RIPPONPETE | ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ಹೊಡಿಬಡಿ – ದೂರು ಪ್ರತಿದೂರು ದಾಖಲು
Fight between two members in Gram Panchayat General Meeting – Complaint and counter-complaint filed
RIPPONPETE | ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ಹೊಡಿಬಡಿ – ದೂರು ಪ್ರತಿದೂರು ದಾಖಲು
ರಿಪ್ಪನ್ ಪೇಟೆ : ಇಲ್ಲಿನ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು ಎನ್ನಲಾಗುತಿದ್ದು ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಪಟ್ಟಣದ ಗ್ರಾಪಂ ಬರುವೆ 3 ನೇ ವಾರ್ಡ್ ಸದಸ್ಯರಾದ ನಿರೂಪ್ ಕುಮಾರ್ ಹಾಗೂ ಗವಟೂರು 1 ನೇ ವಾರ್ಡ್ ನ ಸದಸ್ಯರಾದ ಸುಂದರೇಶ್ ಕೆರೆಹಳ್ಳಿ ನಡುವೆ ಮಂಗಳವಾರ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮಾರಾಮಾರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ಼್ ಐಆರ್ ದಾಖಲಾಗಿದೆ.
ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸಲ್ಲಿಸಿರುವ ದೂರಿನಲ್ಲೇನಿದೆ..!!?
ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯಲ್ಲಿ ನಾನು ಸದಸ್ಯನಾಗಿದ್ದು, ಈ ದಿನ ನಡೆದ ಸಾಮಾನ್ಯ ಸಭೆಯಲ್ಲಿ
ಪಾಲ್ಗೊಂಡಿದ್ದು, ಸದರಿ ಸಭೆಯಲ್ಲಿ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ಪಂಚಾಯತಿ ಸದಸ್ಯರಾದ ಸುಂದರೇಶ್ ರವರು ನಾನು ರಿಪ್ಪನ್ ಪೇಟೆಯಲ್ಲಿ ನಿರ್ಮಿಸುತ್ತಿರುವ ಲೌಔಟ್ ವಿಚಾರದಲ್ಲಿ ದಾಖಲಾತಿಗಳು ಸರಿ ಇಲ್ಲಾ ಎಂದು ಮಾತನಾಡಿರುತ್ತಾರೆ. ಆಗ ನೀವು ಬಾರ್ & ರೆಸ್ಟೋರೆಂಟ್ ರವರ ಬಳಿ ಹಣ ಪಡೆದಿರುವುದಾಗಿ ಬಾರ್ ಮಾಲೀಕರಾದ ಅಶ್ವತ್ ಗೌಡ ಎಂಬುವವರು ನನಗೆ ಹೇಳಿದ್ದಾರೆ ಹಾಗೂ ನೀವು ಸಹ ಎಂ.ಪಿ.ಎಂ. ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿದ್ದೀರಿ ಹೇಳಿದಾಗ ಸುಂದರೇಶ್ ರವರು ಏಕಾಏಕಿ ಅವಾಚ್ಯ ಶಬ್ದಗಳಿಂದ ಏನೋ ಸೂ**ಮಗ, ಬೋ*** ಮಗನೇ ಎಂದು ಬೈದು ಹೊಡೆಯಲು ಬಂದಿರುತ್ತಾರೆ. ಸುಂದರೇಶ್ ಗ್ರಾಮ ಪಂಚಾಯತಿಯ ಕೊಠಡಿಯಿಂದ ಹೊರ ಹೋಗಲು ಪ್ರಯತ್ನಿಸಿದಾಗ ಹೊರ ಹೋಗದಂತೆ ಅಡಗಟ್ಟಿ ನಿಲ್ಲಿಸಿ, ಕೈಗಳಿಂದ ಭುಜಕ್ಕೆ ಬಲಗೈಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಇದರಿಂದ ಬಲಗೈ ಗೆ ರಕ್ತಗಾಯವಾಗಿರುತ್ತದೆ, ಆಗ ಸಭೆಯಲ್ಲಿ ಇದ್ದ ಉಳಿದ ಸದಸ್ಯರುಗಳು ಬಂದು ಜಗಳ ಬಿಡಿಸಿ ಜೀವ ರಕ್ಷಣೆ ಮಾಡಿರುತ್ತಾರೆ. ಆಗ ಸುಂದರೇಶ್ ರವರು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ನಿನ್ನ ಜೀವ ತೆಗೆಯುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರ. ನಂತರ ಸ್ನೇಹಿತನ ಸಹಾಯದಿಂದ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತೇನೆ ಆದ್ದರಿಂದ ನನ್ನನ್ನು ಅಡ್ಡಗಟ್ಟಿ, ತಡೆದು ಅವಾಚ್ಯವಾಗಿ ಬೈದು, ಕೈಗಳಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಸುಂದರೇಶ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ.
