ ಆಘಾತ ತರುವಂತವು.

ವಾಹನಗಳ ಫಿಟ್‌ನೆಸ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಯಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಕ್ರಮಗಳಿಂದ ನಿರ್ವಹಣೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಶಾಶ್ವತ ಬೀಗ ಜಡಿಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಕಠಿಣ ನಿರ್ಧಾರ ಕೈಗೊಂಡಿದೆ.


ATS ಕೇಂದ್ರಗಳಲ್ಲಿ ಕಡ್ಡಾಯ ಪರೀಕ್ಷೆ – ನಕಲಿ ಪ್ರಮಾಣಪತ್ರಗಳಿಗೆ ಫುಲ್ ಸ್ಟಾಪ್….

ಇದುವರೆಗೂ ಅನೇಕ ವಾಹನ ಮಾಲೀಕರು ವಾಹನವನ್ನು ಪರಿಶೀಲನೆಗೊಳಪಡಿಸದೇ, ಕೇವಲ ದಾಖಲೆಗಳ ಆಧಾರದಲ್ಲಿ ಅಥವಾ ಏಜೆಂಟರ ಪ್ರಭಾವದಿಂದ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದರು. ಇದು ದೊಡ್ಡ ಮಟ್ಟದ ಅಕ್ರಮ ದಂಧೆಯಾಗಿ ರೂಪುಗೊಂಡಿತ್ತು.

ಆದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಹೊಸ ಕರಡು ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ಖಾಸಗಿ ವಾಹನಗಳು ಕೂಡ ವಾಣಿಜ್ಯ ವಾಹನಗಳ ಮಾದರಿಯಲ್ಲೇ Automated Testing Stations (ATS) ಕೇಂದ್ರಗಳಲ್ಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕಾಗಿದೆ.ಅಂದರೆ, ವಾಹನವನ್ನು ಭೌತಿಕವಾಗಿ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವುದು ಅನಿವಾರ್ಯ. ಕೇಂದ್ರಕ್ಕೆ ಹಾಜರಾಗದ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಸಿಗುವುದೇ ಇಲ್ಲ.
15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಹೊಸ ಅಗ್ನಿಪರೀಕ್ಷೆ
ಹೊಸ ನಿಯಮಗಳ ಅನ್ವಯ, 15 ವರ್ಷ ಮೇಲ್ಪಟ್ಟ ವಾಹನಗಳ ನೋಂದಣಿ ನವೀಕರಣಕ್ಕೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಕಡ್ಡಾಯವಾಗಿದೆ. ದೇಶಾದ್ಯಂತ ಈಗಾಗಲೇ 160ಕ್ಕೂ ಹೆಚ್ಚು ಹೈಟೆಕ್ ATS ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಈ ಕೇಂದ್ರಗಳಲ್ಲಿ ಮನುಷ್ಯರ ಹಸ್ತಕ್ಷೇಪ ಬಹುತೇಕ ಇಲ್ಲ. ಅತ್ಯಾಧುನಿಕ ಗಣಕೀಕೃತ ಯಂತ್ರಗಳೇ ವಾಹನದ ಯಾಂತ್ರಿಕ ಸ್ಥಿತಿ ಹಾಗೂ ಮಾಲಿನ್ಯ ಹೊರಸೂಸುವಿಕೆ ಮಟ್ಟವನ್ನು ನಿಖರವಾಗಿ ಪರಿಶೀಲಿಸುತ್ತವೆ.

15 ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ 5 ವರ್ಷಗಳಿಗೊಮ್ಮೆ ಈ ಪರೀಕ್ಷೆ ಕಡ್ಡಾಯವಾಗಿದ್ದು, ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಪ್ರಮಾಣಪತ್ರ ನಿರಾಕರಿಸಲಾಗುತ್ತದೆ.

ಬಂತು 10 ಸೆಕೆಂಡ್ ಜಿಯೋ ಟ್ಯಾಗ್ ವೀಡಿಯೊ ಸಾಕ್ಷ್ಯದ ಹೊಸ ರೂಲ್ಸ್

ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ವೀಡಿಯೊ ಸಾಕ್ಷ್ಯ ನಿಯಮ.
ಫಿಟ್‌ನೆಸ್ ಪ್ರಮಾಣಪತ್ರ ನೀಡುವ ಮೊದಲು, ಸಂಬಂಧಪಟ್ಟ ATS ಕೇಂದ್ರವು ವಾಹನದ ಕನಿಷ್ಠ 10 ಸೆಕೆಂಡುಗಳ ಜಿಯೋ ಟ್ಯಾಗ್ ಮಾಡಲಾದ ವೀಡಿಯೊವನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

ಈ ವೀಡಿಯೊದಲ್ಲಿ:
ವಾಹನದ ಮುಂಭಾಗ, ಹಿಂಭಾಗ, ಎಡ ಹಾಗೂ ಬಲ ಬದಿಗಳು (360 ಡಿಗ್ರಿ ದೃಶ್ಯ)

ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಬೇಕು.

ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆ ಸ್ಪಷ್ಟವಾಗಿರಬೇಕು.

ಸ್ಥಳ ಮತ್ತು ಸಮಯದ ಡಿಜಿಟಲ್ ದಾಖಲೆಯಿರಬೇಕು.

ಈ ನಿಯಮದಿಂದ ವಾಹನ ಹಾಜರುಪಡಿಸದೇ ಸರ್ಟಿಫಿಕೇಟ್ ಪಡೆಯುವ ಹಳೆಯ ಚಾಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

ಪರೀಕ್ಷೆಯಲ್ಲಿ ಫೇಲ್ ಆದರೆ ಗುಜರಿ ಸೇರುವುದು ಖಚಿತ
ವಾಹನವು ಕಠಿಣ ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ, ಸರ್ಕಾರ ಇದಕ್ಕೂ ಸ್ಪಷ್ಟ ಕ್ರಮ ನಿಗದಿಪಡಿಸಿದೆ.ಫೇಲ್ ಆದ ದಿನಾಂಕದಿಂದ ವಾಹನವನ್ನು ದುರಸ್ತಿಪಡಿಸಿ ಮತ್ತೆ ಪರೀಕ್ಷೆಗೆ ಹಾಜರುಪಡಿಸಲು 180 ದಿನಗಳ (6 ತಿಂಗಳು) ಗಡುವು ನೀಡಲಾಗುತ್ತದೆ.

ಈ ಅವಧಿಯೊಳಗೆ ವಾಹನ ಉತ್ತೀರ್ಣವಾಗದಿದ್ದರೆ
ಆ ವಾಹನವನ್ನು End of Life Vehicle (ELV) ಎಂದು ಘೋಷಿಸಲಾಗುತ್ತದೆ.

ರಾಷ್ಟ್ರೀಯ ವಾಹನ್ ಡೇಟಾಬೇಸ್‌ನಲ್ಲಿ “ಸ್ಕ್ರ್ಯಾಪ್‌ಗೆ ಯೋಗ್ಯ” ಎಂದು ನಮೂದಿಸಲಾಗುತ್ತದೆ.ವಾಹನವನ್ನು ರಸ್ತೆಯಲ್ಲಿ ಓಡಾಡಲು ಸಂಪೂರ್ಣ ಅನರ್ಹ ಎಂದು ಪರಿಗಣಿಸಲಾಗುತ್ತದೆ
ಕಡ್ಡಾಯವಾಗಿ ಅಧಿಕೃತ Vehicle Scrapping ಪ್ರಕ್ರಿಯೆಗೆ ಒಳಪಡಿಸಬೇಕು.

ಯಾವುದೇ ವಿನಾಯಿತಿ ಇಲ್ಲ – ಎರಡು ಮಾತ್ರ ಆಯ್ಕೆಗಳು:

ಹಿಂದಿನ ನಿಯಮಗಳಲ್ಲಿ ಶುಲ್ಕ ಪಾವತಿಸಿ ಫಿಟ್‌ನೆಸ್ ಅವಧಿ ವಿಸ್ತರಣೆ ಮಾಡುವ ಅವಕಾಶವಿತ್ತು. ಆದರೆ ಹೊಸ ಕರಡು ನಿಯಮಗಳಲ್ಲಿ ಈ ಆಯ್ಕೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಇನ್ನು ಮುಂದೆ ವಾಹನ ಮಾಲೀಕರ ಮುಂದೆ ಇರುವ ಆಯ್ಕೆಗಳು ಕೇವಲ ಎರಡು:

ವಾಹನವನ್ನು ಸಂಪೂರ್ಣ ದುರಸ್ತಿಗೊಳಪಡಿಸಿ ಸುಸ್ಥಿತಿಯಲ್ಲಿ ಇಡುವುದು

ELV ಆಗಿ ಘೋಷಿತವಾದ ವಾಹನವನ್ನು ಗುಜರಿಗೆ ಹಾಕುವುದು
ಯಾವುದೇ ಲೋಪದೋಷಗಳಿಗೆ, ಪ್ರಭಾವಗಳಿಗೆ ಅಥವಾ ಏಜೆಂಟರ ಆಟಾಟೋಪಗಳಿಗೆ ಜಾಗವೇ ಇಲ್ಲ.

India introduces strict new vehicle fitness rules to stop fake certificates. Private vehicles above 15 years must undergo compulsory Automated Testing Station (ATS) inspection with 10-second geo-tagged video proof.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…

4 hours ago

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…

17 hours ago

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ​ಮಾನವೀಯತೆಯೆಂಬುದು ಕೇವಲ…

17 hours ago

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…

17 hours ago

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ. ಭಾನುಪ್ರಕಾಶ್ ಕರೆ

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…

19 hours ago

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…

23 hours ago