ಜನಪದ ವೈದ್ಯರತ್ನ ಮಂಗಳದ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇನ್ನಿಲ್ಲ…
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಜನಪದ ವೈದ್ಯ ರತ್ನ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿ ಯಲ್ಲಿ ಪ್ರಚಾರ ವಿಲ್ಲದೇ ಯಶಸ್ಸು ಕಂಡ ಮಂಗಳದ ಶಿವಣ್ಣ ಗೌಡರು ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ 4.45 ಕ್ಕೆ ದೈವಾಧೀನರಾಗಿದ್ದಾರೆ.
ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸಮೀಪದ ರಾಮನಸರ ಮಂಗಳ ಇಂದು ರಾಜ್ಯ ದಲ್ಲೇ ಹೆಸರು ಪಡೆದುಕೊಂಡಿದೆ. ಪಾರಂಪರಿ ನಾಟಿ ಔಷಧಿ ನೀಡುತ್ತಾ
ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಮಂಗಳದ ಶಿವಣ್ಣ ಗೌಡರು. ತಮ್ಮ ಇಳಿವಯಸ್ಸಿನಲ್ಲು ಹುಮ್ಮಸ್ಸಿನಿಂದ ಸೇವೆ
ಮಾಡುತ್ತ.ಕೈಕಾಲು ಮುರಿತ ಬೆನ್ನುನೋವು ಮೂಳೆ
ನೋವುಗಳಿಗೆ ಇವರು ಔಷಧಿ ಗಳನ್ನು ನೀಡಿ ಸೈ
ಎನಿಸಿಕೊಂಡಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಜನರು ಇವರ ಚಿಕಿತ್ಸೆಗೆ ಮಾರುಹೋಗಿದ್ದರು.
ಇವರ ಮಗ ಶ್ರೀಕಾಂತ್ ಕೂಡ ನಾಟಿ ವೈದ್ಯರಾಗಿದ್ದು ಇವರ ಜೊತೆ ಸೇವೆಯಲ್ಲಿ ನೆರವಾಗುತಿದ್ದರು.
ಸಮಾಜದ ಅನೇಕ ಪ್ರತಿಷ್ಠಿತ ರು ಇವರ ಸೇವೆ ಪಡೆದುಕೊಂಡಿದ್ದಾರೆ.ಮಾಜಿ ಸಚಿವೆ ಮನೋರಮ ಮದ್ವರಾಜ್ ಪತ್ರಕರ್ತೆ ಗೌರಿ ಲಂಕೇಶ್ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್ ಸಚಿವರಾದ ಈಶ್ವರಪ್ಪನವರು ಹಾಗೂ ಹೊರ ರಾಜ್ಯಗಳ ಹಾಗೂ ಹೊರರಾಷ್ಟ್ರದ ಜನರು
ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಮಾಜಿ ಪ್ರದಾನಿ ಹೆಚ್ ಡಿ ದೇವೆಗೌಡರು, ಮಾಜಿ ಮುಖ್ಯ ಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರವರು ಇವರ ಸೇವೆಯನ್ನು ಮೆಚ್ಚಿದ್ದರು.
ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ, ಹಿರೇಕೆರೂರು ಸ್ವಾಮಿಗಳಿಂದ ಸನ್ಮಾನ ಬಹಳಷ್ಟು ಸಂಘ ಸಂಸ್ಥೆ ಗಳ ಸನ್ಮಾನ ಪ್ರಶಸ್ತಿ ಪುರಸ್ಕಾರ ಗಳು ಇವರನ್ನು
ಹುಡುಕಿಕೊಂಡು ಬಂದಿದೆ…
ಜನಪದ ವೈದ್ಯ ಲೋಕಕ್ಕೆ ಅವಿಸ್ಮರಣೀಯ ಸೇವೆ ನೀಡಿದ್ದ ನಾಟಿ ವೈದ್ಯ ಶಿವಣ್ಣಗೌಡರು ಇನ್ನೂ ನೆನಪು ಮಾತ್ರ…
– ರಫ಼ಿ ರಿಪ್ಪನ್ಪೇಟೆ
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…