ಗ್ರಾಪಂ ಸದಸ್ಯ ಸುಂದರೇಶ್ ಕೆರೆಹಳ್ಳಿ ಸಲ್ಲಿಸಿರುವ ದೂರಿನಲ್ಲೇನಿದೆ..
ರಿಪ್ಪನ್ ಪೇಟೆ ಗ್ರಾಮ ಗ್ರಾಮ ಪಂಚಾಯ್ತಿಯಲ್ಲಿ ಬೆಳಿಗ್ಗೆ 11-30 ಕ್ಕೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದು ಲೇ-ಔಟ್ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು ಈ ಸಂಧರ್ಭದಲ್ಲಿ ನಿರೂಪ್ ಕುಮಾರ್ ರವರು ಸಭೆಯಲ್ಲಿ ಚರ್ಚೆಯ ವಿಷಯವನ್ನು ಬಿಟ್ಟು ಬಾರ್ ವಿಚಾರವಾಗಿ ಬಾರ್ ಮಾಲೀಕರಿಂದ ಹಣಪಡೆದಿದ್ದರೆಂದು ನನ್ನ ಮೇಲೆ ಆರೋಪ ಮಾಡಿರುತ್ತಾರೆ. ಇದು ಸುಳ್ಳು ಆರೋಪವಾಗಿದ್ದು ಸಾಕ್ಷಿ ಸಮೇತ ಸಾಬೀತು ಪಡಿಸಲು ಅವರಿಗೆ ಕೇಳಿದಾಗ ಮಾತಿಗೆ ಮಾತು ಬೆಳೆಸಿ ಜಗಳಮಾಡಿ ನನ್ನನ್ನು ತೇಜೋವಧೆ ಮಾಡಲು ಪ್ರಯತ್ನ ಮಾಡಿದರು. ಗ್ರಾಮ ಪಂಚಾಯ್ತಿ ಸಭೆಯಿಂದ ಹೊರಹೋಗುವಾಗ ನಿರೂಪ್ ಕುಮಾರ್ ಹೊರಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ಮತ್ತು ಗ್ರಾಮ ಪಂಚಾಯ್ತಿಯ ಕುರ್ಚಿ ತೆಗೆದುಕೊಂಡು ಹಲ್ಲೆ ಮಾಡಲು ಬಂದಿರುತ್ತಾನೆ.ನಂತರ ನನಗೆ ಸೂ***ಮಗ ಬೋ***ಮಗ ಮುಂತಾದ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿರುತ್ತಾರೆ ಆಗ ಸಭೆಯಲ್ಲಿದ್ದ ಉಳಿದ ಸದಸ್ಯರು ಜಗಳ ಬಿಡಿಸಿ ನನನ್ನ್ನು ರಕ್ಷಣೆ ಮಾಡಿರುತ್ತಾರೆ.
ನಿರೂಪ್ ಕುಮಾರ್ ರವರು ನಿನ್ನನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ನಿನ್ನ ಜೀವ ತೆಗೆಯುತ್ತೇನೆ, ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಹಲ್ಲೆ ಮಾಡಿದ್ದರಿಂದ ನನ್ನ ಕೈಗೆ ಎದೆಗೆ ಒಳಪೆಟ್ಟಾಗಿರುತ್ತೆ ನಂತರ ಸ್ನೇಹಿತರ ಸಹಾಯ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಗೆ ಮನೆಗೆ ತೆರಳಿರುತ್ತೇನೆ. ನಂತರ ಠಾಣೆಗೆ ಬಂದು ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ನಿರೂಪ್ ಕುಮಾರ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…