HOSANAGARA | ಹಾಡಹಗಲೇ ಬೈಕ್ ನಲ್ಲಿ ಬಂದು 50 ಸಾವಿರ ಹಣವಿದ್ದ ಯುವತಿಯ ಬ್ಯಾಗ್ ಎಗರಿಸಿದ ಕಳ್ಳರು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನೂ..!!??
ಹೊಸನಗರ : ಪಟ್ಟಣದ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಡಹಗಲೇ ಯುವತಿಯೊಬ್ಬಳ ಬ್ಯಾಗ್ ನ್ನು ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಟ್ಟಣದಾದ್ಯಂತ ಸುದ್ದಿಯಾಗಿತ್ತು.
ವಿಷಯ ಹಬ್ಬುತಿದ್ದಂತೆ ಮಾವಿನಕೊಪ್ಪ ಸರ್ಕಲ್ ನಲ್ಲಿ ಇಬ್ಬರು ಕಳ್ಳರನ್ನು ಜನರು ತಡೆಗಟ್ಟಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ ಅಷ್ಟಕ್ಕೂ ಇದೊಂದು ಪೊಲೀಸ್ ಜಾಗೃತಿ ಕಾರ್ಯಕ್ರಮವಾಗಿತ್ತು ಆದರೂ ಕಳ್ಳತನದ ಬಗ್ಗೆ ಕ್ಷಣಮಾತ್ರದಲ್ಲಿ ಸುದ್ದಿಯಾಗಿ ಜನರು ಅಲರ್ಟ್ ಆಗಿದ್ದರು..
ನಡೆದಿದ್ದೇನು..!!??
ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಪಿಎಸ್ಐ ಶಂಕರಗೌಡ ಪಾಟೀಲ್ರವರ ನೇತೃತ್ವದಲ್ಲಿ ಜನ ಜಾಗೃತಿಗಾಗಿ ಅಣಕು ಪ್ರದರ್ಶನವನ್ನು ಹೊಸನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪಾತ್ರಧಾರಿಗಳಾಗಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದು ನಿಜವಾಗಿಯೂ ಬಸ್ ನಿಲ್ದಾಣದ ಆವರಣದಲ್ಲಿ 50 ಸಾವಿರ ಹಣ ಇರುವ ಬ್ಯಾಗ್ ಕಳ್ಳತನವಾಗಿದೆ ಎಂಬ ರೀತಿಯಲ್ಲಿ ಹೊಸನಗರದಲ್ಲೆಲ್ಲಾ ಸುದ್ದಿ ಹಬ್ಬಿದೆ.
ರಾಜ್ಯಾದ್ಯಂತ ಬೈಕ್ನಲ್ಲಿ ಬಂದು ಸರ ಕಳ್ಳತನ, ಬ್ಯಾಗ್ ಕಳ್ಳತನ ಈ ರೀತಿ ಕಳ್ಳತನವಾಗುತ್ತಿದ್ದು ಹೊಸನಗರದಲ್ಲಿಯೂ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಕೌಸಲ್ಯರವರು ಬ್ಯಾಗ್ ಹಿಡಿದುಕೊಂಡು ಬಸ್ ನಿಲ್ದಾಣದ ಮುಂಭಾಗ ನಿಂತಿರುವ ಹಾಗೇ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಗೋಪಾಲಕೃಷ್ಣ ಹಾಗೂ ಶಿವರಾಜ್ರವರು ಬೈಕ್ನಿಂದ ಬಂದು ಮುಂಭಾಗದಲ್ಲಿ ನಿಲ್ಲಿಸಿ ಒಬ್ಬರು ಬೈಕ್ನಿಂದ ಇಳಿದು ಬ್ಯಾಗ್ ಕಸಿದುಕೊಂಡು ಹೋಗುತ್ತಾರೆ ಅಷ್ಟು ಹೊತ್ತಿಗೆ ಹೊಸನಗರದ ಜನರು ಒಟ್ಟಾಗಿ ಸೇರಿ ಕಳ್ಳರನ್ನು ಹುಡುಕುತ್ತಾರೆ. ಅಷ್ಟು ಹೊತ್ತಿಗೆ ಕಳ್ಳರ ವೇಷದಾರಿಗಳು ಮಾವಿನಕೊಪ್ಪ ಸರ್ಕಲ್ಗೆ ಹೋಗಿರುತ್ತಾರೆ ಅಲ್ಲಿನ ಜನರು ಅಡ್ಡ ಹಾಕಿ ಕಳ್ಳರನ್ನು ಹಿಡಿಯುತ್ತಾರೆ.
ಬ್ಯಾಗ್ ಕಳ್ಳತನವಾದ ತಕ್ಷಣ 112ಗೆ ಫೋನ್ ಮಾಡುತ್ತಾರೆ. ತಕ್ಷಣ 112 ಸಿಬ್ಬಂದಿಗಳು ಬಂದು ಕಳ್ಳತನದ ಬಗ್ಗೆ ವಿಚಾರಿಸಲಾಗಿ ಸಬ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ್ರವರಿಗೆ ಕಳ್ಳತನವಾದ ಬಗ್ಗೆ ಮಾಹಿತಿ ನೀಡುತ್ತಾರೆ. ಶಂಕರಗೌಡ ಪಾಟೀಲ್ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ತನಿಖೆ ಕಾರ್ಯ ನಡೆಸುತ್ತಾರೆ ತಕ್ಷಣ ಸಿಪಿಐಗೆ ಮಾಹಿತಿ ನೀಡುತ್ತಾರೆ. ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ರವರ ನೇತೃತ್ವ ತಂಡ ಸ್ಥಳಕ್ಕೆ ಆಗಮಿಸಿ ಕಳ್ಳತನವಾದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಾರೆ. ತಕ್ಷಣ ತಾಲ್ಲೂಕಿನ ಎಲ್ಲ ಚೆಕ್ ಪೊಸ್ಟ್ಗಳಿಗೆ ಮಾಹಿತಿ ನೀಡುತ್ತಾರೆ. ಮಾಹಿತಿಯ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕಳ್ಳರ ವೇಶದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ಠಾಣೆಗೆ ಕರೆತಂದು ತನಿಖೆ ನಡೆಸುತ್ತಿರುತ್ತಾರೆ.
ಒಟ್ಟಾರೆ ಒಂದು ಸಿನಿಮಾ ಕಥೆಯಂತೆ ಮೂಡಿಬಂದ ಪೊಲೀಸ್ ಇಲಾಖೆಯ ಕಾರ್ಯ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿ ಜನರಿಗೆ ಜಾಗೃತಿ ಮೂಡಿಸಿದ್ದು ಹೊಸನಗರ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು ಅಚ್ಚುಕಟ್ಟಾಗಿ ತಮಗೆ ನೀಡಿರುವ ಪಾತ್ರವನ್ನು ನಿರ್ವಹಿಸಿದ್ದರು.
ಈ ಜಾಗೃತಿ ಕಾರ್ಯಕ್ರಮ ಒಂದು ಕ್ಷಣ ನಿಜವಾಗಿಯೂ ಕಳ್ಳತನ ನಡೆದೇಬಿಟ್ಟಿತು ಎನ್ನುವಂತೆ ಸಾರ್ವಜನಿಗೆ ಅನ್ನಿಸಿದಂತೂ ಸತ್ಯ….
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…