Breaking
12 Jan 2026, Mon

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ

ರಿಪ್ಪನ್ ಪೇಟೆ : ಕುಮದ್ವತಿ ಟ್ರಾಕ್ಟರ್ ಮಾಲೀಕರು, ಚಾಲಕರು ಹಾಗೂ ಗೆಳೆಯರ ಬಳಗ ಮೂಗೂಡ್ತಿ-ತಳಲೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಥಮ ವರ್ಷದ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆ ನವೆಂಬರ್ 9, 2025, ಭಾನುವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆಯೊಳಗಿನ ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಈ ಸ್ಪರ್ದೆಯ ಪ್ರವೇಶ ಶುಲ್ಕ: ₹300

ಬಹುಮಾನ ವಿವರಗಳು:

ಪ್ರಥಮ ಬಹುಮಾನ: ₹10,000 ಹಾಗೂ ಟ್ರೋಫಿ
ಪ್ರಯೋಜಕರು: ಉಮಾಕರ (ಕಾನುಗೋಡು, ಗ್ರಾ.ಪಂ. ಸದಸ್ಯ, ಅರಸಾಳು) ಹಾಗೂ ಪ್ರವೀಣ್ (ಸುಳುಕೋಡು, ಗ್ರಾ.ಪಂ. ಸದಸ್ಯ, ಹೆದ್ದಾರಿಪುರ)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ (ಶ್ರೀ ದುರ್ಗಾ ಪರಮೇಶ್ವರಿ ಎಲೆಕ್ಟ್ರಿಕಲ್ ವರ್ಕ್ಸ್ ಮತ್ತು ಕಂಟ್ರಾಕ್ಟರ್, ತಳಲೆ)

ದ್ವಿತೀಯ ಬಹುಮಾನ: ₹7,000 ಹಾಗೂ ಟ್ರೋಫಿ
ಪ್ರಯೋಜಕರು: ನವೀನ್ ಮೂಡ್ಲಿ (ಬಾಳೆಕೊಡು, ಜೆ.ಸಿ.ಬಿ ಟ್ರಾಕ್ಟರ್ ಮಾಲಿಕ)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ತೃತೀಯ ಬಹುಮಾನ: ₹4,000 ಹಾಗೂ ಟ್ರೋಫಿ
ಪ್ರಯೋಜಕರು: 24/7 ಕನ್ನಡ ಯುವ ಬಳಗ, ಕಗ್ಗಲಿಜೆಡ್ಡು
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ಚತುರ್ಥ ಬಹುಮಾನ: ₹2,000 ಹಾಗೂ ಟ್ರೋಫಿ
ಪ್ರಯೋಜಕರು: ನಾಗರಾಜ (ಗುಂಡ) ಮತ್ತು ಪ್ರದೀಪ, ಹಾರಂಬಳ್ಳಿ (ಮಾಸ್ತಮ್ಮ ಸೆಂಟ್ರಿಂಗ್ ವರ್ಕ್ಸ್)
ಪಾರಿತೋಷಕದ ಪ್ರಯೋಜಕರು: ಪ್ರಶಾಂತ್ ತಳಲೆ

ಸ್ಪರ್ಧೆಗೆ ಸಮವಸ್ತ್ರ ಕೊಡುಗೆ ನೀಡಿರುವವರು ಪತೀಶ್ (ಶ್ಯಾಮಲ ಗ್ಲಾಸ್ ಅಂಡ್ ಪ್ಲೇವುಡ್ ವರ್ಕ್ಸ್, ರಿಪ್ಪನ್ ಪೇಟೆ

ಈ ಕಾರ್ಯಕ್ರಮವು ರೈತರು ಹಾಗೂ ಟ್ರಾಕ್ಟರ್ ಚಾಲಕರ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಪರಿಣಮಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9945327990, 9448836399, 7337824480, 9686897242

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Exit mobile version