ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವೈದ್ಯೆ ಗೆ 1 ಕೋಟಿ 81 ಲಕ್ಷ ರೂ ವಂಚನೆ
ಶಿವಮೊಗ್ಗ : ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ ವೈದ್ಯೆ ಗೆ 1 ಕೋಟಿ 81 ಲಕ್ಷದ 33 ಸಾವಿರದ 770 ರೂಗಳ ಮೋಸ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ ವೈದ್ಯೆ ಒಬ್ಬರಿಗೆ ಒಬ್ಬ ಅಪರಿಚಿತ ವ್ಯಕ್ತಿ ದಿನಾಂಕ 26/4 /2025 ರಂದು ಕರೆ ಮಾಡಿ ನಾವು ಬುಲ್ ಮಾರ್ಕೆಟ್ ಎಂಬ ಕಂಪನಿ ನಡೆಸುತ್ತಿದ್ದು ಸದರಿ ಕಂಪನಿಯ ವೆಬ್ಸೈಟ್ ನಲ್ಲಿ ಷೇರ್ ಮೂಲಕ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ತಿಳಿಸುತ್ತಾನೆ.
ಇದನ್ನು ನಂಬಿದ ವೈದ್ಯೆ ಅವರು ತಿಳಿಸಿದ ವೆಬ್ಸೈಟ್ ಗೆ https://www.bullmarkets.com ನಲ್ಲಿ ವೈದ್ಯೆ ತನ್ನ ಹೆಸರಿನಲ್ಲಿ ಲಾಗಿನ್ ಆಗಿದ್ದರು.ನಂತರ ಅವರು ಟೆಲಿಗ್ರಾಂ ಆಪ್ ಮುಖಾಂತರ Bull markets app bot ಎಂಬ ಖಾತೆ ಮೂಲಕ ಅವರ ಟೆಲಿಗ್ರಾಂ ಖಾತೆಗೆ ಮೆಸೇಜ್ ಮಾಡಿ ಅವರು ಹೇಳಿದಂತೆ ಮೊದಲಿಗೆ 1090 ರೂಗಳನ್ನು ಹಾಗೂ 430 ರೂಗಳನ್ನು ಇನ್ವೆಸ್ಟ್ ಮಾಡಿದ್ದು ನಂತರ ಒಂದು ತಿಂಗಳ ನಂತರ Bull markets ಖಾತೆಯಲ್ಲಿ ಇವರು ಹಾಕಿದ ಇನ್ವೆಸ್ಟ್ಮೆಂಟಿಗೆ ಲಾಭಾಂಶ ಬಂದಿದೆ ನೋಡಿ ಎಂದು ತೋರಿಸುತ್ತಾರೆ. ನಂತರ ಅವರು ವಿವಿಧ ನಂಬರ್ ಗಳಿಂದ ಕರೆ ಮಾಡಿ ಹೆಚ್ಚಿನ ಹಣ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸುತ್ತಾರೆ .ಅದನ್ನೇ ನಂಬಿದ ಇವರು ವಿವಿಧ ಹಂತಗಳಲ್ಲಿ ವಿವಿಧ ಖಾತೆಗಳಿಗೆ ಸುಮಾರು 1 ಕೋಟಿ 81,33,770 ರೂಗಳನ್ನು ಜಮಾ ಮಾಡಿದ್ದರು.
ಆದರೆ ಹೀಗೆ ಇಷ್ಟೆಲ್ಲಾ ಹಣ ಹಾಕಿದರು ಕೂಡ ಬುಲ್ ಮಾರ್ಕೆಟ್ಸ್್ ನಲ್ಲಿ ಹಣ ವಿತ್ ಡ್ರಾ ಮಾಡಲು 50,000 ರೂಗಳನ್ನು ಪಾವತಿಸುವಂತೆ ತಿಳಿಸಿದ್ದರು.ತ್ಳ ಇದರಿಂದ ಅನುಮಾನ ಗೊಂಡ ವೈದ್ಯೆ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅವರ ಸ್ನೇಹಿತರು ನಿನಗೆ ಮೋಸವಾಗಿದೆ. ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ . ಈ ಬಗ್ಗೆ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡು ಎಂದು ಹೇಳಿದ್ದರು.
ಎಚ್ಚೆತ್ತುಕೊಂಡ ವೈದ್ಯೆ ಸದರಿ ನಂಬರ್ ಗಳು ಹಾಗೂ ಅಕೌಂಟಿಗೆ ಹಾಕಿದ ಹಣದ ಡೀಟೇಲ್ಸ್ ಇಟ್ಟುಕೊಂಡು ಪೊಲೀಸ್ ಠಾಣೆಗೆ ತನ್ನ ಹಣ ಹಿಂದಿರುಗಿಸಿ ಕೊಡುವಂತೆ ದೂರು ನೀಡಿದ್ದಾರೆ. ಸದರಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…