Headlines

ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬ – ಹೊಸನಗರದಲ್ಲಿ  ಸಮಾಜ ಸೇವಾ ಕಾರ್ಯದೊಂದಿಗೆ ಆಚರಣೆ | ರಿಪ್ಪನ್‌ಪೇಟೆಯಲ್ಲಿ ವಿಶೇಷ ಪೂಜೆ

An article on the 64th birthday of former Karnataka minister Haratalu Halappa, highlighting his political journey, struggles, achievements, and contributions to the development of the Malnad region and Shivamogga district.

ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬ – ಹೊಸನಗರದಲ್ಲಿ  ಸಮಾಜ ಸೇವ ಕಾರ್ಯದೊಂದಿಗೆ ಆಚರಣೆ | ರಿಪ್ಪನ್‌ಪೇಟೆಯಲ್ಲಿ ವಿಶೇಷ ಪೂಜೆ

ಹೊಸನಗರ: ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರ ಹುಟ್ಟುಹಬ್ಬವನ್ನು ಬಿಜೆಪಿ ಮಂಡಲ ವಿವಿಧ ಸಮಾಜ ಸೇವ ಕಾರ್ಯಗಳೊಂದಿಗೆ ಇಂದು ಆಚರಿಸಿತು.

ಈ ನಿಮಿತ್ತ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನ ಸಲ್ಲಿಸಿದ ಅನಂತರ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಬಳಿಕ ಪಟ್ಟಣದಲ್ಲಿರುವ ಸೇವಾ ಭಾರತಿ ಗೋಶಾಲೆಗೆ ಹಾಗೂ ರಾಮಚಂದ್ರ ಪುರ ಮಠದ ಗೋಶಾಲೆ ಮೇವುಗಳನ್ನ ನೀಡಿ ಮಾಜಿ ಶಾಸಕರ ಹುಟ್ಟು ಹಬ್ಬವನ್ನು ತಾಲೂಕು ಬಿಜೆಪಿ ಮಂಡಲ ಅರ್ಥಪೂರ್ಣ ವಾಗಿ ಆಚರಿಸಿತು.

ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಕಂಚಿಗಾರ್, ಶ್ರೀಪತಿ ರಾವ್ ಏ ವಿ ಮಲ್ಲಿಕಾರ್ಜುನ್ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಲಗದ್ದೆ ಉಮೇಶ್, ಮೋಹನ್ ಮಂಡಾನಿ,ಮನೋದರ್, ಬಸವರಾಜ್, ಮನೋಜ್, ಗಣೇಶ್,ಸತೀಶ್, ಅಭಿಲಾಶ್ ಚಿಕ್ಕಮಣತಿ, ಮುಂತಾದವರು ಉಪಸ್ಥಿತರಿದ್ದರು.

ರಿಪ್ಪನ್‌ಪೇಟೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

ರಿಪ್ಪನ್‌ಪೇಟೆ : ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ರವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ಹೊಸನಗರ ತಾಲೂಕ್ ಬಿಜೆಪಿ ಅಧ್ಯಕ್ಷ ಸತೀಶ್ , ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್ ,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ , ಪ್ರಮುಖರಾದ ಮಂಜುಳಾ ಕೆ ರಾವ್ , ಎಂ ಬಿ ಮಂಜುನಾಥ್ , ಸುರೇಶ್ ಸಿಂಗ್ ,ರಾಮಚಂದ್ರ ಬಳೆಗಾರ್ , ಸುಧೀರ್ ಪಿ , ಮುರುಳಿ ಕೆರೆಹಳ್ಳಿ , ಪಿ ರಮೇಶ್ , ರಾಮಚಂದ್ರ ಕೆರೆಹಳ್ಳಿ , ರೇಖಾ ರವಿ , ದಾನಮ್ಮ  ಹಾಗೂ ಕೇತಾರ್ಜಿ ರಾವ್ ಇದ್ದರು.

About The Author

Exit mobile version