12 ವರ್ಷದ ಹಿಂದೆ ಕಾಣೆಯಾದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿಯಿಂದ ಠಾಣೆಯಲ್ಲಿ ದೂರು.!
ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಣಜಿ ಗ್ರಾಮದ ಹೊಸ ಮನೆಯ ವಾಸಿ ರತ್ನಮ್ಮ ಎಂಬುವವರು ಹೊಸನಗರ ಆರಕ್ಷಕ ಠಾಣೆಗೆ ದೂರು 12 ವರ್ಷದ ಹಿಂದೆ ಮನೆ ಬಿಟ್ಟು ಹೋಗಿರುವ ತನ್ನ ಪತಿ 69 ವರ್ಷದ ಶಿವಪ್ಪಗೌಡ ಎಂಬುವರನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ.
ಮಾನಸಿಕವಾಗಿ ದುರ್ಬಲವಾಗಿದ ಕುಡಿತದ ಚಟವನ್ನು ಹೊಂದಿದ್ದ ಶಿವಪ್ಪಗೌಡ ಈ ಹಿಂದೆ ಮೂರ್ ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದು ಕೆಲವೊಮ್ಮೆ ಎರಡು ಮೂರು ವರ್ಷಗಳ ನಂತರ ಹಿಂತಿರುಗುತ್ತಿದ್ದು ಈ ಬಾರಿ 2012ರ ಜನವರಿ 20ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಹೋದವರು ಈವರೆಗೂ ಬಾರದ ಕಾರಣ ಅವರನ್ನು ಹುಡುಕಿ ಕೊಡುವಂತೆ ಪತ್ನಿ ರತ್ನಮ್ಮ ಹೊಸನಗರ ಆರಕ್ಷಕ ಠಾಣೆಗೆ ದೂರು ನೀಡಿದ್ದು ಶಿವಪ್ಪಗೌಡರು ಮನೆ ಬಿಟ್ಟು ಹೋಗುವಾಗ 57 ವರ್ಷ ವಯಸ್ಸಾಗಿದ್ದು ಈಗ ಅವರ ವಯಸ್ಸು 69 ಆಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದು ಅವರೇ ಈ ಹಿಂದೆ 3-4 ಬಾರಿ ಮನೆ ಬಿಟ್ಟು ಹೋದವರು ವಾಪಸ್ ಬಂದಿದ್ದು ಈ ಬಾರಿ 12 ವರ್ಷ ಆದರೂ ಮನೆಗೆ ವಾಪಸ್ ಬಾರದ ಕಾರಣ ತಿಳಿಸಿದ್ದಾರೆ.
ಹೊಸನಗರ ಆರಕ್ಷಕ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ದಾರೆ
ಚಾಲಕನ ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ - ತಪ್ಪಿದ ಭಾರಿ ಅನಾಹುತ Private bus…
ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ - ಮಳೆಯಲ್ಲೂ ಮುಂದುವರಿದ ಪಾದಯಾತ್ರೆ MLA Belur Gopalakrishna and RM Manjunath…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…