ಗುರುಶಕ್ತಿ ಸಾರಿಗೆ ಸಂಸ್ಥೆ ಮಾಲೀಕರುಗಳಿಗೆ ನೌಕರರಿಂದ ಸನ್ಮಾನ
ಮಲೆನಾಡ ಭಾಗದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕಳೆದ 34 ವರ್ಷಗಳಿಂದ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿ ನೂರಾರು ಕಾರ್ಮಿಕರಿಗೆ ಆಸರೆಯಾಗಿರುವ ಹೊಸನಗರ ತಾಲೂಕಿನ ಹೆಮ್ಮೆಯ ಗುರುಶಕ್ತಿ ಸಾರಿಗೆ ಸಂಸ್ಥೆಯ ಮಾಲೀಕರುಗಳಿಗೆ ದೀಪಾವಳಿ ಹಬ್ಬದ ಅಂಗವಾಗಿ ಕಾರ್ಮಿಕರು ಸನ್ಮಾನಿಸಿ ಗೌರವಿಸಿದ್ದಾರೆ.
ಹೌದು ಸಾರಿಗೆ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಜನತೆಯ ಜೀವನದ ಭಾಗವಾಗಿರುವ ಗುರುಶಕ್ತಿ ಸಾರಿಗೆ ಸಂಸ್ಥೆ ಮಾರಣಾಂತಿಕ ಕೋವಿಡ್ , ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟದಿಂದ ನಲುಗಿದ್ದರು ಅವನತಿಯತ್ತ ಸಾಗಿದ್ದರು ಈ ಸಂಸ್ಥೆ ಮಾಲೀಕರ ಶ್ರಮದಿಂದ ನೂರಾರು ಕಾರ್ಮಿಕರಿಗೆ ಆಸರೆಯಾಗಿ ನಿಂತಿದೆ.
ದೀಪಾವಳಿ ಹಬ್ಬದ ಅಂಗವಾಗಿ ಶನಿವಾರ ಸಂಸ್ಥೆಯ ವಾಹನಗಳಿಗೆ ಪೂಜೆ ಸಲ್ಲಿಸಿದ ಸಂಸ್ಥೆಯ ನೌಕರರು ಕಾರಣಗಿರಿಯಲ್ಲಿರುವ ಗುರುಶಕ್ತಿ ಸಾರಿಗೆ ಸಂಸ್ಥೆ ಮಾಲೀಕರ ಮನೆಗೆ ತೆರಳಿ ಮಾಲೀಕರುಗಳಾದ ನಾಗರಾಜರಾವ್,ಪ್ರಭಾಕರ ರಾವ್ , ಪ್ರಕಾಶ ರಾವ್, ವಿದ್ಯಾಧರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ್ದಾರೆ. ಇದು ಈ ಸಂಸ್ಥೆಯ ಮಾಲೀಕರು ಹಾಗೂ ಕಾರ್ಮಿಕರ ನಡುವೆ ಇರುವಂತಹ ಗಟ್ಟಿ ಸಂಬಂಧವನ್ನು ಪ್ರಚುರಪಡಿಸಿದೆ.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗುರುಶಕ್ತಿ ಸಾರಿಗೆ ಸಂಸ್ಥೆಯ ಮಾಲೀಕರು ಹಾಗೂ ಶಿಮೂಲ್ ಅಧ್ಯಕ್ಷ ವಿದ್ಯಾದರ್ 1990 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯನ್ನು ನೌಕರರು ಹಾಗೂ ಪ್ರಯಾಣಿಕರು ಅತ್ಯಂತ ಪ್ರೀತಿಯಿಂದ ಬೆಳೆಸಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಸ್ಥೆಯನ್ನಾಗಿಸಿದ್ದಾರೆ. ಒಂದು ಸಂಸ್ಥೆ ಯಶಸ್ವಿಯಾಗಬೇಕಾದಲ್ಲಿ ನೌಕರರು ಹಾಗೂ ಸಾಹುಕಾರರ ನಡುವೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ ಅದನ್ನು ನೀವು ಸಾಬೀತುಪಡಿಸಿದ್ದೀರಿ ಇಂತಹ ಸಂಸ್ಥೆಯನ್ನು ಮುನ್ನಡೆಸುತ್ತಿರುವದಕ್ಕೆ ನನಗೆ ಹೆಮ್ಮೆ ಇದೆ ಎಂದರು.
ಪ್ರಯಾಣಿಕರೊಂದಿಗೆ ನಾವು ಸೌಮ್ಯವಾಗಿ ನಡೆದುಕೊಳ್ಳುವುದರಿಂದ ಅವರ ಹಾರೈಕೆಯಿಂದ ಸಂಸ್ಥೆ ಇನ್ನಷ್ಟು ಅಭಿವೃದ್ದಿಯಾಗುತ್ತದೆ ಆ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಮೇಶ್ ಶೆಟ್ಟಿ , ರಫಿಕ್ ನೊಣಬೂರು, ವೀರೇಂದ್ರ . ಗಣಪತಿ.ಶಿವಪ್ರಕಾಶ್. ನಾಗರಾಜ. ಸಂತೋಷ್ ಅನೀಸ್ , ಅಕ್ರಮ್,ಸಿರಾಜ್, ವಿಜಯ, ರಾಮಪ್ಪ , ದಿನೇಶ್, ಶಶಿಕುಮಾರ್,ಶಿವಕುಮಾರ್ ಇನ್ನಿತರರಿದ್ದರು
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…