ಶಿವಮೊಗ್ಗ : ಯುವತಿಯನ್ನ ಅಡ್ಡ ಹಾಕಿ ಹಣಕೊಡ್ತೀನಿ ಆಸೆ ಪೂರೈಸುವಂತೆ ಕರೆದು ಅಸಭ್ಯವಾಗಿ ನಡೆದುಕೊಂಡ ಯುವಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹೋದರನಿಗೆ ಬುದ್ದಿ ಹೇಳು ಎಂದು ಹೇಳಿದ ಗ್ರಾಮಸ್ಥರಿಗೆ ಬೈದು ಅನುಚಿತವಾಗಿ ನಡೆದುಕೊಂಡ ಅಣ್ಣನ ವಿರುದ್ಧವೂ ದೂರು ದಾಖಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿರುವ 19 ವರ್ಷದ ಯುವತಿಗೆ ಭದ್ರಾವತಿಯ ಚಂದನಕೆರೆಯ ಯುವಕನೊಬ್ಬ ಹೋದ ಕಡೆಯಲ್ಲೆಲ್ಲ ಬೆನ್ನುಹತ್ತಿ ಹಣ ಕೊಡುತ್ತೇನೆ ಆಸೆ ಪೂರೈಸು ಎಂದು ದುಂಬಾಲು ಬಿದ್ದಿದ್ದನು. ಈತನನ್ನ ಗಮನಿಸಿದೆ ಯುವತಿ ಕೆಲಸಕ್ಕೆ ಹೋಗುತ್ತಿದ್ದಳು.
ನ.3 ರಂದು ಊಟ ಮುಗಿಸಿಕೊಂಡು ವಾಪಾಸ್ ಕೆಲಸಕ್ಕೆ ಹೋಗುವಾಗ ಯುವಕ ರಸ್ತೆ ಅಡ್ಡಗಟ್ಟಿ 2000 ರೂ. ಕೊಡುತ್ತೇನೆ ಬಾ ಆಸೆ ಪೂರೈಸು ಎಂದು ವೇಲುನಿಂದ ಕೈಕಾಲು ಕಟ್ಟಿದ್ದಾನೆ ಹಾಗೂ ಆತನ ಬಳಿಯಿದ್ದ ಟವಲನ್ನು ಬಾಯಿಗೆ ತುರಕಿ ಆಕೆಯನ್ನ ಎತ್ತಿಕೊಂಡು ತೋಟದಲ್ಲಿ ಹೋಗಲು ಯತ್ನಿಸಿದ್ದಾನೆ.
ಆತನಿಂದ ತಪ್ಪಿಸಿಕೊಂಡ ಯುವತಿ ಪಾರಾಗಿದ್ದಾಳೆ. ಇವತ್ತು ಬಜಾವ್ ಆಗಿದ್ದೀಯ ಇನ್ನೊಮ್ಮೆ ಸಿಕ್ಕರೆ ಬಲತ್ಕರಿಸುವೆ. ಈ ವಿಷಯವನ್ನ ಬೇರೆಯವರಿಗೆ ಹೇಳಿದರೆ ನಿನ್ನ ಜೀವ ಸಹಿತ ಬಿಡೊಲ್ಲ ಎಂದು ಬೆದರಿಕೆಹಾಕಿದ್ದಾನೆ.
ಇದರಿಂದ ಭಯವಾಗಿ ಈ ವಿಷಯವನ್ನು ಯಾರಿಗೂ ಹೇಳದ ಯುವತಿ. ನ.05 ರಂದು ಲ ರಾತ್ರಿ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಯುವತಿಯ ಕೇರಿಯವರಿಗೆಲ್ಲಾ ವಿಷಯ ತಿಳಿದು ರಾತ್ರಿ ಸುಮಾರು 07-30 ರ ಸಮಯದಲ್ಲಿ ಎರಿಯಾದ ನಿವಾಸಿಗಳ ಜೊತೆ ಯುವಕನ ಮನೆಗೆ ತೆರಳಿ ಅಣ್ಣನಿಗೆ ವಿಷಯ ತಿಳಿಸಿ ಬುದ್ದಿ ಹೇಳಲು ಸೂಚಿಸಿದ್ದಾರೆ.
ನಿವಾಸಿಗಳ ಮಾತನ್ನ ನಿರ್ಲಕ್ಷಿಸಿದ ಯುವಕನ ಅಣ್ಣ ನನ್ನ ತಮ್ಮ ಯಾಕೆ ಹಾಗೆ ಮಾಡುತ್ತಾನೆ. ನೀವೇ ಸರಿಯಿಲ್ಲ ಹಾಗಾಗಿ ಅದೇನು ಮಾಡಿಕೊಳ್ತೀರೋ ಮಾಡಿಕೊಳ್ಳಿ ಎಂದು ಆರೋಪಿಸಿದ್ದಾನೆ. ಈ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಪ್ಪನ್ಪೇಟೆ ಪೊಲೀಸ್ ಜೀಪ್ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…
ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…
ಹಿಟ್ ಅಂಡ್ ರನ್; ಬೈಕ್ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು Young woman Archana Jain dies…
ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…
ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್ಪೇಟೆಯ ಅಪೇಕ್ಷಾಗೆ ರನ್ನರ್ಅಪ್ ಸಾಧನೆ Ripponpete's Apeksha K. secured second place and runner-up…
ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್ Agumbe PSI Shivanagowda Patil joined…