ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಯುವತಿಗೆ ಸನ್ಮಾನಿಸಿದ ವೀರಶೈವ-ಲಿಂಗಾಯತ ಪರಿಷತ್
ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕ ಪಡೆದು ಅದ್ವಿತೀಯ ಸಾಧನೆಗೈದ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿ ಗ್ರಾಮದ ರೈತ ಕುಟುಂಬದ ಕುಮಾರಿ ಸ್ಪಂದನ ಷಣ್ಮುಖಪ್ಪನವರಿಗೆ ಹೊಸನಗರ ತಾಲ್ಲೂಕ್ ವೀರಶೈವ-ಲಿಂಗಾಯಿತ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಭಾನುವಾರ ವೀರಶೈವ – ಲಿಂಗಾಯತ ಪರಿಷತ್ ತಾಲೂಕ್ ಅಧ್ಯಕ್ಷರಾದ ಆನಂದ್ ಮೆಣಸೆ ರವರು ಹಾಗೂ ಪದಾಧಿಕಾರಿಗಳು ಸ್ಪಂದನ ಷಣ್ಮುಖಪ್ಪ ರವರ ಮನೆಗೆ ತೆರಳಿ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೊಸನಗರ ತಾ.ಪಂ.ಮಾಜಿ ಅಧ್ಯಕ್ಷರಾದ…


