ರಾಜ್ಯದ ಗಮನ ಸೆಳೆದ ಹೊಸನಗರ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್
ವಿದ್ಯಾರ್ಥಿಗಳ ಮುಖ ನೋಡದೆ ಅವರ ಧ್ವನಿಯ ಮೂಲಕ ಹೆಸರನ್ನು ಗುರುತಿಸುವ ಕೇರಳದ ಶಿಕ್ಷಕನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಶಿಕ್ಷಕನೋರ್ವ ಅದೇ ಮಾದರಿಯಲ್ಲಿ ಗಮನ ಸೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಬ್ಬಳಗೆರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು, ಮೊದಲಿಗೆ ಎಸ್ಎಸ್ಎಲ್ಸಿ ಯ 50 ವಿದ್ಯಾರ್ಥಿಗಳ ಹೆಸರನ್ನು ಧ್ವನಿಯ ಮೂಲಕ ಹೇಳಿ ಗಮನ ಸೆಳೆದಿದ್ದಾರೆ.
ವಸತಿ ಶಾಲೆಯಲ್ಲಿರುವ 250 ವಿದ್ಯಾರ್ಥಿಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನು ಹೇಳುವ ಸಾಮರ್ಥ್ಯ ಹೊಂದಿರುವ ಯೋಗೇಶ್ ಮಾದರಿ ಎನಿಸಿದ್ದಾರೆ.
ಮಣಿವಣ್ಣನ್ ಟಾಸ್ಕ್!
ಕೇರಳ ರಾಜ್ಯದಲ್ಲಿ ಇಂತಹ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್ ತಮ್ಮ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಿಗೆ ವಿದ್ಯಾರ್ಥಿಗಳ ಧ್ವನಿ ಆಧಾರದ ಮೇಲೆ ಹೆಸರು ಹೇಳುವ ಟಾಸ್ಕ್ ನೀಡಿದ್ದರು. ಅಲ್ಲದೆ ಇದರಲ್ಲಿ ಉತ್ತಮ ಸಾಧನೆ ತೋರುವ ಟಾಪ್ 10 ಶಿಕ್ಷಕರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಜೊತೆ ಲಂಚ್ ಮಾಡುವ ಅವಕಾಶ ಕೂಡ ನೀಡಿದ್ದರು.
ರಾಜ್ಯದಲ್ಲಿ ಇಲಾಖೆಯಡಿ 721 ವಸತಿ ಶಾಲೆಗಳಿದ್ದು ಸುಮಾರು 6000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧ, ಅರ್ಪಣಾ ಮನೋಭಾವ ಇದ್ದಲ್ಲಿ ಮಾತ್ರ ಒಳ್ಳೆ ಶಿಕ್ಷಣ ಸಿಗುತ್ತದೆ ಎಂಬ ಕಲ್ಪನೆಗೆ.. ಕೇರಳದ ಶಿಕ್ಷಕನ ವಿಡಿಯೋ ಮೂಲಕ ರಾಜ್ಯದ ಶಿಕ್ಷಕರಿಗೆ ಟಾಸ್ಕ್ ನೀಡಿದ್ದು ಇಡೀ ರಾಜ್ಯದ ಶಿಕ್ಷಕರಲ್ಲಿ ಸಂಚಲನ ಮೂಡಿಸಿದೆ.
ಯೋಗೇಶ್ ಹೆಬ್ಬಾಳಗೆರೆ ಮಾದರಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಶಿಕ್ಷಕರು ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಉತ್ತಮ ಟಾಸ್ಕ್:
ನಮ್ಮ ಇಲಾಖೆ ನೀಡಿದ ನಿರ್ದೇಶನದ ಮೇಲೆ ಈ ಪ್ರಯತ್ನ ಮಾಡಲಾಗಿದೆ. 10 ನೇ ತರಗತಿಯಲ್ಲಿರುವ 50 ಹೆಸರುಗಳನ್ನು ಧ್ವನಿಯ ಮೂಲಕ ಗುರುತಿಸಿದ್ದೇನೆ. ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು ಶೇ 90 ರಷ್ಟು ಹೇಳುತ್ತೇನೆ ಎಂಬ ವಿಶ್ವಾಸವಿದೆ.
-ಯೋಗೇಶ್ ಹೆಬ್ಬಳಗೆರೆ,ಪ್ರಾಂಶುಪಾಲರು
ಇಂದಿರಾ ಗಾಂಧಿ ವಸತಿ ಶಾಲೆ ಗೇರುಪೂರ
ಮಣಿವಣ್ಣನ್ ಮೆಚ್ಚುಗೆ:
ಕೇರಳದ ವಿಡಿಯೋ ಟ್ವಿಟ್ಟರ್ ನಲ್ಲಿ ನೋಡಿದಾಗ ನಮ್ಮ ಶಿಕ್ಷಕರು ಹೇಗಿದ್ದಾರೆ ಒಂದು ಸಣ್ಣ ಪ್ರಯತ್ನವಾಗಿ ಟಾಸ್ಕ್ ನೀಡಬೇಕೆನಿಸಿತು. ರಾಜ್ಯದಲ್ಲಿ ಐದಾರು ಶಿಕ್ಷಕರು ವಿಡಿಯೋ ಶೇರ್ ಮಾಡಿದ್ದಾರೆ. ಪ್ರಾಂಶುಪಾಲ ಯೋಗೇಶ್ ಧ್ವನಿಯ ಮೇಲೆ ವಿದ್ಯಾರ್ಥಿಗಳನ್ನು ಗುರುತಿಸಿ ಗಮನ ಸೆಳೆದಿದ್ದಾರೆ.. ಶಿಕ್ಷಕರಿಗೆ ಅರ್ಪಣಾ ಮನೋಭಾವ ಇದ್ದಲ್ಲಿ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಚಲನವಲನ, ಪರಿಚಯ ಮುಖ್ಯ.
-ಮಣಿವಣ್ಣನ್, ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ.
ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…
ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…
ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…
ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…
ಬೈಕ್ ಸವಾರನ ಮೇಲೆ ಮುಸಿಯ ದಾಳಿ; ಗಂಭೀರ ಗಾಯ A bike rider was seriously injured after a…
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…