IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
IIFL ಫೈನಾನ್ಸ್ ನಿಂದ ಮೋಸ ಆರೋಪ – ಕಛೇರಿಗೆ ಬೀಗ ಜಡಿದ ಗ್ರಾಹಕ
ರಿಪ್ಪನ್ ಪೇಟೆ : ಇಲ್ಲಿನ ಐಐಎಫ಼್ಎಲ್ ಗೋಲ್ಡ್ ಫೈನಾನ್ಸ್ ನಲ್ಲಿ ಗ್ರಾಹಕನೊಬ್ಬನಿಗೆ ಮೋಸವಾಗಿದೆ ಎಂದು ಆರೋಪಿಸಿ ಇಂದು ಕಛೇರಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾಗಲೇ ಬೀಗ ಜಡಿದು ಕಛೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ರಿಪ್ಪನ್ ಪೇಟೆ ಸಮೀಪದ ಕಾರಗೋಡು ನಿವಾಸಿ ಗಣೇಶ್ ಎಂಬಾತ IIFL ಫೈನಾನ್ಸ್ ನಲ್ಲಿ ಎರಡು ತಿಂಗಳ ಹಿಂದೆ ಬಂಗಾರವನ್ನು ಅಡವಿಟ್ಟಿದ್ದು ದಿನಾಂಕ 21-04-2025 ರಂದು ಬಿಡಿಸಲು ಹೋಗಿದ್ದಾನೆ ಈ ಸಂಧರ್ಭದಲ್ಲಿ ಬಂಗಾರ ಬಿಡಿಸಲು ಒಂದು ಲಕ್ಷದ ಒಂಬತ್ತು ಸಾವಿರ ರೂ ಗಳನ್ನು ಸ್ಥಳೀಯ ಕಛೇರಿಯ ಸಿಬ್ಬಂದಿಗಳು ಸೂಚಿಸಿ ಸ್ಕ್ಯಾನರ್ ಗೆ ಆನ್ ಲೈನ್ ಮೂಲಕ ಕಂಪನಿಯ ಅಕೌಂಟ್ ಗೆ ಕಳುಹಿಸಿದ್ದಾನೆ ಈ ಸಂಬಂಧ ಮೊಬೈಲ್ ಆಪ್ ನಲ್ಲಿ ಸಹ ಪಾವತಿಯಾಗಿದೆ ಎಂದು ಬಂದಿದೆ.
ಅಷ್ಟು ಹಣ ಪಾವತಿಸಿದ್ದರೂ ಸ್ಥಳೀಯ ಫೈನಾನ್ಸ್ ಸಿಬ್ಬಂದಿಗಳು ಬಂಗಾರ ಕೊಡಲು ಒಪ್ಪಲಿಲ್ಲ ಯಾಕೆಂದು ಕೇಳಿದಾಗ ನೀವು ಕಳುಹಿಸಿದ ಹಣ ನಮ್ಮ ಸಿಸ್ಟಮ್ ನಲ್ಲಿ ತೋರಿಸುತಿಲ್ಲ ಎಂದು ಸಬೂಬು ಹೇಳಿದ್ದಾರೆ ಗ್ರಾಹಕ ಗಣೇಶ್ ಸಿಬ್ಬಂದಿಗಳ ಬಳಿ ಅಂಗಲಾಚಿ ಕೇಳಿದರೂ ಸಹ ಅವರು ಕೊಡಲು ಸಾಧ್ಯವೇ ಇಲ್ಲ ನಿಮ್ಮ ಹಣ ಎಲ್ಲೋ ಬ್ಲಾಕ್ ಆಗಿದೆ ನಿಮ್ಮ ಅಕೌಂಟ್ ಗೆ ಅದು ವಾಪಾಸ್ ಬರುತ್ತೆ ಎಂದು ಹೇಳಿ ಸಾಗಹಾಕಿದ್ದಾರೆ.
ಕುಟುಂಬದ ಕಾರ್ಯಕ್ರಮವಿದ್ದ ಹಿನ್ನಲೆಯಲ್ಲಿ ಅದೇ ದಿನ ಗ್ರಾಹಕ ಗಣೇಶ್ ಸ್ನೇಹಿತರ ಬಳಿ ಮತ್ತೆ ಒಂದು ಲಕ್ಷದ ಒಂಬತ್ತು ಸಾವಿರೂ ಹೊಂಚಿಕೊಂಡು ಬಂದು ಬಂಗಾರ ಬಿಡಿಸಿದ್ದಾನೆ ನಂತರ ಹಣ ವಾಪಾಸು ಯಾವಾಗ ಬರುತ್ತೆ ಎಂದು ವಿಚಾರಿಸಿದಾಗ ಒಂದೆರಡು ದಿನಗಳಲ್ಲಿ ಬರುತ್ತೆ ಎಂದು ಹೇಳಿ ಸಾಗಹಾಕಿದ್ದಾರೆ.
ಹೀಗೆ ಕಳೆದ ಹದಿನೈದು ದಿನಗಳಿಂದ ಫೈನಾನ್ಸ್ ಗೆ ಓಡಾಡುತಿದ್ದ ಗ್ರಾಹಕನಿಗೆ ಸುಮ್ಮನೆ ಸಬೂಬು ಹೇಳುತಿದ್ದಾರೆ ನಾಲ್ಕು ದಿನಗಳ ಹಿಂದೆ ನಿಮ್ಮ ಹಣ ನಮ್ಮ ಅಕೌಂಟ್ ಗೆ ಬಂದಿದೆ ನಿಮ್ಮ ಅಕೌಂಟ್ ನಂಬರ ಕಳಿಸಿ ಎಂದಿದ್ದಾರೆ ಆದರೆ ಇಲ್ಲಿವರೆಗೂ ಆ ಹಣ ಹಿಂದಿರುಗದೇ ಇರುವ ಕಾರಣ ರೊಚ್ಚಿಗೆದ್ದ ಗ್ರಾಹಕ ಗಣೇಶ್ ಸೋಮವಾರ ಕಛೇರಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾಗಲೇ ಕಛೇರಿಗೆ ಬೀಗ ಜಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾನೆ.
ನಂತರ IIFL ಫೈನಾನ್ಸ್ ನಿಂದ ಗ್ರಾಹಕ ಗಣೇಶ್ ಗೆ ಸಂಜೆ ಫೈನಾನ್ಸ್ ಸಿಬ್ಬಂದಿಗಳು ಪ್ರಾಮಿಸ್ ಲೆಟರ್ ಕೊಟ್ಟು ಸಾಗಹಾಕಿದ್ದಾರೆ. ಇನ್ನೂ ಈ ಬಗ್ಗೆ ಮೇಲಾಧಿಕಾರಿಗಳು ಏನು ಕ್ರಮ ಕೈಗೊಳ್ಳುತಾರೆ ಕಾದುನೋಡಬೇಕಾಗಿದೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್