ಸಮರ್ಪಕ ಗೊಬ್ಬರ ಸಿಗದೇ ಬಂಕಾಪುರದ ರೈತರ ಪರದಾಟ –
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ಜೊತೆಗೆ ಮುಂಗಾರು ಮಳೆ ಸಹ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ತಮ್ಮ ಜಮೀನುಗಳನ್ನು ಹದಮಾಡಿಟ್ಟುಕೊಂಡು, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಖಾಸಗಿ ಅಂಗಡಿಗಳಿಗೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ಮುಗಿಬೀಳುತ್ತಿದ್ದಾರೆ.
ಆದರೆ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಯೂರಿಯಾ ಗೂಬ್ಬರ ರೈತರಿಗೆ ಸಮರ್ಪಕವಾಗಿ ಗೊಬ್ಬರ ದೊರೆಯದೇ ರೈತರಿಗೆ ಸಂಕಷ್ಟ ಉಂಟಾಗಿದೆ.
ಬಂಕಾಪುರದಲ್ಲಿ ರೈತ ಸಂಪರ್ಕ ಸೊಸೈಟಿ ಅವರಿಂದ ರೈತರಿಗೆ ಸಹಾಯವಾಗಲು 15 ಟನ್ ಯೂರಿಯಾ ಗೊಬ್ಬರವನ್ನು ತರಸಿ ರೈತರ ಮೂಗಿಗೆ ತುಪ್ಪ ವರೆಸಿದಂಯಾಯಿತು. ಸಮರ್ಪಕವಾಗಿ ಸಿಗದ ಗೊಬ್ಬರಕ್ಕೆ ರೈತರೆಲ್ಲರೂ ಗುಂಪು ಸೇರಿಕೊಂಡು ಚಿರಾಡುತ್ತಾ, ಕೇಕೆ ಹೊಡಿಯುತ್ತಾ. ಗದ್ದಲದ ಗೊಂದಲ ಉಂಟಾಯಿತು. ರೈತರು ಬೆಳಗಿನ ಜಾವ 5 ಗಂಟೆಗೆ ರೈತ ಸಂಪರ್ಕ ಸೊಸೈಟಿಗೆ ಬಂದು ಸದರಿಯಲ್ಲಿ ನಿಂತರೂ ಕೂಡ ನಮಗೆ ಗೊಬ್ಬರ ಕೊಡುತ್ತಿಲ್ಲವೆಂದು ರೈತರ ಆಕ್ರೋಶ ವ್ಯಕ್ತಪಡಿಸಿದರು.
ಮುಂಜಾನೆಯಿಂದಲೇ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ನಮ್ಮ ಕೆಲಸ ಬಿಟ್ಟು ಬಿತ್ತನೆ ಬೀಜ ಖರೀದಿ ಮಾಡುವುದೇ ಕೆಲಸವಾಗಿದೆ ಆದರೆ ಕ್ಯೂ ನಲ್ಲಿದ್ದವರನ್ನು ಬಿಟ್ಟು ಅಧಿಕಾರಿಗಳೊಡನೆ ಮಾತನಾಡಿ ನೇರವಾಗಿ ಯೂರಿಯಾ ಗೊಬ್ಬರ ಚೀಲಗಳನ್ನು ಒಯ್ಯತ್ತಿದ್ದರು. ಸೊಸೈಟಿ ಅವರು ರೈತರಿಗೆ ಪ್ರತಿಯೊಬ್ಬರಿಗೂ ಗೊಬ್ಬರ ಸಿಗಬೇಕೆಂದು ಒಂದು ಹೊಲದ ಖಾತೆಯವರಿಗೆ ಗೊಬ್ಬರದ ಎರಡು ಚೀಲ ವೆಂದು ಹೇಳಿ, ಅಧಿಕಾರಿಗಳು ತಮಗೆ ಬೇಕಾದವರಿಗೆ ಐದರಿಂದ ಹತ್ತು ಚೀಲ ದಂತೆ ಸಾಗಿಸಿದರು. ಸದರಿಯಲ್ಲಿ ನಿಂತ ರೈತರಿಗೆ ಗೊಬ್ಬರ ಇಲ್ಲದಂತಾಯಿತು. ಯೂರಿಯಾ ಗೊಬ್ಬರ ಪಡೆಯದ ರೈತರು ಅಧಿಕಾರಿಗಳೊಡನೆ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ನಿಂಗರಾಜ್ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ್
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…