Pahalgam attack: ಕೇರಳ ಪ್ರವಾಸಿಗರ ಜೀವ ಉಳಿಸಿದ ಉಪ್ಪು – ಢಾಬಾ ಮಾಲೀಕನ ಹಠಮಾರಿತನಕ್ಕೆ 11 ಮಂದಿ ಬಚಾವ್!

Pahalgam attack: ಕೇರಳ ಪ್ರವಾಸಿಗರ ಜೀವ ಉಳಿಸಿದ ಉಪ್ಪು – ಢಾಬಾ ಮಾಲೀಕನ ಹಠಮಾರಿತನಕ್ಕೆ 11 ಮಂದಿ ಬಚಾವ್!

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಪ್ರಕರಣದ ಬಳಿಕ ಇದಕ್ಕೆ ಹೊಂದಿಕೊಂಡಂತೆ ದಿನಕ್ಕೊಂದು ರೋಚಕ ಕಥಾನಕಗಳು ಬೆಳಕಿಗೆ ಬರುತ್ತಿದ್ದು, ಇದೀಗ ಇದೇ ಕಾಶ್ಮೀರದ ಡಾಬಾ ಮಾಲೀಕನ ಹಠಮಾರಿತನದಿಂದಾಗಿ 11 ಮಂದಿ ಪ್ರವಾಸಿಗರು ಜೀವಉಳಿಸಿಕೊಂಡ ರೋಚಕ ಘಟನೆ ಬೆಳಕಿಗೆ ಬಂದಿದೆ.

ಅಚ್ಚರಿಯಾದರೂ ಇದು ಸತ್ಯ.. ಊಟ ಮಾಡಲೆಂದು ಕಾಶ್ಮೀರದ ಡಾಬಾಗೆ ಹೋಗಿದ್ದ ಕೇರಳದ 11 ಮಂದಿಯ ಪ್ರವಾಸಿಗರ ತಂಡ ಅಲ್ಲಿ ಮಟನ್ ತಿನಿಸಿನಲ್ಲಿ ಉಪ್ಪು ಜಾಸ್ತಿಯಾಗಿದೆ ಎಂದು ಜಗಳ ಮಾಡಿದ್ದು, ಇದೇ ಜಗಳದಿಂದಾಗಿ ಅವರು ಉಗ್ರ ದಾಳಿ ನಡೆದ ಪಹಲ್ಗಾಮ್ ಗೆ ತಡವಾಗಿ ಹೋಗಿದ್ದಾರೆ. ಇವರು ಹೋಗುವ ಹೊತ್ತಿಗೆ ಅಲ್ಲಿ ಉಗ್ರ ದಾಳಿಯಾದ ಕುರಿತು ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ಇಡೀ ಪ್ರವಾಸಿಗರ ತಂಡವೇ ಹೌಹಾರಿದೆ.

ಕೇರಳ ಮೂಲದ 11 ಮಂದಿ ಪ್ರವಾಸಿಗರ ತಂಡ ಕಾಶ್ಮೀರಕ್ಕೆ ಭೇಟಿ ನೀಡಲು ಬಂದಿತ್ತು. ಭಯೋತ್ಪಾದಕ ದಾಳಿಯ ದಿನದಂದು ಕೊಚ್ಚಿಯ ನಿವಾಸಿ ಲಾವಣ್ಯ ಮತ್ತು ಅವರ ಕುಟುಂಬದ ಇತರ 10 ಸದಸ್ಯರು ಪಹಲ್ಗಾಮ್‌ಗೆ ಹೋಗುತ್ತಿದ್ದರು. ಶ್ರೀನಗರ ತಲುಪಿದ ಕುಟುಂಬವು ಪಹಲ್ಗಾಮ್‌ಗೆ ಹೋಗುವ ಮೊದಲು ಎರಡು ದಿನಗಳ ಕಾಲ ಸ್ಥಳೀಯ ತಾಣಗಳಿಗೆ ಭೇಟಿ ನೀಡಿತು. ಈ ಕುಟುಂಬದ ಗುಂಪಿನಲ್ಲಿ ಲಾವಣ್ಯ, ಅವರ ಪತಿ ಆಲ್ಬಿ ಜಾರ್ಜ್, ಅವರ ಮೂವರು ಮಕ್ಕಳು, ಅವರ ಪತಿಯ ಪೋಷಕರು, ಸೋದರಸಂಬಂಧಿ ಮತ್ತು ಅವರ ಕುಟುಂಬ ಇತ್ತು.

ಜೀವ ಉಳಿಸಿದ ಉಪ್ಪು

ಪಹಲ್ಗಾಮ್ ನಲ್ಲಿ ಸಾಕಷ್ಟು ತಾಣಗಳಿವೆ ಎಂದು ಸ್ಥಳೀಯರು ಹೇಳಿದ್ದರು. ಹೀಗಾಗಿ ನಾವು ಪಹಲ್ಗಮ್ ಅನ್ನು ಹೆಚ್ಚು ವಿವರವಾಗಿ ನೋಡಬೇಕೆಂದು ಬಯಸಿದ್ದರಿಂದ ಪಹಲ್ಗಮ್‌ಗೆ ಎರಡು ದಿನಗಳ ಪ್ರವಾಸವನ್ನು ಯೋಜಿಸಿದ್ದೆವು. ನಾವು ಬೈಸರಣ್ ವ್ಯಾಲಿಯಲ್ಲಿ ಮೇಲಕ್ಕೆ ಹೋಗುತ್ತಿದ್ದೆವು ಮತ್ತು ಅಲ್ಲಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದ್ದಾಗ ಊಟಕ್ಕೆ ಎಂದು ಒಂದು ಢಾಬಾದಲ್ಲಿ ನಿಂತೆವು. ಅಂದು ಢಾಬಾದಲ್ಲಿ ನಾವು ಒಂದಷ್ಟು ತಿನಿಸುಗಳನ್ನು ಆರ್ಡರ್ ಮಾಡಿದೆವು. ಈ ಪೈಕಿ ಮಟನ್ ರೋಗನ್ ಜೋಶ್‌ ಕೂಡ ಒಂದಾಗಿತ್ತು. ಆದರೆ ಅದರಲ್ಲಿ ಹೆಚ್ಚು ಉಪ್ಪು ಸೇರಿತ್ತು. ಈ ಬಗ್ಗೆ ನಮ್ಮ ಪತಿ ಢಾಮಾ ಮಾಲೀಕರ ಗಮನಕ್ಕೆ ತಂದರು ಎಂದು ಲಾವಣ್ಯ ಹೇಳಿದ್ದಾರೆ.

