ಚಿನ್ನದ ನಾಣ್ಯವೆಂದು ನಂಬಿಸಿ ಲಕ್ಷಾಂತರ ರೂ ವಂಚನೆ

ಚಿನ್ನದ ನಾಣ್ಯವೆಂದು ನಂಬಿಸಿ ಲಕ್ಷಾಂತರ ರೂ ವಂಚನೆ

.ದೊಡ್ಡಬಳ್ಳಾಪುರದ ವ್ಯಕ್ತಿಗೆ ರಾಣೆಬೆನ್ನೂರಿನ ವ್ಯಕ್ತಿ ಆಯನೂರಿನಲ್ಲಿ ಚಿನ್ನದ ನಾಣ್ಯದ ಕಥೆಗಳನ್ನ ಕಟ್ಟಿ ವಂಚಿಸಿದ ಘಟನೆ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೊಡ್ಡಬಳ್ಳಾಪುರದ ನಂದಿಗುಂದ ಗ್ರಾಮದ ಬಾಯಣ್ಣ ಎಂಬ ವ್ಯಕ್ತಿ ಕುಟುಂಬ ಸಮೇತರಾಗಿ ಡಿ.13 ರಂದು ಧರ್ಮಸ್ಥಳಕ್ಕೆ ಹೋದಾಗ ರಾಣೆಬೆನ್ನೂರಿನ ರಾಮಣ್ಣ ಎಂಬ ವ್ಯಕ್ತಿ ಪರಿಚಯವಾಗುತ್ತಾನೆ. ಇಬ್ಬರು ಮೊಬೈಲ್ ನಂಬರ್ ನ್ನ ಎಕ್ಸಚೇಂಜ್ ಮಾಡಿಕೊಂಡಿರುತ್ತಾರೆ. ಊರಿಗೆ ಹೋದ ಮೇಲೆ ಕರೆ ಮಾಡುವುದಾಗಿ ರಾಮಣ್ಣ ಬಾಯಣ್ಣನಿಗೆ ಹೇಳಿರುತ್ತಾರೆ.

ಬಾಯಣ್ಣ ದೊಡ್ಡಬಳ್ಳಾಪುರಕ್ಕೆ ಹೋಗಿ ಮೂರೇದಿನಕ್ಕೆ ರಾಮಣ್ಣ ಕರೆ ಮಾಡಿ ನಮಗೆ ಮನೆಯಿಲ್ಲ ಮನೆ ಕಟ್ಟಿಸುತ್ತಿದ್ದೇವೆ. ನಮಗೆ ಹಣದ ಅವಶ್ಯಕತೆ ಇದೆ. ನನ್ನ ಬಳಿ ಚಿನ್ನದ ನಾಣ್ಯವಿದೆ. ಅದನ್ನ‌ ಪರಶೀಲಿಸಿ ಕೊಂಡು ಹಣ ಕೊಡಿ. ಅದಕ್ಕೆ ನೀವು ಒಮ್ಮೆ ಇಲ್ಲಿಗೆ ಬನ್ನಿ ಚಿನ್ನದ ನಾಣ್ಯ ಕೊಡುವೆ ಎಲ್ಲಿಬೇಕಾದರೂ ಪರೀಕ್ಷಿಸಿಕೊಳ್ಳಿ ಎಂದು ಹೇಳಿದ್ದಾನೆ.

