ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್ ಬಳಕೆ ಆರೋಪ, FSSAI ಕಠಿಣ ಕ್ರಮ – ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!?? ಈ ಸುದ್ದಿ ನೋಡಿ
FSSAI has reportedly acted against alcoholic beverages allegedly made using artificial rum and whisky flavours, following inspections of samples from popular brands in India.
ನವದೆಹಲಿ, ಆ.8: ತಟಸ್ಥ ಆಲ್ಕೋಹಾಲ್ಗೆ ಕೃತಕ ವಿಸ್ಕಿ ಮತ್ತು ರಮ್ ಫ್ಲೇವರ್ಗಳನ್ನು ಸೇರಿಸಿ, ನೈಸರ್ಗಿಕವಾಗಿ ತಯಾರಿಸಿದ ಮದ್ಯವೆಂಬ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕ್ರಮಕ್ಕೆ ಮುಂದಾಗಿದೆ.
ಮಾರುಕಟ್ಟೆಯಿಂದ ಸಂಗ್ರಹಿಸಲಾದ ವಿವಿಧ ಮದ್ಯದ ಮಾದರಿಗಳ ಪರಿಶೀಲನೆ ವೇಳೆ ನಿಯಮಬಾಹಿರವಾಗಿ ಕೃತಕ ಫ್ಲೇವರ್ಗಳನ್ನು ಬಳಸಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಓಲ್ಡ್ ಮಂಕ್, ಮೆಕ್ಡೊನಾಲ್ಡ್, ಬ್ಯಾಗ್ಪೈಪರ್ ಹಾಗೂ ರಾಯಲ್ ಚಾಲೆಂಜ್ ಸೇರಿದಂತೆ ಕೆಲವು ಪ್ರಮುಖ ಬ್ರ್ಯಾಂಡ್ಗಳ ಆಯ್ದ ಮಾದರಿಗಳಲ್ಲೂ ಇಂತಹ ಅಂಶಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ರಮ್ ಮತ್ತು ವಿಸ್ಕಿಯ ಗುಣಮಟ್ಟ ಹಾಗೂ ಸುವಾಸನೆ ಅಭಿವೃದ್ಧಿಯಾಗಲು ಮರದ ಪೀಪಾಯಿಗಳಲ್ಲಿ ನಿರ್ದಿಷ್ಟ ಅವಧಿಗೆ ಪಕ್ವಗೊಳಿಸುವ (Aging) ಪ್ರಕ್ರಿಯೆ ಅಗತ್ಯವಾಗುತ್ತದೆ. ಆದರೆ, ಈ ಪ್ರಕ್ರಿಯೆಗೆ ಬೇಕಾಗುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾಮಾನ್ಯ ಆಲ್ಕೋಹಾಲ್ಗೆ ಕೃತಕ ಫ್ಲೇವರ್ಗಳನ್ನು ಸೇರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪರಿಶೀಲನೆಯ ವೇಳೆ 7 ವರ್ಷ ಹಳೆಯದು ಎಂದು ಪ್ರಚಾರ ಮಾಡಲಾಗುತ್ತಿದ್ದ ಓಲ್ಡ್ ಮಂಕ್ ರಮ್ನ ಮಾದರಿಯೊಂದರಲ್ಲಿ ಅತ್ಯಲ್ಪ ಪ್ರಮಾಣದ ನೈಜವಾಗಿ ಪಕ್ವಗೊಂಡ ರಮ್ ಇದ್ದು, ಉಳಿದ ಭಾಗದಲ್ಲಿ ಸಾಮಾನ್ಯ ಆಲ್ಕೋಹಾಲ್ ಹಾಗೂ ಕೃತಕ ಫ್ಲೇವರ್ಗಳ ಬಳಕೆ ಕಂಡುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇಂತಹ ರೀತಿಯಲ್ಲಿ ಉತ್ಪನ್ನದ ನೈಜ ಸ್ವರೂಪ ಮತ್ತು ಗುಣಮಟ್ಟದ ಕುರಿತು ಗ್ರಾಹಕರನ್ನು ದಾರಿತಪ್ಪಿಸುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಯಮಬಾಹಿರ ಫ್ಲೇವರ್ಗಳ ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಸಂಸ್ಥೆಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ - ಮಳೆಯಲ್ಲೂ ಮುಂದುವರಿದ ಪಾದಯಾತ್ರೆ MLA Belur Gopalakrishna and RM Manjunath…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…