ಮಗುವಿಗೆ ಎದೆಹಾಲು ಕಡಿಮೆಯಾಗಿದ್ದಕ್ಕೆ ಮನನೊಂದು ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು|crime news
ಮಗುವಿಗೆ ಹಾಲುಣಿಸಲು ಎದೆಹಾಲು ಕಡಿಮೆಯಾಗಿದೆ ಎಂದು ಮನನೊಂದು ತನ್ನ ಪುಟ್ಟ ಕಂದಮ್ಮನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯ ಶಾಂತಾ(28) ಅವರನ್ನು ಸಮೀಪದ ಜಡ್ಡೆಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಯ ನಂತ್ರ ಆಕೆ ತವರು ಮನೆಯಾದಂತ ಕುಪ್ಪಗಡ್ಡೆಗೆ ಬಂದಿದ್ದರು. ಹೆರಿಗೆಯ ಬಳಿಕ ಶಾಂತಾಗೆ ಎದೆಹಾಲು ಬರುತ್ತಿರಲಿಲ್ಲ. ಬಂದರೂ ಒಂದೂವರೆ ತಿಂಗಳ ಮಗುವಿಗೆ ಸಾಕಾಗುವಷ್ಟು ಆಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ…

