ರಿಪ್ಪನ್ ಪೇಟೆ :ಒಂದೇ ಕುಲ, ಒಂದೇ ಧರ್ಮ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಯಿಂದ ಬಲಯುತರಾಗಿ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ ಶ್ರೀ ನಾರಾಯಣ ಗುರುಗಳ ಸಂದೇಶವನು ಪಾಲಿಸೋಣ, ಆಗ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ, ಎಂದು ಹೊಸನಗರ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಮಾಸ್ತಿಕಟ್ಟೆ ವಾಸಪ್ಪ ಹೇಳಿದರು.
ಪಟ್ಟಣದ ಆಶ್ರೀತಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆರಹಳ್ಳಿ ಹೋಬಳಿ ಮಟ್ಟದ ಶ್ರೀ ನಾರಾಯಣ ಗುರು ವಿಚಾರಣ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈಗಿನ ಪರಿಸ್ಥಿತಿಯಲ್ಲಿ ಸಂಘಟನೆಯಿಂದ ಮಾತ್ರ ಸಮಾಜವನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.
ರಾಜ್ಯ ಶ್ರೀ ನಾರಾಯಣಗುರು ವಿಚಾರವೇದಿಕೆ ಸಂಘಟನೆ ರಾಜ್ಯಾಧ್ಯಕ್ಷ ರಾದ ಸತ್ಯಜಿತ್ ಸುರತ್ಕಲ್ ರವರ ನೇತೃತ್ವದಲ್ಲಿ 26 ಉಪ ಪಂಗಡಗಳನ್ನು ಒಳಗೊಂಡಂತೆ ಈಡಿಗ ಸಮುದಾಯದ ಅಭಿವೃದ್ಧಿಗೆ ಹೋರಾಡುತ್ತಿರುವ ಸಂಘಟನೆಯಾಗಿದ್ದು, ಈಗಾಗಲೇ ಅನೇಕ ಹೋರಾಟಗಳ ಮೂಲಕ ಸರ್ಕಾರ ನಮ್ಮ ಸಮಾಜದ ಕಡೆ ಗಮನ ಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೆರೆ ಹಳ್ಳಿ ಹೋಬಳಿ ವ್ಯಾಪ್ತಿಯ, ಬೆಳ್ಳೂರು, ಕೆಂಚನಾಲ, ಬಾಳೂರು, ಹರತಾಳು. ಅರಸಾಳು, ಹಾ ರೋಹಿತ್ತಲು, ಬಸವಪುರ ಹರಿದ್ರಾವತಿ, ಪುರಪ್ಪೆ ಮನೆ ಗ್ರಾಮ ಪಂಚಾಯತ್ ಹಾಗೂ ರಿಪ್ಪನ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾಯಣ ಗುರುಗಳ ಭಕ್ತರು ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಂಘಟನೆಯ ತಾಲೂಕ್ ಘಟಕದ ಪದಾಧಿಕಾರಿಗಳು ಆಗಮಿಸಿದ್ದರು.
ಈ ಸಭೆಯಲ್ಲಿ ಬಿ ಪಿ ರಾಮಚಂದ್ರ, ಕಲಗೋಡ್ ರತ್ನಾಕರ್, ಸುಮತಿ ಆರ್ ಪೂಜಾರ್,ಎನ್ ಸತೀಶ್ , ಮುಡುಬ ರಾಘವೇಂದ್ರ,ಸುಧೀಂದ್ರ ಪೂಜಾರಿ, ಹೊದಲ ಶಿವು,ಸಂತೋಷ್ ಆಶ್ರೀತಾ,ಜಿ ಆರ್ ಗೋಪಾಲಕೃಷ್ಣ ,ಮಳವಳ್ಳಿ ಮಂಜುನಾಥ್,ಮುರಳೀಧರ ಜಿ.ಸಂತೋಷ, ವೆಂಕಟೇಶ್ ನಾಯ್ಕ್, ನಗರ ನಿತಿನ್, ಗೀತಾ ಲಿಂಗಪ್ಪ, ನಾಗೇಶ್ ಇನ್ನಿತರರು ಇದ್ದರು.ಸೀತಮ್ಮ ಪ್ರಾರ್ಥಿಸಿ , ಅಶೋಕ್ ಕೆ. ಟಿ ನಿರೂಪಿಸಿದರು.
ಈ ಸಂಧರ್ಭದಲ್ಲಿ ಕೆರೆಹಳ್ಳಿ ಹೋಬಳಿಯ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಪಟ್ಟಿ.
ಗೌರವಾಧ್ಯಕ್ಷರು :
ಸತೀಶ್ ಎನ್ ರಿಪ್ಪನ್ ಪೇಟೆ
ಅಧ್ಯಕ್ಷರು:
ಸಂತೋಷ್. ಅಶ್ರಿತ ಎಂಟರ್ಪ್ರೈಸಸ್
ಉಪಾಧ್ಯಕ್ಷರು :
ಸುಧೀಂದ್ರ ಪೂಜಾರಿ,
ಯೋಗೇಂದ್ರ ಅರಸಾಳು,
ಅಶ್ವಿನಿ ಸತೀಶ್,
ವೀಣಾ ದ್ವಾರಕೇಶ್,
ಕೆ ಜಿ ಬಸಪ್ಪ ಹೆಬ್ಬುರುಳಿ,
ಪ್ರಧಾನ ಕಾರ್ಯದರ್ಶಿ :
ಅರುಣ್ ಕಟ್ಟೆ ಬೆಳ್ಳೂರು
ಹೋಬಳಿ ಸಂಚಾಲಕ:
ನಾರಿ ರವಿ
ಸಂಘಟನಾ ಕಾರ್ಯದರ್ಶಿಗಳು:
ದೇವರಾಜ್ ಅತ್ತಿಗಾರ್,
ಕಟ್ಟೆ ನಾಗಪ್ಪ,
ಸೀತಮ್ಮ,
ಸೋಮಶೇಖರ್ ಅರಗೋಡಿ,
ಶಿವಪ್ಪ ಅವಡೆ,
ರಮೇಶ್ ಹೆಬ್ಬಳ್ಳಿ,
ನಿರ್ದೇಶಕರು :
ಶರತ್ ಹರತಾಳು
ಶಶಿ ಕುಮಾರ್ ಎಂ,ಹರತಾಳು
ಅರುಣ ಹರಿದ್ರಾವತಿ,
ಉಮಾ ನಾರಾಯಣ,
ಮಂಜುನಾಥ್ ಕಳಸೆ,
ನಾರಾಯಣ ಹಾರೋಹಿತ್ಲು,
ಗಿರಿಜಾ ಮಂಜನಾಯ್ಕ,
ವಿನಯ್,
ಶೀಲಾ ಗಂಗನಾಯ್ಕ,
ನಾರಾಯಣ ಹೀಲಗೊಡು,
ತಿಮ್ಮಪ್ಪ ಬರುವೆ,
ಸುದೀರ್ ಪಿ,
ವೈ ಜೆ ಕೃಷ್ಣ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್