ರಿಪ್ಪನ್ಪೇಟೆ;-ಚುನಾವಣೆಯಲ್ಲಿ ಮತ ಕೇಳಲು
ಮಾತ್ರ ಗ್ರಾಮಕ್ಕೆ ಬರುತ್ತಾರೆ ಅದರೆ ಇಂತಹ
ಸಮಸ್ಯೆಗಳು ಉದ್ಭವಿಸಿದರೆ ಯಾವ
ಜನಪ್ರತಿನಿಧಿಗಳು ಇತ್ತ ತಲೆ ಸಹಹಾಕುವುದಿಲ್ಲ
ಇಲ್ಲಿನ ಶಾಸಕರು ಕಳೆದ ನಾಲ್ಕುವರೆ ವರ್ಷದಲ್ಲಿ
ಮಾದಾಪುರಕ್ಕೆ ಭೇಟಿ ನೀಡದೆ ಜನರ ಸಮಸ್ಯೆಗೆ
ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಮಾಜಿ
ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ
ಗ್ರಾಮಸ್ಥರು ತಮ್ಮ ಅಕ್ರೋಶವನ್ನು
ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಅಕಾಲಿಕವಾಗಿ ಭಾರಿ ಮಳೆ
ಸುರಿದ ಪರಿಣಾಮದಿಂದಾಗಿ ತುಪ್ಪೂರು ತಟ್ಟೆಕೆರೆ
ಕೋಡಿ ಒಡೆದು ಚರಂಡಿಗಳಲಿಲ್ಲದೆ
ಮಾದಾಪುರದೊಳಗೆ ನೀರು ನುಗ್ಗಿ
ಮನೆಯೊಳಗೆಲ್ಲಾ ನೀರೋ
ನೀರು ಜಮೀನುಗಳಲ್ಲಾ
ಜಲಾವೃತ್ತಗೊಂಡು ಭತ್ತದ ನಾಟಿ
ಕೊಚ್ಚಿಹೋಗಿದ್ದು ರೈತರು ಕಂಗಲಾಗಿದ್ದಾರೆ.
ರಿಪ್ಪನ್ಪೇಟೆ-ಕೆಂಚನಾಲ-ಅಲುವಳ್ಳಿ-ಕಮದೂರು-
ಮಾದಾಪುರ-ಲಕ್ಕವಳ್ಳಿ-ಕೆರೆಹಿತ್ತಲು-ಗಿಳಾಲಗುಂಡಿ
ಅನಂದಪುರ ಗ್ರಾಮಾಂತರ ಸಾರಿಗೆ ವ್ಯವಸ್ಥೆ
ಇಲ್ಲದೆ ರೈತರು ಶಾಲಾ ಕಾಲೇಜ್ ವಿದ್ಯಾರ್ಥಿಗಳು
ಪಡಬಾರದ ಕಷ್ಟು
ಅನುಭವಿಸುವಂತಾಗಿದೆ.ಅದರೂ ಕ್ಷೇತ್ರದ
ಶಾಸಕರು ಇತ್ತ ಗಮನಹರಿಸದೇ ಇರುವುದು
ರೈತನಾಗರೀಕರ ಅಕ್ರೊಶಕ್ಕೆ ಕಾರಣವಾಗಿದೆ.
ಗ್ರಾಮೀಣ ಪ್ರದೇಶ ಜನಜೀವನ
ಅಸ್ತವ್ಯಸ್ತಗೊಳ್ಳುವಂತಾಯಿತು.ಮಳೆ ಬಿಟ್ಟರು
ನೀರು ರಸ್ತೆ ಮೇಲೆ ನಿರಂತರವಾಗಿ
ಹರಿಯುತ್ತಿದ್ದು ಕೆಂಚನಾಲ ಸ್ಥಳೀಯಾಡಳಿತ
ತಾತ್ಕಾಲಿಕವಾಗಿ ಜೆಸಿಬಿ ಯಂತ್ರದ ಮೂಲಕ ಚರಂಡಿ
ಸ್ವಚ್ಚಗೊಳಿಸಿ ತುಪ್ಪೂರಿನ ತಟ್ಟೆಕೆರೆ ನೀರು
ಗ್ರಾಮದೊಳಗೆ ನುಗ್ಗದಂತೆ ತಾತ್ಕಾಲಿಕವಾಗಿ
ತುರ್ತು ಪರಿಹಾರ ಕಲ್ಪಿಸಿದ್ದಾರೆ.ಅದರೆ ಇದು
ಮುಂದಿನ ದಿನಗಳಲ್ಲಿಯೂ ಹೀಗೆ ಅದರೆ
ನಮ್ಮಗಳ ಗತಿಏನು ಎಂಬ ಪ್ರಶ್ನೆ
ಕಾಡುವಂತಾಗಿದ್ದು ಇನ್ನಾದರೂ ಕ್ಷೇತ್ರದ
ಶಾಸಕರು ಈ ಅವ್ಯವಸ್ಥೆಗೆ ಶಾಶ್ವತ ಪರಿಹಾರ
ಕಲ್ಪಿಸುವಂತೆ ಮಾಜಿ ಶಾಸಕರ ಮೂಲಕ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಕೆಂಚನಾಲ
ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ
ಷರೀಪ್,ಅರಸಾಳು
ಗ್ರಾ.ಪಂ.ಅದ್ಯಕ್ಷ.ಉಮಾಕರ,ಕಾಂಗ್ರೇಸ್ ಮುಖಂಡರಾದ
ಹೆಚ್.ವಿ.ಈಶ್ವರಪ್ಪಗೌಡ,ಆಸೀಫ಼್ ಭಾಷಾಸಾಬ್ ,ಎ.ಆರ್.ಮಂಜುನಾಥ
ಮಾದಾಪುರ,ಕಾಂತರಾಜ್,ಶಿವು
ವಡಾಹೊಸಳ್ಳಿ,ಸೋಮಶೇಖರ ಅಭಿಷೇಕ್,ಗ್ರಾ.ಪಂ.ಸದಸ್ಯೆ ರಮ್ಯ, ಕೃಷ,್ಣ,ಮಾದಾಪರ ,ಲೋಕಪ್ಪ,ಉಂಡಗೋಡು ನಾಗಪ್ಪ, ವಿಜಯಣ್ಣ,ಇಮ್ಮಾಂಸಾಬ್,ಖಲೀಲ್ ಷರೀಫ್
ಇನ್ನಿತರ ಕೆಂಚನಾಲ ಗ್ರಾಮಸ್ಥರು ಹಾಜರಿದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್