Headlines

ವಿಧಿಯ ಕ್ರೂರ ಆಟ: ಬೈಕ್‌ನಲ್ಲಿ ಹೋಗುತ್ತಿದ್ದವನ ಮೇಲೆ ದಿಢೀರ್ ಉರುಳಿದ ಅಡಿಕೆ ಮರ, ಕಲ್ಲು ವ್ಯಾಪಾರಿ ದುರ್ಮರಣ!

ವಿಧಿಯ ಕ್ರೂರ ಆಟ: ಬೈಕ್‌ನಲ್ಲಿ ಹೋಗುತ್ತಿದ್ದವನ ಮೇಲೆ ದಿಢೀರ್ ಉರುಳಿದ ಅಡಿಕೆ ಮರ, ಕಲ್ಲು ವ್ಯಾಪಾರಿ ದುರ್ಮರಣ!

A 61-year-old stone merchant from Thirthahalli died on the spot after a falling arecanut tree struck him while he was returning home on his bike. The tragic incident occurred near Nellisara-Balagaru road.

ತೀರ್ಥಹಳ್ಳಿ: ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಕಲ್ಲು ವ್ಯಾಪಾರಿಯೊಬ್ಬರ ಮೇಲೆ ಅಡಕೆ ಮರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ–ಬಾಳಗಾರು ಸಂಪರ್ಕ ರಸ್ತೆಯಲ್ಲಿ ನಡೆದಿದೆ.

ಗಾಂಧಿನಗರ ನಿವಾಸಿ, ಕಲ್ಲು ವ್ಯಾಪಾರಿ ಮಾಯಕಣ್ಣನ್ (61) ಮೃತ ದುರ್ದೈವಿ. ಅವರು ತೀರ್ಥಹಳ್ಳಿ ಸಮೀಪದ ಕಲ್ಲತ್ತಿಯಲ್ಲಿರುವ ಮನೆಯೊಂದಕ್ಕೆ ಪೂರೈಸಿದ್ದ ಕಲ್ಲಿನ ಹಣವನ್ನು ಪಡೆದು ತಮ್ಮ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು.

ಈ ವೇಳೆ ರಸ್ತೆ ಪಕ್ಕದ ಅಬ್ಬಿಗದ್ದೆ ತೋಟದಲ್ಲಿ ಕಾರ್ಮಿಕರು ಒಣಗಿದ ಹಾಗೂ ಹಳೆಯ ಅಡಕೆ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕಡಿಯಲಾಗುತ್ತಿದ್ದ ಒಣ ಅಡಕೆ ಮರಗಳಲ್ಲಿ ಒಂದು ಏಕಾಏಕಿ ರಸ್ತೆ ಕಡೆಗೆ ಬಿದ್ದಿದೆ.

ಅದೇ ಸಮಯದಲ್ಲಿ ಅಲ್ಲಿಂದ ಬೈಕ್‌ನಲ್ಲಿ ಸಾಗುತ್ತಿದ್ದ ಮಾಯಕಣ್ಣನ್ ಅವರ ತಲೆಯ ಮೇಲೆ ಮರ ನೇರವಾಗಿ ಬಿದ್ದ ಪರಿಣಾಮ ಅವರಿಗೆ ತೀವ್ರ ತಲೆಗಾಯವಾಗಿದೆ.

ಮರ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

About The Author

Exit mobile version