ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ
ಭದ್ರಾವತಿ: ನಾಯಿ — ನಿಷ್ಠೆ, ಪ್ರೀತಿ ಮತ್ತು ಬದ್ಧತೆಯ ಪ್ರತೀಕ. ಮಾಲೀಕನಿಗಾಗಿ ಜೀವವನ್ನೇ ಪಣಕ್ಕಿಡುವ ಈ ಪ್ರಾಣಿ, ಕೆಲವೊಮ್ಮೆ ಅವನಿಂದ ದೂರವಾಗುವುದನ್ನೇ ಸಹಿಸಲಾರದು. ಭದ್ರಾವತಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಅದಕ್ಕೆ ಜೀವಂತ ಉದಾಹರಣೆ.
ನಗರದ ಹುತ್ತಾಕಾಲನಿಯ ಜಿಂಕ್ಲೈನ್ ಪ್ರದೇಶದ ನಿವಾಸಿ ಲಾರೆನ್ಸ್ (61) ಪೈಂಟರ್ ಕೆಲಸ ಮಾಡುತ್ತಿದ್ದು, ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನಿಧನರಾದರು. ಆಸ್ಪತ್ರೆಯಿಂದ ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆಯೇ, ಮನೆಯ ಶ್ವಾನವು ಆ ದೃಶ್ಯವನ್ನು ಕಂಡು ತೀವ್ರ ನೊಂದುಕೊಂಡಿತು.
ಮಾಲೀಕನ ಮೃತದೇಹದ ಪಕ್ಕದಲ್ಲೇ ಅದು ಮಲಗಿ, ಶಾಂತವಾಗಿ ತನ್ನ ಅಂತಿಮ ಉಸಿರೆಳೆದಿತು. ಕುಟುಂಬಸ್ಥರು ಲಾರೆನ್ಸ್ ಅವರ ಅಂತ್ಯಕ್ರಿಯೆ ಬಳಿಕ, ಆ ಶ್ವಾನವನ್ನೂ ಮನೆಯ ಹಿಂಭಾಗದಲ್ಲೇ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನಡೆಸಲಾಯಿತು.
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…