ಇದಕ್ಕಾಗಿ ಹೊನ್ನಾಳಿ ಬಸ್ ನಿಲ್ದಾಣಕ್ಕೆ ಬನ್ನಿ ಚಿನ್ನದ ನಾಣ್ಯ ಕೊಡುವೆ ಎಂದು ರಾಮಣ್ಣ ಹೇಳಿದ್ದಾನೆ. ಮರುದಿನವೇ ಬಾಯಣ್ಣ ಹೊನ್ನಾಳಿ ಬಸ್ ನಿಲ್ದಾಣಕ್ಕೆ ಬಂದಿದ್ದು ಆತನಿಗೆ ಚಿನ್ನದ  ನಾಣ್ಯವನ್ನ ರಾಮಣ್ಣ‌ ನೀಡಿದ್ದಾನೆ. ಇದನ್ನ ತೆಗೆದುಕೊಂಡು ಬಾಯಣ್ಣ ದೊಡ್ಡಬಳ್ಳಾಪುರದಲ್ಲಿ ಪರಿಶೀಲಿಸಿದಾಗ ನಾಣ್ಯ ಒರ್ಜಿನಲ್ ಬಂಗಾರ ಎಂದು ತಿಳಿದು ಬಂದಿದೆ.
ಮರುದಿನ ರಾಮಣ್ಣ ಕರೆ ಮಾಡಿದಾಗ ಸರಿಯಾಗಿದೆ ಇಂತಹದ್ದೇ ನಾಣ್ಯ ಕೊಡಬೇಕು ಎಂದಿದ್ದಾರೆ ಬಾಯಣ್ಣ.  ನಿಮಗೆ ಎಷ್ಟು ಹಣದ ನಾಣ್ಯ ಬೇಕು ಎಂದಾಗ 4 ಲಕ್ಷ ದ ನಾಣ್ಯ ಬೇಕು ಎಂದಿದ್ದಾರೆ ಬಾಯಣ್ಣನಿಗೆ 10 ಸಾವಿರ ಕಮಿಷನ್ ಹಣದ ಜೊತೆ 4,10,000 ರೂ‌ ತರಲು ಸೂಚಿಸಿದ್ದಾನೆ.

ಬಾಯಣ್ಣ ಮಗನೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದು ಅವರಿಗೆ ಖಾಸಗಿ ಬಸ್ ಮೂಲಕ ಆಯನೂರು ಬಳಿಗೆ ಬರಲು ಹೇಳಿ ಅಲ್ಲಿ ರಾಮಣ್ಣ ಮತ್ತೋರ್ವನೊಂದಿಗೆ ಪ್ರತ್ಯಕ್ಷನಾಗಿ ಚಿನ್ನದ ಗಂಟನ್ನ ಇಟ್ಟಿದ್ದಾನೆ. ಬೇಗ ಹಣಕೊಡಿ ಎಂದು ಟವೆಲ್ ಹಾಸಿದ್ದಾನೆ. ನಾಲ್ಕು ಲಕ್ಷದ 10 ಸಾವಿರ ರೂ. ಹಣ ಕೊಡುತ್ತಿದ್ದಂತೆ ಶಿವಮೊಗ್ಗಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ ಎಂದು ಹೇಳಿ ರಾಮಣ್ಣ ಮತ್ತು ಇನ್ನೋರ್ವ ಪರಾರಿಯಾಗಿದ್ದಾರೆ.

ಅನುಮಾನ ಪಟ್ಟ ಬಾಯಣ್ಣ‌ಕಲ್ಲಿಗೆ ಉಜ್ಜಿ ನೋಡಿದಾಗ ಎಲ್ಲಾ ನಾಣ್ಯಗಳು ನಕಲಿ ಎಂದು ತಿಳಿದು ಬಂದಿದೆ. ಬಾಯಣ್ಣನ ಮಗ ಓಡಿ ಹೋಗಿ ಹುಡುಕಿದರು ರಾಮಣ್ಣನ ಗ್ಯಾಂಗ್ ಎಸ್ಕೇಪ್ ಆಗಿದೆ. ಬಾಯಣ್ಣ ಕರೆ ಮಾಡಿ ನಾಣ್ಯಗಳು ನಕಲಿ ಎಂದಾಗ ಶಿವಮೊಗ್ಗಕ್ಕೆ ಬರಲು ಹೇಳಿದ್ಸಾನೆ. ಶಿವಮೊಗ್ಗಕ್ಕೆ ಬಂದ ಬಾಯಣ್ಣ ಮತ್ತೆ ಕರೆ ಮಾಡಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದೆ.

ಕುಂಸಿ ಠಾಣೆಗೆ ಬಂದು ಬಾಯಣ್ಣ ವಂಚನೆಯ ಘಟನೆಯನ್ನ  ದೂರು ದಾಖಲಿಸಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…

12 hours ago

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…

12 hours ago

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…

13 hours ago

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್ ಕತ್ತರಿಸಬೇಕೋ?

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…

15 hours ago

ಈದ್ ಮಿಲಾದ್ ಹಬ್ಬ ಶಾಂತಿಯುತ ಆಚರಣೆಗೆ ಪೊಲೀಸ್ ಸೂಚನೆ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ

ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…

19 hours ago

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…

19 hours ago