ಢಾಬಾ ಮಾಲೀಕನ ಹಠಮಾರಿ ತನ

ಬಳಿಕ ರೆಸ್ಟೋರೆಂಟ್ ಮಾಲೀಕ ಪ್ರವಾಸಿಗರಿಗೆ ಸಮಜಾಯಿಷಿ ನೀಡಿದನಾದರೂ, ತಪ್ಪು ತನ್ನ ಹೊಟೆಲ್ ಸಿಬ್ಬಂದಿಗಳದ್ದೇ ಆದ್ದರಿಂದ ಅವರಿಗೆ ಮತ್ತೆ ಮಟನ್ ರೆಸಿಪಿ ನೀಡುವುದಾಗಿ ಹೇಳಿದ್ದಾನೆ. ಈ ವೇಳೆ ಆ ಪ್ರವಾಸಿಗರು ಬೇಡ ಎಂದು ಹೊರಡಲು ನಿಂತರೂ ಇದಕ್ಕೆ ಒಪ್ಪಂದ ರೆಸ್ಟೋರೆಂಟ್ ಮಾಲೀಕ ಇಲ್ಲ ನೀವು ನಮ್ಮ ಅತಿಥಿಗಳು ನಿಮಗೆ ತೊಂದರೆಯಾದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿ ಮತ್ತೆ ಮಟನ್ ರೋಗನ್ ಜೋಶ್‌ ರೆಸಿಪಿಯನ್ನು ಮತ್ತೆ ಸಿದ್ಧಪಡಿಸಲು ಹೇಳಿದ್ದಾನೆ. ಇದರಿಂದಾಗಿ ಮತ್ತೊಂದುಷ್ಟು ಸಮಯ ಈ ಕುಟುಂಬ ಅದೇ ಡಾಬಾದಲ್ಲೇ ಕಳೆಯಬೇಕಾಯಿತು. ನಾವು ಮತ್ತೆ ಊಟ ಮಾಡಲು ಪ್ರಾರಂಭಿಸಿದಾಗ, 10-20 ಕುದುರೆಗಳು ಕೆಳಗೆ ಓಡುತ್ತಿರುವುದನ್ನು ನೋಡಿದೆವು. ಪ್ರಾಣಿಗಳು ಹೆದರುತ್ತಿದ್ದರಿಂದ ಏನೋ ತಪ್ಪಾಗಿದೆ ಎಂದು ನಮಗೆ ಅನಿಸಿತು. ನಾವು ಮೊದಲು ಭೂಕುಸಿತವಾಗಿರಬಹುದು ಎಂದು ಭಾವಿಸಿದ್ದೆವು.

ಹೊಗಬೇಡಿ ಎಂದು ಕೈ ಸನ್ಹೆ ಮಾಡಿದ್ದ ಪ್ರವಾಸಿಗರು

ಇದಾದ ಬೆನ್ನಲ್ಲೇ ಅದೇ ಮಾರ್ಗದಲ್ಲಿ ವಾಹನಗಳಲ್ಲಿ ಬಂದ ಇತರೆ ಪ್ರವಾಸಿಗರು ಕೈ ಸನ್ನೆಗಳೊಂದಿಗೆ ಹೋಗದಂತೆ ನಮಗೆ ಹೇಳಿದರು. ಸಿಆರ್‌ಪಿಎಫ್ ಮತ್ತು ಪ್ರವಾಸಿಗರ ನಡುವೆ ಏನೋ ಸಂಘರ್ಷವಾಗಿದೆ ಎಂದು ಹೇಳಿದರು. ಈ ಬೆಳವಣಿಗೆ ಬೆನ್ನಲ್ಲೇ ಪಹಲ್ಗಾಮ್ ಗೆ ಹೋಗುವ ಯೋಜನೆ ಕೈ ಬಿಟ್ಟೆವು. ಇದಾದ ಕೆಲವೇ ನಿಮಿಷಗಳಲ್ಲಿ ನಮಗೆ ಉಗ್ರ ದಾಳಿ ಕುರಿತು ಮಾಹಿತಿ ಲಭ್ಯವಾಯಿತು. ಆಗ ನಿಜಕ್ಕೂ ನಾವು ಆಘಾತಕ್ಕೊಳಗಾದೆವು ಮತ್ತು ನಾವು ಎಷ್ಟು ಅದೃಷ್ಟವಂತರು ಎಂದು ಅರಿತುಕೊಂಡೆವು ಎಂದು ಲಾವಣ್ಯ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…

48 minutes ago

ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ – ಆರೋಪಿ ಅರೆಸ್ಟ್!

ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…

1 hour ago

ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ

ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…

1 hour ago

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…

1 hour ago

ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ

ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…

10 hours ago

ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ

ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…

10 hours ago