ವಿಧಿಯ ಕ್ರೂರ ಆಟ: ಬೈಕ್ನಲ್ಲಿ ಹೋಗುತ್ತಿದ್ದವನ ಮೇಲೆ ದಿಢೀರ್ ಉರುಳಿದ ಅಡಿಕೆ ಮರ, ಕಲ್ಲು ವ್ಯಾಪಾರಿ ದುರ್ಮರಣ!
A 61-year-old stone merchant from Thirthahalli died on the spot after a falling arecanut tree struck him while he was returning home on his bike. The tragic incident occurred near Nellisara-Balagaru road.
ತೀರ್ಥಹಳ್ಳಿ: ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಕಲ್ಲು ವ್ಯಾಪಾರಿಯೊಬ್ಬರ ಮೇಲೆ ಅಡಕೆ ಮರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ–ಬಾಳಗಾರು ಸಂಪರ್ಕ ರಸ್ತೆಯಲ್ಲಿ ನಡೆದಿದೆ.
ಗಾಂಧಿನಗರ ನಿವಾಸಿ, ಕಲ್ಲು ವ್ಯಾಪಾರಿ ಮಾಯಕಣ್ಣನ್ (61) ಮೃತ ದುರ್ದೈವಿ. ಅವರು ತೀರ್ಥಹಳ್ಳಿ ಸಮೀಪದ ಕಲ್ಲತ್ತಿಯಲ್ಲಿರುವ ಮನೆಯೊಂದಕ್ಕೆ ಪೂರೈಸಿದ್ದ ಕಲ್ಲಿನ ಹಣವನ್ನು ಪಡೆದು ತಮ್ಮ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು.
ಈ ವೇಳೆ ರಸ್ತೆ ಪಕ್ಕದ ಅಬ್ಬಿಗದ್ದೆ ತೋಟದಲ್ಲಿ ಕಾರ್ಮಿಕರು ಒಣಗಿದ ಹಾಗೂ ಹಳೆಯ ಅಡಕೆ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕಡಿಯಲಾಗುತ್ತಿದ್ದ ಒಣ ಅಡಕೆ ಮರಗಳಲ್ಲಿ ಒಂದು ಏಕಾಏಕಿ ರಸ್ತೆ ಕಡೆಗೆ ಬಿದ್ದಿದೆ.
ಅದೇ ಸಮಯದಲ್ಲಿ ಅಲ್ಲಿಂದ ಬೈಕ್ನಲ್ಲಿ ಸಾಗುತ್ತಿದ್ದ ಮಾಯಕಣ್ಣನ್ ಅವರ ತಲೆಯ ಮೇಲೆ ಮರ ನೇರವಾಗಿ ಬಿದ್ದ ಪರಿಣಾಮ ಅವರಿಗೆ ತೀವ್ರ ತಲೆಗಾಯವಾಗಿದೆ.
ಮರ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…